ಮಕ್ಕಾ | ಮುಸ್ಲಿಂ ಸಮುದಾಯದ ವಿವಿಧ ವರ್ಗಗಳ ನಡುವೆ ನಂಬಿಕೆಯ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಸಹ ಸಾಮರಸ್ಯ ಮತ್ತು ಸಹನೆಯನ್ನು ಎತ್ತಿಹಿಡಿಯಬೇಕು ಎಂದು ಎಸ್ ವೈಎಸ್ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮರ್ಕಝ್ ನಾಲೆಡ್ಜ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಡಾ. ಅಬ್ದುಲ್ ಹಕೀಂ ಅಝ್ಹರಿ ಪ್ರಸ್ತಾಪಿಸಿದ್ದಾರೆ.
ಎರಡು ಪವಿತ್ರ ಮಸೀದಿಗಳ ಪಾಲಕ, ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಝೀಝ್ ಆಲ್ ಸಊದ್ ಅವರ ಮೇಲ್ನೋಟದಲ್ಲಿ “ಇಸ್ಲಾಮಿಕ್ ಪಂಗಡಗಳ ನಡುವೆ ಸೇತುವೆಗಳ ನಿರ್ಮಾಣ” ಎಂಬ ಘೋಷವಾಕ್ಯದಲ್ಲಿ ರಾಬಿತ್ವತುಲ್ ಆಲಮಿಲ್ ಇಸ್ಲಾಮಿಯ್ಯಾ (ಮುಸ್ಲಿಂ ವರ್ಲ್ಡ್ ಲೀಗ್) ಮಕ್ಕಾದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಇಸ್ಲಾಮಿಕ್ ಸಮ್ಮೇಳನದಲ್ಲಿ ಅಝ್ಹರಿ ಅವರು ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪರಸ್ಪರ ಕೋಪ, ದ್ವೇಷ ಮತ್ತು ಅಸಹಿಷ್ಣುತೆಯಾಗಿದೆ ಪ್ಯಾಲೆಸ್ತೀನ್ನಂತೆ ಮುಸ್ಲಿಂ ಸಮುದಾಯವು ಇಂದು ಎದುರಿಸುತ್ತಿರುವ ಬಿಕ್ಕಟ್ಟಿನ ಹಿಂದಿನ ಪ್ರಮುಖ ಕಾರಣ ಎಂದು ಅಝ್ಹರಿ ಅಭಿಪ್ರಾಯ ಪಟ್ಟರು.


ವಿವಿಧ ದೇಶಗಳ ಮುಸ್ಲಿಂ ಸಂಘಟನೆಗಳ ಪರವಾಗಿ ಅಬ್ದುಲ್ಲಾ ಬಿನ್ ಶೈಖ್ ಬಿನ್ ಬಯ್ಯ (ಯುಎಇ), ಆಯತುಲ್ಲಾಹ್ ಅಶೈಖ್ ಅಹ್ಮದ್ ಮಬ್ಲಗೀ (ಇರಾನ್), ಡಾ. ಮುಹಮ್ಮದ್ ಮುಖ್ತಾರ್ ಜುಮುಅ (ಈಜಿಪ್ಟ್), ಶೈಖ್ ಮಿಫ್ತಾಹ್ ಅಲ್ ಅಖ್ಯಾರ್ ಅಬ್ದುಲ್ ಗನೀ(ಇಂಡೋನೇಷಿಯಾ), ಶೈಖ್ ಫಳ್ ಲುರ್ರಹ್ಮಾನ್ ಬಿನ್ ಮುಪ್ತಿ ಮಹಮೂದ್ (ಪಾಕಿಸ್ತಾನ), ಡಾ. ಅಲಿ ಬಿನ್ ಅಬ್ದುರಹ್ಮಾನ್ ಅರ್ಬಾಶ್ (ಟರ್ಕಿ), ಡಾ. ಅಸ್ಸಯ್ಯಿದ್ ಜವಾದ್ ಅಲ್-ಖೌಈ (ಇರಾಕ್), ಶೈಖ್ ವಾನ್ ಮುಹಮ್ಮದ್ ಬಿನ್ ಅಬ್ದುಲ್ ಅಝೀಝ್ (ಮಲೇಷ್ಯಾ), ಶೈಖ್ ಮುಹಮ್ಮದ್ ಅಲ್-ಮಾಹೀ (ಆಫ್ರಿಕಾ), ಎರಡೂ ಹರಂಗಳ ಮೇಲ್ವಿಚಾರಕ ಡಾ. ಅಬ್ದುಲ್ ರಹಮಾನ್ ಅಲ್ ಸುದೈಸಿ ಮತ್ತಿತರರು ಭಾಗವಹಿಸಿದ್ದರು.
ಕೇರಳದಿಂದ ಏಕೈಕ ಆಹ್ವಾನಿತರಾಗಿ ಸಮಸ್ತವನ್ನು ಪ್ರತಿನಿಧಿಸಿದ ಸಮಸ್ತ ಮುಶಾವರದ ಸದಸ್ಯರೂ ಆದ ಡಾ. ಹಕೀಂ ಅಝರಿ ಸಮಾವೇಶದಲ್ಲಿ ಭಾಗವಹಿಸಿದ್ದರು.



















ಇನ್ನಷ್ಟು ಸುದ್ದಿಗಳು
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಇರಾನ್ ಮೇಲೆ ಮತ್ತೆ ಯುಎಸ್ ದಾಳಿ; ಬಂದರ್ ಅಬ್ಬಾಸ್ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಬಾಂಬ್ ದಾಳಿ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ