ಅರಸೀಕೆರೆ : ಸೌತ್ ವೆಸ್ಟರ್ನ್ ರೈಲ್ವೆ ಮಜ್ದೂರ್ ಯೂನಿಯನ್ ಅರಸೀಕೆರೆ ಇವರ ವತಿಯಿಂದ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸರದಿ ಉಪವಾಸ ಸತ್ಯಾಗ್ರಹ ರೈಲ್ವೆ ಸ್ಟೇಷನ್ ಮುಂಭಾಗ ನಡೆಯಿತು. ಸೌತ್ ವೆಸ್ಟರ್ನ್ ರೈಲ್ವೆ ಮಜ್ದೂರ್ ಯೂನಿಯನ್ ಕಾರ್ಯದರ್ಶಿ ಪ್ರಭು ಕುಮಾರ್ ಮಾತನಾಡಿ ಎಸ್ ಡಬ್ಲ್ಯೂ ಆರ್ ಮಜ್ದೂರ್ ಯೂನಿಯನ್ ವತಿಯಿಂದ 2004ರ ನಂತರ ನೇಮಕಾತಿಯಾದ ಎಲ್ಲಾ ರೈಲ್ವೆ ಕಾರ್ಮಿಕರಿಗೆ ಹೊಸ ಪೆನ್ಷನ್ ಪದ್ಧತಿಯನ್ನು ರದ್ದು ಮಾಡಿ ಹಳೆ ಪೆನ್ಷನ್ ಪದ್ಧತಿಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ಉಪಸತ್ಯಾಗ್ರವನ್ನು ಮಾಡುತ್ತಿದ್ದೇವೆ.
ಹೊಸ ಪೆನ್ಷನ್ ಪದ್ಧತಿಯಲ್ಲಿ ನೌಕರರಿಗೆ ಪೆನ್ಷನ್ ಪದ್ಧತಿಯಲ್ಲಿ ವ್ಯತ್ಯಾಸ ಆಗಿರುವುದರಿಂದ ನಾವುಗಳು ಹಳೆ ಪೆನ್ಷನ್ ಪದ್ಧತಿಯನ್ನು ಜಾರಿಗೊಳಿಸಬೇಕೆಂದು ಈಗಾಗಲೇ ನಮ್ಮ ರಾಜ್ಯಮಟ್ಟದ ನಾಯಕರುಗಳು ಸರ್ಕಾರಕ್ಕೆ ಹಲವಾರು ಬಾರಿ ಮನವಿ ಮಾಡಿದ್ದರು ಪ್ರಯೋಜನ ಆಗಿಲ್ಲ ಹಾಗಾಗಿ ಈಗ ಉಪಾಸತ್ಯಾಗ್ರವನ್ನು ಮಾಡುತ್ತಿದ್ದು ಸರದಿ ರೀತಿಯಲ್ಲಿ ಉಪವಾಸ ಸತ್ಯಾಗ್ರಹವನ್ನು ಬೆಳಗ್ಗೆ 9:00 ರಿಂದ ಸಂಜೆ ಐದರವರೆಗೆ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದೇವೆ.
ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಮಜ್ದೂರ್ ಯೂನಿಯನ್ ಅರಸೀಕೆರೆ ಶಾಖೆಯ ಅಧ್ಯಕ್ಷ ಆಲ್ಬರ್ಟ್ ಅನಿಲ್, ಓಪನ್ ಲೈನ್ ಶಾಖೆಯ ಅಧ್ಯಕ್ಷ ರಾಘವೇಂದ್ರ ಕೆ ಎಸ್ ಖಜಾಂಚಿ ಶಿವಶಂಕರ್, ಶಶಿಧರ್ ಕುಮಾರ್, ಶೇಷಾದ್ರಿ ಗಣೇಶ್ ವಿನಯ್ ಕುಮಾರ್ ಹರಿ ಮೋಹನ್ ಮೀನಾ ದಯಾನಂದ್ ಮುಂತಾದವರು ಭಾಗವಹಿಸಿದ್ದರು
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ