ಮಂಗಳೂರು: ಇತ್ತೀಚೆಗೆ ಶಾಸಕ ಹರೀಶ್ ಪೂಂಜಾರವರು ಹೇಳಿಕೆ ನೀಡಿ,ಮುಸ್ಲಿಮ್ ಸಮುದಾಯದ ಕುಟುಂಬಗಳು ನಾಲ್ಕು ಸಂತತಿಯನ್ನು ಹೊಂದಿದರೆ ದೇಶದ ಮುಸ್ಲಿಮರ ಜನಸಂಖ್ಯೆ ಎಂಬತ್ತು ಕೋಟಿ ತಲುಪುತ್ತದೆ ಎಂದಿದ್ದಾರೆ.
ಪೂಂಜಾರವರ ಈ ಹೇಳಿಕೆ ಇಲ್ಲಿನ ಮುಸ್ಲಿಮೇತರ ಸಮುದಾಯವನ್ನು ಮೂರ್ಖರನ್ನಾಗಿಸುವುದಾಗಿದೆ. ದೇಶದ ಜನಸಂಖ್ಯೆಯ ಬಗ್ಗೆ ಈಗಾಗಲೇ ಸಾಮಾಜಿಕ ತಜ್ಞರು ನೀಡಿದ ವರದಿಯನ್ನು ಇನ್ನೂ ಪೂಂಜಾರವರು ಅರಿತಿಲ್ಲ. ಯತೇಚ್ಛ ಮಾನವ ಸಂಪನ್ಮೂಲವನ್ನು ಹೊಂದಿದ ನಮ್ಮ ದೇಶ ಇಂದು ಅಭಿವೃದ್ಧಿ ಹೊಂದಿರುವುದು ಮಾನವ ಸಂಪನ್ಮೂಲಗಳಿಂದಲೇ ಎಂದು ಪೂಂಜಾ ತಿಳಿಯಲಿ.
ಪೂಂಜಾ ಅವರು ಈ ದೇಶಕ್ಕೆ ನಾರಿ ಸಂತಾನ ವೊಂದನ್ನಾದರೂ ಕೊಡುಗೆ ನೀಡಿದರೆ ಅವರು ಇತರ ಸಮುದಾಯಗಳಿಗೆ ನೀಡುತ್ತಿರುವ ಸಂತಾನ ಮಿತಿಯನ್ನು ಮೀರಿದಂತೆ ಕೂಡಾ ಆಗುತ್ತದೆ. ಪೂಂಜಾ ಅವರಿಗೆ ಹಾಲಿ ಇರುವ ದ್ವಿಪುತ್ರ ಭಾಗ್ಯ ದೊಂದಿಗೆ ಪುತ್ರಿ ಭಾಗ್ಯವೂ ಲಭಿಸಿದಂತಾಗುತ್ತದೆ. ಶೀಘ್ರ ಪೂಂಜಾ ಅವರಿಗೆ ಪುತ್ರಿ ಭಾಗ್ಯ ಪ್ರಾಪ್ತಿ ಆಗಲಿ. ಹಾಗಾದರೆ, ಅಧಿಕ ಸಂತೋಷ ಪಡುವ ಸಮುದಾಯ ಇದ್ದರೆ ಅದು ಮುಸ್ಲಿಮ್ ಸಮುದಾಯ ಆಗಿರುತ್ತದೆ. ಶೀಘ್ರಮ್ ಪುತ್ರಿ ಭಾಗ್ಯ ಮ್ ಪ್ರಾಪ್ತಿ ರಸ್ತು ಎಂದು ಕೆ.ಅಶ್ರಫ್( ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಪತ್ರಿಕಾ ಪ್ರಕಟಣೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್