ಮಂಗಳೂರು: ಇತ್ತೀಚೆಗೆ ಯಾದಗಿರಿಯಲ್ಲಿ ಆಂದೋಲಶ್ರೀ ಎಂಬ ‘ ಹರಕು ಪ್ರತಿಪಾದಿ ‘ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪ್ರಚೋದನಾಕಾರಿಯಾಗಿ ಮಾತನಾಡುತ್ತಾ, ಇಲ್ಲಿ ಒಂದು ನಿರ್ಧಿಷ್ಟ ಸಮುದಾಯವನ್ನು ಕೆಣಕಿದರೆ ಕರ್ನಾಟಕ ಎರಡನೇ ಗೋದ್ರಾ ಆಗಲಿದೆ ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ರವರು, ಆಂದೋಲಶ್ರೀ ಎಂಬ ಹರಕುಬಾಯಿ ತಿಳಿಯಬೇಕು, ಕರ್ನಾಟಕ ಎಂಬುದು ಬುದ್ಧನ ಮೈತ್ರಿಯ ಪರಂಪರೆಯುಳ್ಳ ನಾಡು. ಕ್ರಾಂತಿಯೋಗಿ ಬಸವಣ್ಣನ ಬೀಡು,ಕುವೆಂಪುರವರ ಸರ್ವ ಜನಾಂಗದ ಶಾಂತಿಯ ತೋಟ,ನಾರಾಯಣ ಗುರುಗಳ ಸಮಾನತೆಯ ತಾಣ, ಸಂತ ಶಿಶುನಾಳ ಶರೀಫರ ಬೆಸುಗೆಯ ವನ, ಹಜ್ರತ್ ಟಿಪ್ಪು ಸುಲ್ತಾನರ ಧೈರ್ಯಶಾಲಿ ನೆಲೆಬೀಡು, ಈ ನಾಡಿನ ಸಾಮರಸ್ಯವನ್ನು ಕೆಣಕಿದರೆ ಈ ಹಿಂದೆ ಕರ್ನಾಟಕದ ಜನತೆ ನೀಡಿದ ಜನಾದೇಶದಂತೆ ಮುಂದಿನ ಜನಾದೇಶದಲ್ಲಿ ಕರ್ನಾಟಕ ‘ಆಹಿಂದವಾಸಿ ರಾಜ್ಯ’ ಎಂದು ಸಾಬೀತು ಪಡಿಸಲಿದೆ ಎಂದಿದ್ದಾರೆ.
ಆಂದೋಲಶ್ರಿ ಎಂಬವ,ಕರ್ನಾಟಕದಲ್ಲಿ ಬುದ್ಧನ ಮೈತ್ರಿಯ ವಿರುದ್ದ ತನ್ನ ವಕ್ರ ನಾಲಗೆಯಲ್ಲಿ ಅದೇಷ್ಟೋ ಆಂದೋಲನ ನಡೆಸಿದರೂ ಕರ್ನಾಟಕ ನಾಡಿನ ಜನತೆ ಡಾ.ಬಿ.ಆರ್.ಅಂಬೇಡ್ಕರ್ ಈ ದೇಶಕ್ಕೆ ಅರ್ಪಿಸಿದ ಸಂವಿದಾನದ ಬಾತ್ರತ್ವವನ್ನು ಸಂರಕ್ಷಣೆ ಮಾಡುತ್ತಾರೆಯೇ ಹೊರತು ಆಂದೋಲಶ್ರೀಯ ಅಂಧಕಾರಿ ಪ್ರಚೋದನೆಯನ್ನಲ್ಲ ಎಂದು ಅರಿತು ತೆಪ್ಪಗೆ ಇರುವುದು ಒಳಿತು ಎಂದು ಕೆ.ಅಶ್ರಫ್(ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಪತ್ರಿಕಾ ಪ್ರಕಟಣೆ ಮೂಲಕ ತಿರುಗೇಟು ನೀಡಿದ್ದಾರೆ.
















ಇನ್ನಷ್ಟು ಸುದ್ದಿಗಳು
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ