ಅಜ್ಮಾನ್: ಕರ್ನಾಟಕ ಕಲ್ಚರಲ್ ಫೌಂಡೇಶನ್ ಅಜ್ಮಾನ್ ಝೋನ್ ವತಿಯಿಂದ ಅಕ್ಟೋಬರ್ 1 ರಂದು ನಡೆಯುವ ಬೃಹತ್ ಮೀಲಾದ್ ಸಮಾವೇಶ ನಡೆಯಲಿದೆ.
ಕಾರ್ಯಕ್ರಮದ ಯಶಸ್ಸಿಗಾಗಿ, ಸ್ವಾಗತ ಸಮಿತಿ ರಚನೆಯು KCF ಅಜ್ಮಾನ್ ಉಮರಾ ನಾಯಕ ಖಾಲಿದ್ ಮೂಡಬಿದ್ರೆ ನಿವಾಸದಲ್ಲಿ ಝೋನ್ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಅಮಾನಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಝೋನ್ ಕಾರ್ಯದರ್ಶಿ ಅಬ್ದುಲ್ ಖಾದರ್ ಕೊಡಿಪ್ಪಾಡಿ ಸ್ವಾಗತ ಕೋರಿದರು. ಕೆಸಿಎಫ್ ರಾಷ್ಟ್ರೀಯ ಇಹ್ಸಾನ್ ಅಧ್ಯಕ್ಷ ಅಬ್ದುಲ್ ಖಾದರ್ ಸಅದಿ ಸಭೆಯನ್ನು ಉದ್ಘಾಟಿಸಿದರು.
ಅಧ್ಯಕ್ಷೀಯ ಭಾಷಣದಲ್ಲಿ ಅಮಾನಿ ಉಸ್ತಾದರು, ಕರುಣೆಯ ಪ್ರವಾದಿ (ಸ ಅ) ರು ಒಂದು ಸುಂದರವಾದ ಕುಲೀನವಾದ ಕುಟುಂಬದಲ್ಲಿ ಜನಿಸಿದ ಗಂಡು ಮಗು ಆಗಿದ್ದರಿಂದ ಹೆಮ್ಮೆ ಪಡುತ್ತಾ ನಂತರದ ದಿನಗಳಲ್ಲಿ ಪ್ರವಾದಿ (ಸ ಅ) ರನ್ನು ದ್ವೇಷಿಸುತ್ತಾ ಕೊನೇ ಕ್ಷಣದಲ್ಲಿ ಅವರಲ್ಲಿ ಬಹುತೇಕ ಮಂದಿ ಪವಿತ್ರ ಇಸ್ಲಾಮ್ ಧರ್ಮ ಸ್ವೀಕರಿಸಲು ನೆಬಿಯವರ ಮೇಲ್ಮೆ ಗುಣ ಕಾರಣವಾಯಿತು ಎಂದು ವಿವರಿಸಿದರು.
“ಜಗತ್ತಿಗೆ ಕರುಣೆಯ ಪ್ರವಾದಿ (ಸ ಅ) ರಬೀಹ್ 23” ಎಂಬ ಕ್ಯಾಂಪೇನ್ ಅನ್ನು ಝೋನ್ ಮಟ್ಟದಲ್ಲಿ ಸಯ್ಯಿದ್ ತ್ವಾಹಿರ್ ತಂಙಳ್ ಅಧಿಕೃತವಾಗಿ ಚಾಲನೆ ನೀಡಿದರು.
ಸ್ವಾಗತ ಸಮಿತಿ ಪದಾಧಿಕಾರಿಗಳು
ಗೌರವಾಧ್ಯಕ್ಷ: ಸಯ್ಯಿದ್ ತ್ವಾಹಿರ್ ತಂಙಳ್, ಚೇರ್ಮನ್: ಖಾಲಿದ್ ಮೂಡಬಿದ್ರೆ, ವರ್ಕಿಂಗ್ ಚೇರ್ಮನ್: ಅಬ್ದುಲ್ ಖಾದರ್ ಸಅದಿ, ಜನರಲ್
ಕನ್ವೀನರ್: ಉಮರ್ ಸುಳ್ಯ, ಕನ್ವೀನರ್, ಮೊಹಮ್ಮದ್ ಅಲಿ ಕುಡ್ತಮುಗೆರು, ಖಜಾಂಜಿಯಾಗಿ ಮೊಹಮ್ಮದ್ ಅಯ್ಯೂಬ್ ಅಮ್ಮೆಂಬಳ, ಫೈನಾನ್ಸ್ ಚೇರ್ಮನ್, ಸಿದ್ದೀಕ್ ಪಾಣೆಮಂಗಳೂರು, ಮೀಡಿಯಾ ಮತ್ತು ಪಬ್ಲಿಕೇಶನ್ ಚೇರ್ಮನ್ ಆಗಿ ಅಶ್ರಫ್ ಸಖಾಫಿ ಕರ್ಪಾಡಿ, ಕನ್ವೀನರ್ ತಾಜುದ್ದೀನ್ ಉಳ್ಳಾಲ ಆಯ್ಕೆಯಾದರು.
ಹಾಗೂ ಕಾರ್ಯಕ್ರಮದ ವಿವಿಧ ವಿಭಾಗಗಳಿಗೆ ಉಸ್ತುವಾರಿಗಳನ್ನು ಆರಿಸಲಾಯಿತು. ಉಮರ್ ಸುಳ್ಯ ಧನ್ಯವಾದ ಸಲ್ಲಿಸಿದರು.
















ಇನ್ನಷ್ಟು ಸುದ್ದಿಗಳು
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ