ವಿಟ್ಲ: ಮರ್ಹಬಾ ಕಮ್ಯೂನಿಟಿ ಟ್ರಸ್ಟ್ MCT ಕೊಡಂಗಾಯಿ ಇದರ ನೂತನ ಕಛೇರಿಯನ್ನು ಕೊಡಂಗಾಯಿ ಹೃದಯ ಭಾಗದಲ್ಲಿ ಊರ – ಪರವೂರ ಅತಿಥಿಗಳ ಸಮ್ಮುಖದಲ್ಲಿ ಸ್ಥಳೀಯ ಖತೀಬ್ ಬಹುಮಾನ್ಯ ಬಿ ಎ ಸಿದ್ದೀಕ್ ಅರ್ಶದಿ ಉಸ್ತಾದರು ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಎ ಎಂ ಮಹಮ್ಮದ್ ಕುಂಞ ವಹಿಸಿದ್ದರು, ಅಂಚು ಕೊಡಂಗಾಯಿ ಸ್ವಾಗತಿಸಿದರು.
ಸಾರ್ವಜನಿಕ ಸೇವೆಗಾಗಿ ಹಲವಾರು ಪದ್ಧತಿಗಳನ್ನು ರೂಪಿಸಿ ಕಾರ್ಯಾಚರಿಸುತ್ತಿರುವ MCT ನಡೆಗೆ ರವೀಶ್ ಶೆಟ್ಟಿ ಕರ್ಕಳ, ಸಂದೇಶ್ ಶೆಟ್ಟಿ ಬಿಕ್ನಾಜೆ, ಹಾಜಿ ಹಮೀದ್ ಕೊಡಂಗಾಯಿ ಮತ್ತು ಹಕೀಮ್ ಪರ್ತಿಪ್ಪಾಡಿ ಶುಭ ಹಾರೈಸಿದರು.
ವಿಶೇಷವಾಗಿ ಸಂಘಟನೆಗೆ ಶಕ್ತಿ ತುಂಬುವ ಅಬ್ದುಲ್ ರಝಾಕ್ ಎಂ ಕೆ ಮತ್ತು ಅಶ್ರಫ್ ಎಬಿ (ಉಮ್ಮಿ) ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಿಶೇಷ ಆಹ್ವಾನಿತರಾಗಿ ನಾಸೀರ್ ಕಡಂಬು, ಅಲಿ ಕಡಂಬು, ಡಾಕ್ಟರ್ ಹಸೈನಾರ್ ಹೆಚ್ಎಮ್, ಹಕೀಮ್ ಎಂ, ಮಹಮ್ಮದ್ ಸಿ ಎಚ್, ಹಮೀದ್ ಟಿ, ಇರ್ಶಾದ್ ಇಂಜಿನಿಯರ್, ಮಜೀದ್ ಟಿ ಎಂ, ಅಬ್ದುಲ್ ಕುಂಞಿ, ನೂರುದ್ದೀನ್ ಕೆ, ರಫೀಕ್ ಪಿ, ಅಶ್ರಫ್ ಎಬಿ, ಹಾರಿಸ್ ಆರ್ಸಿಕೆ, ಆಸೀಸ್ ಕೆ, ಮಜೀದ್ ದೀಪಕ್ ಮುಂತಾದ ಹಲವಾರು ಗಣ್ಯರು ಮತ್ತು ಕಮಿಟಿ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಕೊನೆಯಲ್ಲಿ ಕಾರ್ಯದರ್ಶಿ ನಿಯಾಝ್ ಎಂ ಕೆ ಧನ್ಯವಾದವಿತ್ತರು.
ಧಾರ್ಮಿಕ, ಸಾಮಾಜಿಕ, ಜನಸೇವಾ ಕರ್ಮರಂಗದಲ್ಲಿ ಸದಾ ಮುಂಚೂಣಿಯಲ್ಲಿರುವ
“ಕೊಡಂಗಾಯಿ” ಪ್ರಕೃತಿ ರಮಣೀಯತೆಗೆ ಹೆಸರಾಗಿರುವ ಹಾಗೆಯೇ ಸಾಂಘಿಕ ಚಟುವಟಿಕೆಗಳಿಗೂ ಹೆಸರುವಾಸಿ.
ಅನೇಕ ಬಡ – ನಿರ್ಗತಿಕ ಕುಟುಂಬಗಳ ಕಷ್ಟಗಳ ಬೇಗೆಗೆ ಸಹಾಯದ ತಣ್ಣೀರ ಸಿಂಚನ ನೀಡಿ ಅವರ ಆತ್ಮಾರ್ಥ ಪ್ರಾರ್ಥನೆ ಹಾಗೂ ಶ್ಲಾಘನೆಗೆ ಪಾತ್ರವಾದ, ಸಮಾಜ ಸೇವೆಯಲ್ಲಿ ಸನ್ನಧ್ಧ ಸೈನಿಕರಾಗಿ ಕ್ರಿಯಾಶೀಲ ರಾಗಿರುವ ಯುವ ಪಡೆ ಮರ್ಹಬಾ ಕಮ್ಯೂನಿಟಿ ಟ್ರಸ್ಟ್ MCT ಕೊಡಂಗಾಯಿ.
(✒️ರಮೀಝ್ ಎಂ ಕೆ ತಾಯಿಫ್)
















ಇನ್ನಷ್ಟು ಸುದ್ದಿಗಳು
ಮಾದಕ ವಸ್ತು ‘ಖಾತ್’ ಮಾರಾಟ: ಭಾರತೀಯ ಪ್ರಜೆ ಸೌದಿಯಲ್ಲಿ ಬಂಧನ
ಅನಿವಾಸಿಗಳಿಗೆ ಶುಭ ಸುದ್ದಿ: ಕುವೈತ್ನಿಂದ ಭಾರತೀಯ ವಿಮಾನ ಸೇವೆಗಳು ಪುನರಾರಂಭ
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಗುಡ್ ನ್ಯೂಸ್: 20 ಕಿ.ಮೀ ವ್ಯಾಪ್ತಿಯವರಿಗೆ ಡಿಜಿಟಲ್ ಪಾಸ್ ಸೌಲಭ್ಯ!
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ಗೆ ಭರ್ಜರಿ ಗೆಲುವು- ಆಡಳಿತದ ಹಾದಿಗೆ ಸಿಕ್ಕ ಮುದ್ರೆ ಎಂದ ಸಿಎಂ ಡಿ.ಕೆ. ಶಿವಕುಮಾರ್
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
‘ಗಲ್ಫ್ ಪ್ರದೇಶದ ಸಂಘರ್ಷಗಳನ್ನು ಭಾರತಕ್ಕೆ ನಿರ್ಲಕ್ಷಿಸಲು ಸಾಧ್ಯವಿಲ್ಲ’ – ಭಾರತೀಯ ರಾಯಭಾರಿ ಡಾ. ಸುಹೈಲ್ ಅಜಾಝ್ ಖಾನ್
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ: ‘E-GEN ಸ್ಕಾಲರ್ಶಿಪ್’ ಗೆ ಅಧಿಕೃತ ಚಾಲನೆ
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ