ವಿಟ್ಲ: ಮರ್ಹಬಾ ಕಮ್ಯೂನಿಟಿ ಟ್ರಸ್ಟ್ MCT ಕೊಡಂಗಾಯಿ ಇದರ ನೂತನ ಕಛೇರಿಯನ್ನು ಕೊಡಂಗಾಯಿ ಹೃದಯ ಭಾಗದಲ್ಲಿ ಊರ – ಪರವೂರ ಅತಿಥಿಗಳ ಸಮ್ಮುಖದಲ್ಲಿ ಸ್ಥಳೀಯ ಖತೀಬ್ ಬಹುಮಾನ್ಯ ಬಿ ಎ ಸಿದ್ದೀಕ್ ಅರ್ಶದಿ ಉಸ್ತಾದರು ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಎ ಎಂ ಮಹಮ್ಮದ್ ಕುಂಞ ವಹಿಸಿದ್ದರು, ಅಂಚು ಕೊಡಂಗಾಯಿ ಸ್ವಾಗತಿಸಿದರು.
ಸಾರ್ವಜನಿಕ ಸೇವೆಗಾಗಿ ಹಲವಾರು ಪದ್ಧತಿಗಳನ್ನು ರೂಪಿಸಿ ಕಾರ್ಯಾಚರಿಸುತ್ತಿರುವ MCT ನಡೆಗೆ ರವೀಶ್ ಶೆಟ್ಟಿ ಕರ್ಕಳ, ಸಂದೇಶ್ ಶೆಟ್ಟಿ ಬಿಕ್ನಾಜೆ, ಹಾಜಿ ಹಮೀದ್ ಕೊಡಂಗಾಯಿ ಮತ್ತು ಹಕೀಮ್ ಪರ್ತಿಪ್ಪಾಡಿ ಶುಭ ಹಾರೈಸಿದರು.
ವಿಶೇಷವಾಗಿ ಸಂಘಟನೆಗೆ ಶಕ್ತಿ ತುಂಬುವ ಅಬ್ದುಲ್ ರಝಾಕ್ ಎಂ ಕೆ ಮತ್ತು ಅಶ್ರಫ್ ಎಬಿ (ಉಮ್ಮಿ) ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಿಶೇಷ ಆಹ್ವಾನಿತರಾಗಿ ನಾಸೀರ್ ಕಡಂಬು, ಅಲಿ ಕಡಂಬು, ಡಾಕ್ಟರ್ ಹಸೈನಾರ್ ಹೆಚ್ಎಮ್, ಹಕೀಮ್ ಎಂ, ಮಹಮ್ಮದ್ ಸಿ ಎಚ್, ಹಮೀದ್ ಟಿ, ಇರ್ಶಾದ್ ಇಂಜಿನಿಯರ್, ಮಜೀದ್ ಟಿ ಎಂ, ಅಬ್ದುಲ್ ಕುಂಞಿ, ನೂರುದ್ದೀನ್ ಕೆ, ರಫೀಕ್ ಪಿ, ಅಶ್ರಫ್ ಎಬಿ, ಹಾರಿಸ್ ಆರ್ಸಿಕೆ, ಆಸೀಸ್ ಕೆ, ಮಜೀದ್ ದೀಪಕ್ ಮುಂತಾದ ಹಲವಾರು ಗಣ್ಯರು ಮತ್ತು ಕಮಿಟಿ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಕೊನೆಯಲ್ಲಿ ಕಾರ್ಯದರ್ಶಿ ನಿಯಾಝ್ ಎಂ ಕೆ ಧನ್ಯವಾದವಿತ್ತರು.
ಧಾರ್ಮಿಕ, ಸಾಮಾಜಿಕ, ಜನಸೇವಾ ಕರ್ಮರಂಗದಲ್ಲಿ ಸದಾ ಮುಂಚೂಣಿಯಲ್ಲಿರುವ
“ಕೊಡಂಗಾಯಿ” ಪ್ರಕೃತಿ ರಮಣೀಯತೆಗೆ ಹೆಸರಾಗಿರುವ ಹಾಗೆಯೇ ಸಾಂಘಿಕ ಚಟುವಟಿಕೆಗಳಿಗೂ ಹೆಸರುವಾಸಿ.
ಅನೇಕ ಬಡ – ನಿರ್ಗತಿಕ ಕುಟುಂಬಗಳ ಕಷ್ಟಗಳ ಬೇಗೆಗೆ ಸಹಾಯದ ತಣ್ಣೀರ ಸಿಂಚನ ನೀಡಿ ಅವರ ಆತ್ಮಾರ್ಥ ಪ್ರಾರ್ಥನೆ ಹಾಗೂ ಶ್ಲಾಘನೆಗೆ ಪಾತ್ರವಾದ, ಸಮಾಜ ಸೇವೆಯಲ್ಲಿ ಸನ್ನಧ್ಧ ಸೈನಿಕರಾಗಿ ಕ್ರಿಯಾಶೀಲ ರಾಗಿರುವ ಯುವ ಪಡೆ ಮರ್ಹಬಾ ಕಮ್ಯೂನಿಟಿ ಟ್ರಸ್ಟ್ MCT ಕೊಡಂಗಾಯಿ.
(✒️ರಮೀಝ್ ಎಂ ಕೆ ತಾಯಿಫ್)
















ಇನ್ನಷ್ಟು ಸುದ್ದಿಗಳು
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್