ದಮ್ಮಾಮ್ : ಕಳೆದ ಹತ್ತು ವರ್ಷಗಳಿಂದ ದಮ್ಮಾಂ 91ರಲ್ಲಿ ಬಕಾಲ ನಡೆಸುತ್ತಿದ್ದ ಕೇರಳ ತಿರುವನಂತಪುರಂ ಸ್ವದೇಶಿ ಮುಹಮ್ಮದ್ ಸಿದ್ದೀಕ್ ಎನ್ನುವ ಸಹೋದರನು ಕೆಲವು ದಿನಗಳ ಮುನ್ನ ಅಸೌಖ್ಯದ ಕಾರಣದಿಂದ ಸೊಂಟದ ಕೆಳಭಾಗವು ಸಂಪೂರ್ಣ ನಿಶ್ಚಲವಾಗಿ ಯಾರ ಸಹಾಯವೂ ಇಲ್ಲದೇ ಎದ್ದೇಳದ ಸ್ಥಿತಿಯಲ್ಲಿದ್ದರು.
ಕಳೆದ ಐದು ವರ್ಷಗಳಿಂದ ಊರಿಗೆ ತೆರಳದೇ ಇದ್ದ ಇವರ ಬಗ್ಗೆ ಕರ್ನಾಟಕ ಕಲ್ಕರಲ್ ಫೌಂಡೇಶನ್ (ಕೆ.ಸಿ.ಎಫ್) ನಾರ್ತ್ ಸೆಕ್ಟರ್ ಕಾರ್ಯಕರ್ತನಾದ ನಾಸಿರ್ ಕುತ್ತಾರ್ ರವರು ಕೆ.ಸಿ.ಎಫ್ ದಮ್ಮಾಂ ಝೋನ್ ಸಾಂತ್ವನ ವಿಭಾಗದ ಅಧ್ಯಕ್ಷರಾದ ಬಾಷಾ ಗಂಗಾವಳಿ ಹಾಗೂ ಕೆ.ಸಿ.ಎಫ್ ನಾಯಕರಾದ ಮುಹಮ್ಮದ್ ಮಲೆಬೆಟ್ಟು ರವರಿಗೆ ವಿಷಯ ತಿಳಿಸಿದಾಗ, ತಕ್ಷಣವೇ ಸ್ಪಂದಿಸಿ ಆ ಸಹೋದರನ ಚಿಕಿತ್ಸೆ ಮತ್ತು ಊರಿಗೆ ಕಳುಹಿಸಲು ಬೇಕಾದ ಎಲ್ಲಾ ದಾಖಲೆಗಳನ್ನು ಸರಿಪಡಿಸಿ 28 ಮಾರ್ಚ್ 2023 ರ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಊರಿಗೆ ಕಳುಹಿಸಿಕೊಟ್ಟಿದ್ದಾರೆ. ಜೊತೆಗೆ ICF ನಾಯಕರಾದ ಕೇರಳ ಸ್ವದೇಶಿ ನಾಸಿರ್ ರವರು ಕೂಡಾ ಸಹಕರಿಸಿದ್ದಾರೆ.
ಕೆಸಿಎಫ್ ದಮ್ಮಾಂ ಝೋನ್
















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ