ಬೆಂಗಳೂರು : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್ ಬೆಂಗಳೂರು ಜಿಲ್ಲೆ ಇದರ ವಾರ್ಷೀಕ ಮಹಾಸಭೆಯು ಗುಲ್ಶನ್ ಶಾದಿ ಮಹಲ್ ಶಿವಾಜಿನಗರ ದಲ್ಲಿ ಜಿಲ್ಲಾ ಅಧ್ಯಕ್ಷರಾದ ಶಂಶುದ್ದೀನ್ ಅಝ್ಅರಿ ಉಸ್ತಾದರ ಅಧ್ಯಕ್ಷತೆಯಲ್ಲಿ ಜರಗಿತು.


Sys ದಹ್ ವಾ ಜಿಲ್ಲಾ ಕಾರ್ಯದರ್ಶಿ ತಾಜುದ್ದೀನ್ ಫಾಳಿಲಿ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸಿ ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಬೀಬ್ ರವರು ವಾರ್ಷಿಕ ವರದಿಯನ್ನೂ ವಾಚಿಸಿ , ಕೋಶಾಧಿಕಾರಿ ಮಜೀದ್ ಮಾರ್ಥಹಳ್ಳಿರವರು ಲೆಕ್ಕಪತ್ರ ವನ್ನು ಮಂಡಿಸಿದರು.
ಬಳಿಕ ಅಲ್ತಾಫ್ ಅಲಿ Qd, ಜಮಾಲುದ್ದೀನ್ ಸಖಾಫಿ ರೈಂಬೋ , ಸ್ವಾದಿಕ್ ಸಖಾಫಿ CC, ಶರೀಫ್ ಮಡಿವಾಳ ಪಬ್ಲಿಕೇಶನ್ , ಅಬೂಬಕ್ಕರ್ ಅಹ್ಸನಿ ದವಾ, ಫಾರೂಕ್ ಅಮಾನಿ ಮೀಡಿಯಾ, ಸಿನಾನ್ ಕ್ಯಾಂಪಸ್ ನ ವರದಿಯನ್ನು ಕ್ರಮವಾಗಿ ವಾಚಿಸಿದರು.
ನಿರೀಕ್ಷಕರಾಗಿ ಆಗಮಿಸಿದ ರಾಜ್ಯ ಸಮಿತಿಯ ದವಾ ಕಾರ್ಯದರ್ಶಿ ಮುನೀರ್ ಸಖಾಫಿ ಉಸ್ತಾದರು ಸಭೆಯನ್ನು ನಿಯಂತ್ರಿಸಿದರು .
ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಚೇರ್ಮಾನ್ ಆದ ಮೌಲಾನಾ ಶಾಫಿ ಸಹದಿ ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆಗೆ ನೇತೃತ್ವ ನೀಡಿದರು.
ನೂತನ ಸಮಿತಿಯ ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ನಯಿಮಿ ಉಸ್ತಾದ್ ,ಪ್ರಧಾನ ಕಾರ್ಯದರ್ಶಿ ಯಾಗಿ ಶಬೀಬ್ ಹಲ್ಸೂರು ,ಕೋಶಾಧಿಕಾರಿಯಾಗಿ ಅಕ್ತರ್ ಹುಸೈನ್ ,ಕ್ಯಾಬಿನೆಟ್ ಕಾರ್ಯದರ್ಶಿಯಾಗಿ ಸಿನಾನ್ , QD ಕಾರ್ಯದರ್ಶಿಯಾಗಿ ಫಾರೂಕ್ ಅಮಾನಿ, CC ಕಾರ್ಯದರ್ಶಿ ಯಾಗಿ ಅಲ್ತಾಫ್ ಅಲಿ, ದವಾ ಕಾರ್ಯದರ್ಶಿಯಾಗಿ ಹೈದರ್ ಎಲೆಕ್ಟ್ರಾನಿಕ್ ಸಿಟಿ, ಕ್ಯಾಂಪಸ್ ಕಾರ್ಯದರ್ಶಿ ಯಾಗಿ ನಿಝಾರ್ ಖಾದ್ರಿ ಮೆಜೆಸ್ಟಿಕ್, IT ಕಾರ್ಯದರ್ಶಿಯಾಗಿ ನೌಫಲ್ ಮೆಜೆಸ್ಟಿಕ್ , ರೈನ್ಬೋ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಅಹ್ಸನಿ , ಪಬ್ಲಿಕೇಶನ್ ಕಾರ್ಯದರ್ಶಿಯಾಗಿ ಸಿದ್ದೀಕ್ TC ಪಾಲ್ಯ, ಮೀಡಿಯಾ ಕಾರ್ಯದರ್ಶಿಯಾಗಿ ಸಂಶುದ್ದೀನ್ ಜೆ.ಪಿ ನಗರ ,ವಿಸ್ಢಂ ಕಾರ್ಯದರ್ಶಿ ಯಾಗಿ ಖಲೀಲ್ ಹೆಗ್ಡೆ ನಗರ್, ಉರ್ದು ಕಾರ್ಯದರ್ಶಿ ಯಾಗಿ ಯೂಸುಫ್ ಮತ್ತು ಸೆಕ್ರೆಟರಿಯೆಟ್ ಸದಸ್ಯರಾಗಿ ಶಂಶುದ್ದೀನ್ ಅಝ್ಅರಿ, ಮಜೀದ್ ಮಾರ್ಥಹಲ್ಲಿ,ಶಾಪಿ ಸಾದಿ ಮೆಜೆಸ್ಟಿಕ್, ಶಿಹಾಬ್ ಮಡಿವಾಳ ಹಾಗೂ 13 ಕಾರ್ಯಕಾರಿಣಿ ಸದಸ್ಯರನ್ನೊಳಗೊಂಡ ಸಮಿತಿಯನ್ನು ಆರಿಸಲಾಯಿತು.
ಮುಂದುವರಿದ ಸಭೆಯಲ್ಲಿ ರಾಜ್ಯ ಕಾರ್ಯದರ್ಶಿ ಮುನೀರ್ ಸಖಾಫಿ ಪ್ರಾಸ್ತಾವಿಕ ಮಾತನಾಡಿದರು .
Sys ಜಿಲ್ಲಾ ಅಧ್ಯಕ್ಷರಾದ ಜಾಫರ್ ನೂರಾನಿ ,ಉಪಾಧ್ಯಕ್ಷರಾದ ಅನಸ್ ಸಿದ್ದೀಕಿ ಶಿರಿಯ,ಸ್ವಾಲಿಹ್,ಶಿಹಾಬ್ ಮಡಿವಾಳ ಮುಂತಾದ ಹಲವು ನಾಯಕರು ಉಪಸ್ಥಿತಿದ್ದರು.
ಜಿಲ್ಲಾ ಕಾರ್ಯದರ್ಶಿ ಶಬೀಬ್ ಸ್ವಾಗತಿಸಿ ಸಿನಾನ್ ಧನ್ಯವಾದವಿತ್ತರು .
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ