ಅಹ್ಲುಸುನ್ನತ್ ವಲ್ ಜಮಾಅತ್ತಿನ ಆಶಯ ಆದರ್ಶವನ್ನು ಎತ್ತಿ ಹಿಡಿಯಲೆಂದೇ ಸ್ಥಾಪಿತವಾದ ಸುನ್ನಿ ಯುವಜನ ಸಂಘ ಅದರ ಜನ್ಮನಾಡಾದ ಕೇರಳದಲ್ಲಿ 1954ರಲ್ಲಿ ಪ್ರಾರಂಭಗೊಂಡು ಇದೀಗ 70 ಪೂರ್ತಿಯಾದ ಸಂಭ್ರಮದಲ್ಲಿದೆ.
ಕರ್ನಾಟಕದಲ್ಲಿಯೂ ಮಹಾನ್ ವಿದ್ವಾಂಸರಾದ ತಾಜಲ್ ಫುಖಹಾ ಬೇಕಲ್ ಉಸ್ತಾದ್ ರವರ ನೇತೃತ್ವದಲ್ಲಿ 1994ರಲ್ಲಿ ಅಸ್ತಿತ್ವಕ್ಕೆ ಬಂದ ಸಂಘವು, ಇದೀಗ 30ರ ಸಡಗರ ಸಂಭ್ರಮವನ್ನು ಆಚರಿಸುತ್ತಿದೆ. ಅದರ 30ನೇ ವರ್ಷಾಚರಣೆಯು ‘ಪರಂಪರೆಯ ಪ್ರತಿನಿಧಿಗಳಾಗೋಣ’ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಇದೇ ಬರುವ ಜನವರಿ 24, 2024ರ ಬುಧವಾರದಂದು ಅಡ್ಯಾರಿನ ಶಾಗಾರ್ಡನ್ ಗ್ರೌಂಡಿನಲ್ಲಿ ಅದ್ದೂರಿಯ ಮಹಾ ಸಮ್ಮೇಳನ ನಡೆಯುತ್ತಿದೆ.
ಪ್ರಕಾಂಡ ಸಯ್ಯಿದ್ ಕುಟುಂಬಸ್ತರು, ವಿದ್ವಾಂಸರುಗಳು, ರಾಜಕೀಯ ಮುಖಂಡರುಗಳು, ಸಾಮಾಜಿಕ ಧುರೀಣರು ,ಸುನ್ನೀ ಕಾರ್ಯಕರ್ತರ ದಂಡೇ ಆಗಮಿಸಲಿದೆ. ಪ್ರಸ್ತುತ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸಅದಿ ವಿದ್ವಾಂಸರುಗಳು ಪ್ರಚಾರಗಳನ್ನು ಗೈಯುತ್ತಾ ಸದರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮಜ್ಲಿಸು ಉಲಮಾಉಸ್ಸಅದಿಯ್ಯೀನ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಬಹು ಅಬ್ದುಲ್ ರಹ್ಮಾನ್ ಸಅದಿ ಕಂಕನಾಡಿರವರು ಕರೆ ನೀಡಿದ್ದಾರೆ.
ವರದಿ -ಇಂಜಿನಿಯರ್ ಇಸ್ಮಾಯಿಲ್ ಮನ್ಸೂರ್ ಅಹ್ಮದ್ ಸಅದಿ ಅಲ್ ಕಾಮಿಲ್ ಬಜ್ಪೆ (ಪ್ರಧಾನ ಕಾರ್ಯದರ್ಶಿ,ಮಜ್ಲಿಸು ಉಲಮಾಉಸ್ಸಅದಿಯ್ಯೀನ್ ದಕ್ಷಿಣ ಕನ್ನಡ)
















ಇನ್ನಷ್ಟು ಸುದ್ದಿಗಳು
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ