ಮಂಗಳೂರು: ರಾಜ್ಯದ ಕಳೆದ ವಿಧಾನಸಭಾ ಜನಾದೇಶದಲ್ಲಿ ಕರ್ನಾಟಕದ ಜನತೆ ಮನುವಾದಿ ಪ್ರಣಾಳಿಕೆಗೆ ತಕ್ಕ ಉತ್ತರ ನೀಡಿದ ನಂತರ ಚಡಪಡಿಸುವ ಸಂಘಿ – ದಳಗಳು ರಾಜ್ಯದ ಉದ್ದಗಲಕ್ಕೆ ಮತೀಯ ಉದ್ವಿಗ್ನ ಸೃಷ್ಟಿಸುವ ಉದ್ದೇಶದಿಂದ ತನ್ನ ನವ ಅಸ್ತ್ರವನ್ನು ತಯಾರಿಸಿ ಶೌರ್ಯ ಯಾತ್ರೆ ಎಂದು ಹೊರಟಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ರವರು “ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ಮುಸ್ಲಿಮರ ವಿರುದ್ಧ ಕೋಮು ದ್ವೇಷ ಕಾರುವ ಬಾಡಿಗೆ ಬಾಷಣ ಕಾರರನ್ನು ಬಳಸಿ ವಿಷ ಕಕ್ಕುವ ಕೆಲಸ ಮಾಡುತ್ತಿದೆ”
“ನಾಡಿನ ಸಹ ಪ್ರಜೆಗಳ ವಿರುದ್ಧವೇ ‘ ಶೌರ್ಯ ‘ ಮೆರೆಯಲು ಹೊರಟಿರುವ ಈ ಸಂಘಿ ದಳಾದಿ ವಿಕ್ರಮರು ನೈಜ ದೇಶ ಪ್ರೇಮಿಗಳಾಗಿದ್ದರೆ ಮತ್ತು ಈ ನಾಡಿನ ಸಹ ಪ್ರಜೆಗಳನ್ನು ದ್ವೇಷಿಸುವುದಿಲ್ಲ ಎಂದಿದ್ದರೆ ಮುಸ್ಲಿಮರ ಜತೆಗೂಡಿ ಈ ದೇಶದ ನೆಲವನ್ನು ಸಂರಕ್ಷಿಸಲು ಚೀನಾ ಗಡಿ ರೇಖೆಗೆ ತೆರಳಿ ಶತ್ರು ದೇಶದ ಸೈನಿಕ ರೊಂದಿಗೆ ಹೋರಾಡಲು ಸಿದ್ಧರಾಗಲಿ. ಸಂಘಿ – ದಳಗಳ ನೇತ್ರತ್ವವನ್ನು ನಮ್ಮ ನೆಚ್ಚಿನ ಹೆಂಗ್ ಪುಂಗ್ಲಿ ಚಕ್ರವರ್ತಿ ಸೂಲಿಬೆಲೆ ವಹಿಸಿ ಕೊಳ್ಳಲಿ. ಇಂದೇ ಗಡಿಗೆ ತೆರಳುವ ದೇಶ ಪ್ರೇಮಿಗಳ ನೋಂದಣಿ ನಡೆಯಲಿ” ಎಂದು ಪತ್ರಿಕಾ ಹೇಳಿಕೆಯಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್