ಇಸ್ಲಾಂ ಧರ್ಮವು ಮನುಕುಲದ ಒಳಿತಿಗಾಗಿ ಸೃಷ್ಟಿ ಕರ್ತನೇ ರೂಪಿಸಿದ ನೀತಿ ಸಂಹಿತೆಗಳಾಗಿದ್ದು ಪ್ರವಾದಿಗಳಿಂದ ಸಹಾಬತ್ ಮತ್ತು ಅವರ ನಂತರದ ಸಜ್ಜನರ ಮೂಲಕ ನಮ್ಮನ್ನು ತಲುಪಿದೆ. ಪೂರ್ವಿಕರಿಂದ ಪರಂಪರಾಗತವಾಗಿ ಬಂದ ಧಾರ್ಮಿಕ ಆಚಾರ ವಿಚಾರಗಳನ್ನು ಯಥಾವತ್ತಾಗಿ ಪಾಲಿಸುವುದೇ ನಿಜವಾದ ಧರ್ಮ. ಅದನ್ನೇ ಅಹ್ಲ್ ಸುನ್ನತಿ ವಲ್ ಜಮಅ: ಎನ್ನಲಾಗುತ್ತದೆ. ಎಂದು ಐಸಿಎಫ್ ಬಹರೈನ್ ದಅವಾ ವಿಂಗ್ ಅಧ್ಯಕ್ಷರಾದ ಬಹು. ಅಬೂಬಕರ್ ಲತೀಫಿ ಉಸ್ತಾದ್ ಹೇಳಿದರು.
ಅವರು ಕೆಸಿಎಫ್ ಹಾಮದ್ ಟೌನ್ ಸೆಕ್ಟರಿನ ವತಿಯಿಂದ ನಡೆದ ಸಂಘಟನಾ ತರಬೇತಿಗೆ ನಾಯಕತ್ವ ನೀಡಿ ಮಾತನಾಡಿದರು.
ಸುನ್ನೀ ಸಿದ್ಧಾಂತಗಳಿಗೆ ವಿರುದ್ಧವಾಗಿ ಸೃಷ್ಟಿಸಲಾದ ಕೃತಕ ಪಂತಗಳು ಅತ್ಯಂತ ಅಪಾಯಕಾರಿಯಾಗಿದ್ದು ಸುನ್ನಿಗಳು ಸಂಘಟಿತರಾಗಿ ಜನ ಸಾಮಾನ್ಯರಿಗೆ ನೈಜ ಆಚಾರ ವಿಚಾರಗಳನ್ನು ತಲುಪಿಸಲು ಪ್ರಯತ್ನಿಸಬೇಕೆಂದು ಅವರು ಕರೆ ನೀಡಿದರು.
ಜನರಿಗೆ ಧರ್ಮ ಬೋಧನೆ ನೀಡುವುದರ ಜತೆಗೆ ಕಷ್ಟದಲ್ಲಿರುವ ಜನರಿಗೆ ಸಹಾಯ ಸಹಕಾರವನ್ನು ನೀಡಿ ಸಾಂತ್ವನ ಕಾರ್ಯಾಚರಣೆಯಲ್ಲಿ ಸಹಾ ಮುಂದಾಗುತ್ತಿರುವ ಕೆಸಿಎಫ್ ಕನ್ನಡಿಗರ ಪಾಲಿಗೆ ಬಹುದೊಡ್ಡ ಭಾಗ್ಯವಾಗಿದ್ದು ಇದನ್ನು ಮತ್ತಷ್ಟು ಪ್ರಬಲಗೊಳಿಸಿ ಬೆಳೆಸಬೇಕೆಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.
ಕೆಸಿಎಫ್ ಹಾಮದ್ ಟೌನ್ ಸೆಕ್ಟರ್ ಅಧ್ಯಕ್ಷರಾದ ಜನಾಬ್ ನಯಾಝ್ ಬಟ್ಕಲ್ ರವರ ಅಧ್ಯಕ್ಷತೆಯಲ್ಲಿ ನಡೆದ ಸ್ವಲಾತ್ ಮಜ್ಲಿಸಿಗೆ ಸಂಘಟನಾ ವಿಭಾಗದ ಅಧ್ಯಕ್ಷರಾದ ಖಲಂದರ್ ಉಸ್ತಾದ್ ನೇತೃತ್ವ ನೀಡಿದರು.
ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜನಾಬ್ ಜಮಾಲುದ್ದೀನ್ ವಿಟ್ಲರವರು ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮನ್ಸೂರ್ ಬೆಳ್ಮ ಸ್ವಾಗತಿಸಿದರು. ಸೆಕ್ಟರ್ ಕಾರ್ಯದರ್ಶಿ ಸುಫೈದ್ ಕೃಷ್ಣಾಪುರ ಧನ್ಯವಾದ ಅರ್ಪಿಸಿದರು.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ