ಮಂಗಳೂರು: ಮಂಡ್ಯದಲ್ಲಿ ಪ್ರಸ್ತುತ ಸಂಘ ಪ್ರೇರಿತ ಮತೀಯ ಉದ್ವಿಗ್ನ ಚಟುವಟಿಕೆಗಳನ್ನು ಗರಿಷ್ಠ ಮಟ್ಟಕ್ಕೆ ಏರಿಸುವ ಭರದಲ್ಲಿನ ಧ್ವಜ ವಿವಾದದ ಹಿನ್ನಲೆಯಲ್ಲಿ ಬಿಜೆಪಿ ಮುಖಂಡ ಸಿ.ಟಿ.ರವಿ ರಾಷ್ಟ್ರ ಧ್ವಜವನ್ನು ತಾಲಿಬಾನ್ ಧ್ವಜಕ್ಕೆ ಹೋಲಿಸುವ ಪದಬಳಕೆ ಮಾಡಿ ಹೇಳಿಕೆ ನೀಡಿರುವುದು, ಸಿ.ಟಿ.ರವಿಯಂತಹ ಸಂಘೀ ನಾಯಕರ ಪ್ರಸಕ್ತ ಮನಸ್ಥಿತಿಯನ್ನು ತೋರಿಸುತ್ತಿದೆ.ಸಿ.ಟಿ.ರವಿಗೆ ದೃಷ್ಟಿ ವ್ಯತ್ಯಯ ಸಮಸ್ಯೆ ಇದ್ದಂತೆ ಕಾಣುತ್ತದೆ ಎಂದು ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ದೇಶದಲ್ಲಿ ಹುಟ್ಟಿ ಬೆಳೆದು, ಈ ದೇಶದ ಆಹಾರ, ನೀರು,ಗಾಳಿ ಸೇವಿಸಿಕೊಂಡು ಇಂದು ರಾಷ್ಟ್ರ ಧ್ವಜವನ್ನು ಗುರುತಿಸಲು ಅಸಾದ್ಯವಾದಷ್ಟು ದೃಷ್ಟಿ ವ್ಯತ್ಯಯ ಸಮಸ್ಯೆ ಇದೆಯೋ ಅಥವಾ ಭಾರತ ದೇಶ ಪ್ರೇಮ ಹೊರತಾದ ತಾಲಿಬಾನಿ ಪ್ರೇಮವೋ ಎಂಬುದಾಗಿ ಉತ್ತರಿಸಬೇಕು.
ಈ ದೇಶದ ಸಾಮಾನ್ಯ ಜನರನ್ನು ಮತ್ತು ಒಂದು ನಿರ್ಧಿಷ್ಟ ಜನ ಸಮುದಾಯವನ್ನು ನಿರಂತರ ಹೀಯಾಳಿಸುತ್ತಾ, ಈ ದೇಶದ ನೈಜ ಪ್ರಜೆಗಳನ್ನು ಜನರು ಸಂಶಯ ದೃಷ್ಟಿಯಿಂದ ನೋಡುವ ರೀತಿಯಲ್ಲಿನ ಗೊಂದಲದ ಹೇಳಿಕೆಗಳ ವೀರ ಸಿ.ಟಿ.ರವಿಗೆ ಇಂದು ಭಾರತದ ತ್ರಿವರ್ಣ ಧ್ವಜ ತಾಲಿಬಾನಿ ಧ್ವಜದ ಹಾಗೆ ಹೋಲಿಕೆಯಾದದ್ದು ಅವರ ದೇಶ ದ್ರೋಹತೆಗೆ ಸಾಕ್ಷಿಯಾಗಿದೆ.ಕೇಂದ್ರ ಸರಕಾರ ಸಿ.ಟಿ.ರವಿಯನ್ನು ತಕ್ಷಣ ಅಫ್ಘಾನಿಸ್ತಾನದ ಕಾಬೂಲ್ ಗೆ ಗಡೀಪಾರುಗೊಳಿಸಬೇಕಿದೆ ಎಂದು ಕೆ.ಅಶ್ರಫ್(ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಪತ್ರಿಕಾ ಪ್ರಕಟಣೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ