ಮಂಗಳೂರು: ಇತ್ತೀಚೆಗಷ್ಟೇ ಪ್ರವೀಣ್ ತೊಗಾಡಿಯಾ ಮುಸ್ಲಿಮ್ ಹೊರತಾದ ಸಂವಿಧಾನದ ಬಗ್ಗೆ ಹೇಳಿಕೆ ಕೊಟ್ಟು ನಗೆಪಾಟಲಿಗೀಡಾದ ಬೆನ್ನಿಗೇ,ಮಂಗಳೂರಿನ ಕದ್ರಿ ಕ್ಷೇತ್ರದ ಜಾತ್ರೆಯ ಹೊರಾಂಗಣದಲ್ಲಿ ಸಂಘ ಪರಿವಾರವು ಮುಸ್ಲಿಮ್ ವರ್ತಕರಿಗೆ ನಿಷೇಧದ ಫಲಕ ಅಳವಡಿಸಿದೆ!.ಸಂಘ ಪರಿವಾರ ಇನ್ನೂ ಕೂಡಾ ತನ್ನ ಎಂದಿನ ಚಾಳಿಯಾದ ಮುಸ್ಲಿಮ್ ವರ್ತಕರ ಬಹಿಷ್ಕಾರ ವನ್ನು ತ್ಯಜಿಸಿದಂತೆ ಕಾಣುತ್ತಿಲ್ಲ!.
ದ.ಕ ಜಿಲ್ಲೆ ಸೇರಿದಂತೆ ರಾಜ್ಯದ ಇತರೆಡೆ ವ್ಯಾಪಾರ ವಹಿವಾಟು ನಡೆಸುವ ಸಂಘ ಪರಿವಾರದ ಪೋಷಕ ವರ್ತಕರು, ಉದ್ಯಮಿಗಳು ಸಾಧ್ಯವಾದರೆ ತಮ್ಮ ಮಳಿಗೆಗಳಿಗೆ ಮುಸ್ಲಿಮ್ ಗ್ರಾಹಕರನ್ನು ಬಹಿರಂಗವಾಗಿ ನಿಷೇಧಿಸುವ ಫಲಕಗಳನ್ನು ಅಳವಡಿಸಲಿ! ಎಂದು ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ಅವರು ಸವಾಲು ಹಾಕಿದ್ದಾರೆ.
ಬೀದಿ ವ್ಯಾಪಾರವನ್ನೇ ತಲೆಮಾರುಗಳಿಂದ ನಂಬಿ ಬಂದಿರುವ ಬೀದಿ ವರ್ಥಕರನ್ನು ನಿಷೇಧಿಸುವ ಚಾಳಿಯನ್ನು ಬದಿಗಿಟ್ಟು, ಉದ್ಯಮ ಬಹಿಷ್ಕಾರವನ್ನು ಪ್ರೋತ್ಸಾಹಿಸಿ, ರಾಜಕೀಯ ಮತ ದ್ರುವೀಕರಣ ಮಾಡುತ್ತಿರುವ ಸಂಘದ ಇತರ ಉದ್ಯಮಿಗಳಿಗೆ, ಮುಸ್ಲಿಮ್ ಗ್ರಾಹಕ ರಹಿತ ವ್ಯವಸ್ಥೆ ಏನೆಂದು ಆಗ ಅರಿವಾಗುವ ಸಾದ್ಯತೆ ಅಧಿಕ.
ಈ ದೇಶದಲ್ಲಿ ಅನಾದಿ ಕಾಲದಿಂದಲೂ ಕೊಡು, ಕೊಳ್ಳುವಿಕೆಯ ಪ್ರಭಲ ಸಂಸ್ಕೃತಿ ಯಿಂದಾಗಿ ಆರ್ಥಿಕ ವ್ಯವಹಾರ ನೆಲೆ ನಿಂತಿದೆ. ಮುಸ್ಲಿಮರೊಂದಿಗೆ ವ್ಯವಹಾರ ನಿಲ್ಲಿಸುವುದು, ಉಪವಾಸ ಇರುವುದು ಎರಡೂ ಒಂದೇ ಎಂಬ ಸ್ಥಿತಿಗೆ ತಳ್ಳುವಂತಾಗದಿರಲಿ ಎಂದು ಕೆ.ಅಶ್ರಫ್( ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ತಾಕೀತು ನೀಡಿದರು.
















ಇನ್ನಷ್ಟು ಸುದ್ದಿಗಳು
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ