ಸ್ಟಾಕ್ ಹೋಮ್: ಪವಿತ್ರ ಖುರ್ಆನ್ ದಹಿಸಿ ಪ್ರತಿಭಟನೆಗೆ ಅನುಮತಿ ನೀಡಿದ ಸ್ವೀಡನ್ ನ್ಯಾಯಾಲಯದ ತೀರ್ಪಿನ ವಿರುದ್ಧ ವ್ಯಾಪಕ ಆಕ್ರೋಶ.
ಬಕ್ರೀದ್ ಹಬ್ಬದ ದಿನದಂದು ರಾಜಧಾನಿ ಸ್ಟಾಕ್ಹೋಮ್ನಲ್ಲಿರುವ ಮಸೀದಿಯ ಮುಂದೆ ಖುರ್ಆನ್ ಅನ್ನು ದಹಿಸಿ ಪ್ರತಿಭಟಿಸಲು ಮೇಲ್ಮನವಿ ನ್ಯಾಯಾಲಯ ಅನುಮತಿ ನೀಡಿದೆ. ನಗರದ ಮಧ್ಯಭಾಗದಲ್ಲಿರುವ ಸೊಡರ್ಮಾಮ್ ದ್ವೀಪದಲ್ಲಿರುವ ಮುಖ್ಯ ಮಸೀದಿಯ ಪರಿಸರ ಪ್ರತಿಭಟನೆ ನಡೆಸಲಾಗುವುದು.
ಖುರ್ಆನ್ ದಹನಕ್ಕೆ ಪೊಲೀಸರು ಅನುಮತಿ ನೀಡದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ನ್ಯಾಯಾಲಯದ ಮೊರೆ ಹೋಗಿದ್ದರು.
ಕಳೆದ ಜನವರಿಯಲ್ಲಿ ಟರ್ಕಿಯ ರಾಯಭಾರಿ ಕಚೇರಿ ಎದುರು ಇದೇ ರೀತಿಯ ಪ್ರತಿಭಟನೆ ನಡೆಸಲಾಗಿತ್ತು. ಟರ್ಕಿ ಮತ್ತು ಇತರ ಮುಸ್ಲಿಂ ರಾಷ್ಟ್ರಗಳು ಈ ವಿಷಯದ ಬಗ್ಗೆ ತೀವ್ರ ಪ್ರತಿಭಟನೆಗಳನ್ನು ಎತ್ತಿದವು.
ಟರ್ಕಿ ಅಧ್ಯಕ್ಷ ರಜಬ್ ತಯ್ಯಿಬ್ ಉರ್ದುಗಾನ್ ಸ್ವೀಡನ್ ನ ನ್ಯಾಟೋ ಸದಸ್ಯತ್ವಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿದ್ದರು.
ಬಾಗ್ದಾದ್ ನಲ್ಲಿ ಸ್ವೀಡಿಷ್ ರಾಯಭಾರ ಕಚೇರಿಗೆ ಮುತ್ತಿಗೆ
ಇರಾಕ್ ನ ರಾಜಧಾನಿ ಬಾಗ್ದಾದ್ ನಲ್ಲಿ ಸಾವಿರಾರು ಪ್ರತಿಭಟನಾಕಾರರು ಸ್ವೀಡನ್ನಲ್ಲಿ ಕುರಾನ್ನ ಪ್ರತಿಯನ್ನು ಸುಟ್ಟುಹಾಕಿದ ಒಂದು ದಿನದ ನಂತರ, ಗುರುವಾರ ಬಾಗ್ದಾದ್ನಲ್ಲಿರುವ ಸ್ವೀಡಿಷ್ ರಾಯಭಾರ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ.
ಭಾರೀ ಗಾತ್ರದ ಬ್ಯಾರಿಕೇಡನ್ನು ಹತ್ತಿ ರಾಯಭಾರ ಕಚೇರಿಯ ವರಾಂಡದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಬಳಿಕ ಇರಾಕಿನ ಭದ್ರತಾ ಪಡೆಗಳು ಪ್ರತಿಭಟನಾಕಾರರನ್ನು ಚದುರಿಸಿದರು.
ಪ್ರಬಲ ಇರಾಕಿನ ಶಿಯಾ ಧರ್ಮಗುರು ಮುಕ್ತದಾ ಅಲ್-ಸದರ್ ಪ್ರತಿಭಟನೆಗೆ ಆದೇಶಿಸಿದ್ದು, ಬಾಗ್ದಾದ್ನಲ್ಲಿರುವ ಸ್ವೀಡಿಷ್ ರಾಯಭಾರಿಯನ್ನು ಹೊರಹಾಕುವಂತೆ ಕರೆ ನೀಡಿದ್ದಾರೆ.


















ಇನ್ನಷ್ಟು ಸುದ್ದಿಗಳು
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ