ಬೆಳ್ತಂಗಡಿ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಅಬುಧಾಬಿ ಝೋನ್ ಇದರ ದಾರುಲ್ ಅಮಾನ್ ವಸತಿ ಯೋಜನೆಯ ನಾಲ್ಕನೇ ಫಲಾನುಭವಿಯ ಮನೆ ಹಸ್ತಾಂತರ ಕಾರ್ಯಕ್ರಮವು ಫೆ.3 ರಂದು ಬೆಳ್ತಂಗಡಿ ತಾಲೂಕಿನ ಬದ್ಯಾರಿನಲ್ಲಿ ನಡೆಯಿತು.
ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷ ಡಾ. ಫಾಝಿಲ್ ರಝ್ವ ಫಲಾನುಭವಿಗೆ ಮನೆಯ ಕೀ ಹಸ್ತಾಂತರ ಮಾಡುವ ಮೂಲಕ ಉಧ್ಘಾಟಿಸಿದರು. ಕಾರ್ಯಕ್ರಮದಲಿ ರಾಜ್ಯ ಎಸ್,ವೈ. ಎಸ್ ನಾಯಕರಾದ ಎಸ್.ಪಿ ಹಂಝ ಸಖಾಫಿ ಬಂಟ್ವಾಳ, ಮಲ್ಜಹ್ ವಿಧ್ಯಾ ಸಂಸ್ಥೆಯ ರುವಾರಿ ಸಯ್ಯಿದ್ ಜಮಲುಲ್ಲೈಲಿ ತಂಙಳ್, ಜಿ.ಎಂ ಕಾಮಿಲ್ ಸಖಾಫಿ, ಮೆಹ್ಬೂಬ್ ಸಖಾಫಿ,ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಲ್ ಸುಫ್ಯಾನ್ ಸಖಾಫಿ, ಉಮರಾ ನೇತಾರ ರಜಾಕ್ ಹಾಜಿ ಜೆಲ್ಲಿ, ಕೆಸಿಎಫ್ ಅಬುಧಾಬಿ ಝೋನ್ ಅಧ್ಯಕ್ಷ ಹಸೈನಾರ್ ಅಮಾನಿ ಸದಸ್ಯರಾದ ಹಕೀಂ ತುರ್ಕಳಿಕೆ, ನವಾಝ್ ಕೋಟೆಕಾರ್, ಸಿದ್ದೀಲ್ ಅಳಿಕೆ, ಸುಹೈಲ್ ಸಖಾಫಿ, ಮುಸ್ತಫ ನಿಂತಿಕಲ್, ಉಮರ್ ಈಶ್ವರಮಂಗಿಲ ಹಾಗೂ ಸ್ಥಳೀಯ ಉಲಮಾ ಉಮರಾ ನೇತಾರರು ಭಾಗವಹಿಸಿದ್ದರು.



ಕರುಣೆಯ ನೆರಳೆಂಬ ಪುಟ್ಟ ಡಬ್ಬಿಯೊಂದರಲ್ಲಿ ಸಹೃದಯಿ ದಾನಿಗಳು ಹಾಕುವ ನಾಣ್ಯಗಳೇ ಇಂದು ಮತ್ತೊಂದು ಮನೆಯಾಗಿ ಪರಿವರ್ತನೆಯಾಗಿದೆ
ಊರು ಕೇರಿಗಳನ್ನು ತೊರೆದು ಕಡಲು ದಾಟಿದ ಕನ್ನಡಿಗ ಸುನ್ನೀ ಅನಿವಾಸಿ KCF ಕಾರ್ಯಕರ್ತರು ಸಾಧ್ಯವಾದೆಡೆಯೆಲ್ಲಾ ಕರುಣೆಯ ನೆರಳೆಂಬ ಪುಟ್ಟ ಡಬ್ಬಿಯೊಂದನ್ನು ಸ್ಥಾಪಿಸಿದ್ದಾರೆ. ಅದರಲ್ಲಿ ಸಹೃದಯಿ ದಾನಿಗಳು ಹಾಕುವ ನಾಣ್ಯಗಳೇ ಇಂದು ಮತ್ತೊಂದು ಮನೆಯಾಗಿ ಪರಿವರ್ತನೆಯಾಗಿದೆ.
ಮುಂಜಾನೆ ಅಂಗಡಿಯ ಬಾಗಿಲು ತೆರೆದೊಡನೆ ಕರುಣೆಯ ನೆರಳಿಗೆ ಕಿರು ಕಾಣಿಕೆಯೊಂದನ್ನು ಹಾಕಿ ದಿನದ ವ್ಯಾಪಾರ ವಹಿವಾಟುಗಳನ್ನು ಪ್ರಾರಂಭಿಸುವ ಪರಿಪಾಠ ಮಾಡಿಕೊಂಡಿರುವ ಹಲವು ಅನಿವಾಸಿಗಳಿದ್ದಾರೆ.
ಹನಿ ಹನಿ ಸೇರಿ ಹಳ್ಳವಾಗಿ ಕಡಲು ದಾಟಿ ತಾಯ್ನಾಡಿಗೆ ಬಂದ ಕರುಣೆಯ ನೆರಳಿನ ಡಬ್ಬಿಯ ಮೊತ್ತವು ಅರ್ಹ ಕುಂಟುಂಭಕ್ಕೊಂದು ಮನೆಯೆಂಬ ಕನಸನ್ನು ನನಸಾಗಿಸಿ ಸಂಭ್ರಮದಿಂದ ಗೃಹ ಪ್ರವೇಶಗೈದಾಗ ಅಬುಧಾಬಿ ಕೆಸಿಎಫ್ ಕಾರ್ಯಕರ್ತರ ಮನದಾಳದಲ್ಲಿ ನಿರಾಳತೆಯ ನಿಟ್ಟುಸಿರು.!
ಉದ್ಯೋಗ, ವಹಿವಾಟುಗಳ ಜಂಜಾಟದ ಮದ್ಯೆ ಸಿಕ್ಕ ಬಿಡುವಿನಲ್ಲಿ ಸಂಘ ಕಟ್ಟಿ ಮಾಡುವ KCF ಕಾರ್ಯಕರ್ತರ ಪುಟ್ಟ ಪುಟ್ಟ ಸೇವೆಗಳು ನಾಳೆಯ ಮೀಝಾನಿನಲ್ಲಿ ಘನತೂಕವುಳ್ಳದಾಗಲಿ, ಅಲ್ಲಾಹು ಸ್ವೀಕರಿಸಲಿ. ಆಮೀನ್
✍🏻 ಸಿದ್ಧೀಕ್ ಎಲಿಮಲೆ
















ಇನ್ನಷ್ಟು ಸುದ್ದಿಗಳು
ವೈದ್ಯಕೀಯ-ಇಂಜಿನಿಯರಿಂಗ್ ಕನಸುಗಳಾಚೆಗೆ ನಾಗರಿಕ ಸೇವೆಗಳತ್ತ ಯುವಶಕ್ತಿ ಮುಖ ಮಾಡಲಿ: ಇಕ್ಬಾಲ್ ಬಾಳಿಲ ಕರೆ
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ