ಮಂಗಳೂರು: ಇತ್ತೀಚೆಗೆ ಶಾಸಕ ಹರೀಶ್ ಪೂಂಜಾರವರು ಹೇಳಿಕೆ ನೀಡಿ,ಮುಸ್ಲಿಮ್ ಸಮುದಾಯದ ಕುಟುಂಬಗಳು ನಾಲ್ಕು ಸಂತತಿಯನ್ನು ಹೊಂದಿದರೆ ದೇಶದ ಮುಸ್ಲಿಮರ ಜನಸಂಖ್ಯೆ ಎಂಬತ್ತು ಕೋಟಿ ತಲುಪುತ್ತದೆ ಎಂದಿದ್ದಾರೆ.
ಪೂಂಜಾರವರ ಈ ಹೇಳಿಕೆ ಇಲ್ಲಿನ ಮುಸ್ಲಿಮೇತರ ಸಮುದಾಯವನ್ನು ಮೂರ್ಖರನ್ನಾಗಿಸುವುದಾಗಿದೆ. ದೇಶದ ಜನಸಂಖ್ಯೆಯ ಬಗ್ಗೆ ಈಗಾಗಲೇ ಸಾಮಾಜಿಕ ತಜ್ಞರು ನೀಡಿದ ವರದಿಯನ್ನು ಇನ್ನೂ ಪೂಂಜಾರವರು ಅರಿತಿಲ್ಲ. ಯತೇಚ್ಛ ಮಾನವ ಸಂಪನ್ಮೂಲವನ್ನು ಹೊಂದಿದ ನಮ್ಮ ದೇಶ ಇಂದು ಅಭಿವೃದ್ಧಿ ಹೊಂದಿರುವುದು ಮಾನವ ಸಂಪನ್ಮೂಲಗಳಿಂದಲೇ ಎಂದು ಪೂಂಜಾ ತಿಳಿಯಲಿ.
ಪೂಂಜಾ ಅವರು ಈ ದೇಶಕ್ಕೆ ನಾರಿ ಸಂತಾನ ವೊಂದನ್ನಾದರೂ ಕೊಡುಗೆ ನೀಡಿದರೆ ಅವರು ಇತರ ಸಮುದಾಯಗಳಿಗೆ ನೀಡುತ್ತಿರುವ ಸಂತಾನ ಮಿತಿಯನ್ನು ಮೀರಿದಂತೆ ಕೂಡಾ ಆಗುತ್ತದೆ. ಪೂಂಜಾ ಅವರಿಗೆ ಹಾಲಿ ಇರುವ ದ್ವಿಪುತ್ರ ಭಾಗ್ಯ ದೊಂದಿಗೆ ಪುತ್ರಿ ಭಾಗ್ಯವೂ ಲಭಿಸಿದಂತಾಗುತ್ತದೆ. ಶೀಘ್ರ ಪೂಂಜಾ ಅವರಿಗೆ ಪುತ್ರಿ ಭಾಗ್ಯ ಪ್ರಾಪ್ತಿ ಆಗಲಿ. ಹಾಗಾದರೆ, ಅಧಿಕ ಸಂತೋಷ ಪಡುವ ಸಮುದಾಯ ಇದ್ದರೆ ಅದು ಮುಸ್ಲಿಮ್ ಸಮುದಾಯ ಆಗಿರುತ್ತದೆ. ಶೀಘ್ರಮ್ ಪುತ್ರಿ ಭಾಗ್ಯ ಮ್ ಪ್ರಾಪ್ತಿ ರಸ್ತು ಎಂದು ಕೆ.ಅಶ್ರಫ್( ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಪತ್ರಿಕಾ ಪ್ರಕಟಣೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಮಾದಕ ವಸ್ತು ‘ಖಾತ್’ ಮಾರಾಟ: ಭಾರತೀಯ ಪ್ರಜೆ ಸೌದಿಯಲ್ಲಿ ಬಂಧನ
ಅನಿವಾಸಿಗಳಿಗೆ ಶುಭ ಸುದ್ದಿ: ಕುವೈತ್ನಿಂದ ಭಾರತೀಯ ವಿಮಾನ ಸೇವೆಗಳು ಪುನರಾರಂಭ
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಗುಡ್ ನ್ಯೂಸ್: 20 ಕಿ.ಮೀ ವ್ಯಾಪ್ತಿಯವರಿಗೆ ಡಿಜಿಟಲ್ ಪಾಸ್ ಸೌಲಭ್ಯ!
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ಗೆ ಭರ್ಜರಿ ಗೆಲುವು- ಆಡಳಿತದ ಹಾದಿಗೆ ಸಿಕ್ಕ ಮುದ್ರೆ ಎಂದ ಸಿಎಂ ಡಿ.ಕೆ. ಶಿವಕುಮಾರ್
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
‘ಗಲ್ಫ್ ಪ್ರದೇಶದ ಸಂಘರ್ಷಗಳನ್ನು ಭಾರತಕ್ಕೆ ನಿರ್ಲಕ್ಷಿಸಲು ಸಾಧ್ಯವಿಲ್ಲ’ – ಭಾರತೀಯ ರಾಯಭಾರಿ ಡಾ. ಸುಹೈಲ್ ಅಜಾಝ್ ಖಾನ್
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ: ‘E-GEN ಸ್ಕಾಲರ್ಶಿಪ್’ ಗೆ ಅಧಿಕೃತ ಚಾಲನೆ
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ