ಮಂಗಳೂರು: ಇತ್ತೀಚೆಗೆ ಶಾಸಕ ಹರೀಶ್ ಪೂಂಜಾರವರು ಹೇಳಿಕೆ ನೀಡಿ,ಮುಸ್ಲಿಮ್ ಸಮುದಾಯದ ಕುಟುಂಬಗಳು ನಾಲ್ಕು ಸಂತತಿಯನ್ನು ಹೊಂದಿದರೆ ದೇಶದ ಮುಸ್ಲಿಮರ ಜನಸಂಖ್ಯೆ ಎಂಬತ್ತು ಕೋಟಿ ತಲುಪುತ್ತದೆ ಎಂದಿದ್ದಾರೆ.
ಪೂಂಜಾರವರ ಈ ಹೇಳಿಕೆ ಇಲ್ಲಿನ ಮುಸ್ಲಿಮೇತರ ಸಮುದಾಯವನ್ನು ಮೂರ್ಖರನ್ನಾಗಿಸುವುದಾಗಿದೆ. ದೇಶದ ಜನಸಂಖ್ಯೆಯ ಬಗ್ಗೆ ಈಗಾಗಲೇ ಸಾಮಾಜಿಕ ತಜ್ಞರು ನೀಡಿದ ವರದಿಯನ್ನು ಇನ್ನೂ ಪೂಂಜಾರವರು ಅರಿತಿಲ್ಲ. ಯತೇಚ್ಛ ಮಾನವ ಸಂಪನ್ಮೂಲವನ್ನು ಹೊಂದಿದ ನಮ್ಮ ದೇಶ ಇಂದು ಅಭಿವೃದ್ಧಿ ಹೊಂದಿರುವುದು ಮಾನವ ಸಂಪನ್ಮೂಲಗಳಿಂದಲೇ ಎಂದು ಪೂಂಜಾ ತಿಳಿಯಲಿ.
ಪೂಂಜಾ ಅವರು ಈ ದೇಶಕ್ಕೆ ನಾರಿ ಸಂತಾನ ವೊಂದನ್ನಾದರೂ ಕೊಡುಗೆ ನೀಡಿದರೆ ಅವರು ಇತರ ಸಮುದಾಯಗಳಿಗೆ ನೀಡುತ್ತಿರುವ ಸಂತಾನ ಮಿತಿಯನ್ನು ಮೀರಿದಂತೆ ಕೂಡಾ ಆಗುತ್ತದೆ. ಪೂಂಜಾ ಅವರಿಗೆ ಹಾಲಿ ಇರುವ ದ್ವಿಪುತ್ರ ಭಾಗ್ಯ ದೊಂದಿಗೆ ಪುತ್ರಿ ಭಾಗ್ಯವೂ ಲಭಿಸಿದಂತಾಗುತ್ತದೆ. ಶೀಘ್ರ ಪೂಂಜಾ ಅವರಿಗೆ ಪುತ್ರಿ ಭಾಗ್ಯ ಪ್ರಾಪ್ತಿ ಆಗಲಿ. ಹಾಗಾದರೆ, ಅಧಿಕ ಸಂತೋಷ ಪಡುವ ಸಮುದಾಯ ಇದ್ದರೆ ಅದು ಮುಸ್ಲಿಮ್ ಸಮುದಾಯ ಆಗಿರುತ್ತದೆ. ಶೀಘ್ರಮ್ ಪುತ್ರಿ ಭಾಗ್ಯ ಮ್ ಪ್ರಾಪ್ತಿ ರಸ್ತು ಎಂದು ಕೆ.ಅಶ್ರಫ್( ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಪತ್ರಿಕಾ ಪ್ರಕಟಣೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ