ಉಪ್ಪಿನಂಗಡಿ: ಪ್ರಮುಖ ವಿದ್ವಾಂಸರು, ಸುನ್ನೀ ಸಂಘಟನೆಗಳ ಸಕ್ರೀಯ ನಾಯಕತ್ವ ಸಯ್ಯಿದ್ ಕರ್ವೇಲ್ ಸಾದತ್ ತಂಙಳ್ ಇಂದು ಬೆಳಿಗ್ಗೆ ವಫಾತಾದರು.
ಚಿರಯುವಕರಂತೆ ಸುನ್ನತ್ ಜಮಾಅತಿಗಾಗಿ ಹಗಳಿರುಳು ದುಡಿಯುತ್ತಿದ್ದ ಪ್ರವಾದಿ ಕುಟುಂಬದ ಕರುಳ ಕುಡಿ ಸುನ್ನೀ ಜನ ಸಮೂಹಕ್ಕೆ ಮಾರ್ಗದರ್ಶಿಯಾಗಿದ್ದ ಸಯ್ಯಿದರು, ಕಳೆದ ಒಂದು ವಾರದ ಹಿಂದೆ ನಡೆದ ರಿಕ್ಷಾ ಅಪಘಾತದಲ್ಲಿ ತೀವ್ರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಇಂದು ಮುಂಜಾನೆ ಹೊತ್ತು ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾಗಿ ಸಯ್ಯಿದರ ಆಪ್ತ ಮೂಲಗಳಿಂದ ತಿಳಿದುಬಂದಿದೆ.
ನಿನ್ನೆ ತಾನೇ ತಂಙಳರ ಸಹೋದರಿಯ ಮಗಳು ಹೃದಯಾಘಾತದಿಂದ ನಿಧನ ಹೊಂದಿದ್ದು ಇದರ ಬೆನ್ನಲ್ಲೇ ತಂಙಳರ ಮರಣ ಸಂಭವಿಸಿದೆ. ಸಯ್ಯಿದರ ಕುಟುಂಬಸ್ಥರು ಮತ್ತು ಸುನ್ನೀ ಸಮೂಹವನ್ನು ದುಃಖದ ಕಣ್ಣೀರಿನಲ್ಲಿ ಮುಳುಗುಸಿದೆ.
ಅವರ ಕುಟುಂಬಕ್ಕೆ ದು:ಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಅಲ್ಲಾಹು ನೀಡಲಿ. ಎಲ್ಲಾ ಉಲಮಾ,ಉಮರಾ, ನಾಯಕರು ,ಕಾರ್ಯಕರ್ತರು ತಂಙಳರ ಮೇಲೆ ಕುರುಆನ್ ಓದಿ, ತಹ್ಲೀಲ್ ಹೇಳಿ ದುಆ ಮಾಡಬೇಕಾಗಿ ಸುನ್ನೀ ಸಂಘ ಸಂಸ್ಥೆಗಳು ವಿನಂತಿಸಿವೆ.
















ಇನ್ನಷ್ಟು ಸುದ್ದಿಗಳು
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ