ಮಂಗಳೂರು: ಇತ್ತೀಚೆಗಷ್ಟೇ ಪ್ರವೀಣ್ ತೊಗಾಡಿಯಾ ಮುಸ್ಲಿಮ್ ಹೊರತಾದ ಸಂವಿಧಾನದ ಬಗ್ಗೆ ಹೇಳಿಕೆ ಕೊಟ್ಟು ನಗೆಪಾಟಲಿಗೀಡಾದ ಬೆನ್ನಿಗೇ,ಮಂಗಳೂರಿನ ಕದ್ರಿ ಕ್ಷೇತ್ರದ ಜಾತ್ರೆಯ ಹೊರಾಂಗಣದಲ್ಲಿ ಸಂಘ ಪರಿವಾರವು ಮುಸ್ಲಿಮ್ ವರ್ತಕರಿಗೆ ನಿಷೇಧದ ಫಲಕ ಅಳವಡಿಸಿದೆ!.ಸಂಘ ಪರಿವಾರ ಇನ್ನೂ ಕೂಡಾ ತನ್ನ ಎಂದಿನ ಚಾಳಿಯಾದ ಮುಸ್ಲಿಮ್ ವರ್ತಕರ ಬಹಿಷ್ಕಾರ ವನ್ನು ತ್ಯಜಿಸಿದಂತೆ ಕಾಣುತ್ತಿಲ್ಲ!.
ದ.ಕ ಜಿಲ್ಲೆ ಸೇರಿದಂತೆ ರಾಜ್ಯದ ಇತರೆಡೆ ವ್ಯಾಪಾರ ವಹಿವಾಟು ನಡೆಸುವ ಸಂಘ ಪರಿವಾರದ ಪೋಷಕ ವರ್ತಕರು, ಉದ್ಯಮಿಗಳು ಸಾಧ್ಯವಾದರೆ ತಮ್ಮ ಮಳಿಗೆಗಳಿಗೆ ಮುಸ್ಲಿಮ್ ಗ್ರಾಹಕರನ್ನು ಬಹಿರಂಗವಾಗಿ ನಿಷೇಧಿಸುವ ಫಲಕಗಳನ್ನು ಅಳವಡಿಸಲಿ! ಎಂದು ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ಅವರು ಸವಾಲು ಹಾಕಿದ್ದಾರೆ.
ಬೀದಿ ವ್ಯಾಪಾರವನ್ನೇ ತಲೆಮಾರುಗಳಿಂದ ನಂಬಿ ಬಂದಿರುವ ಬೀದಿ ವರ್ಥಕರನ್ನು ನಿಷೇಧಿಸುವ ಚಾಳಿಯನ್ನು ಬದಿಗಿಟ್ಟು, ಉದ್ಯಮ ಬಹಿಷ್ಕಾರವನ್ನು ಪ್ರೋತ್ಸಾಹಿಸಿ, ರಾಜಕೀಯ ಮತ ದ್ರುವೀಕರಣ ಮಾಡುತ್ತಿರುವ ಸಂಘದ ಇತರ ಉದ್ಯಮಿಗಳಿಗೆ, ಮುಸ್ಲಿಮ್ ಗ್ರಾಹಕ ರಹಿತ ವ್ಯವಸ್ಥೆ ಏನೆಂದು ಆಗ ಅರಿವಾಗುವ ಸಾದ್ಯತೆ ಅಧಿಕ.
ಈ ದೇಶದಲ್ಲಿ ಅನಾದಿ ಕಾಲದಿಂದಲೂ ಕೊಡು, ಕೊಳ್ಳುವಿಕೆಯ ಪ್ರಭಲ ಸಂಸ್ಕೃತಿ ಯಿಂದಾಗಿ ಆರ್ಥಿಕ ವ್ಯವಹಾರ ನೆಲೆ ನಿಂತಿದೆ. ಮುಸ್ಲಿಮರೊಂದಿಗೆ ವ್ಯವಹಾರ ನಿಲ್ಲಿಸುವುದು, ಉಪವಾಸ ಇರುವುದು ಎರಡೂ ಒಂದೇ ಎಂಬ ಸ್ಥಿತಿಗೆ ತಳ್ಳುವಂತಾಗದಿರಲಿ ಎಂದು ಕೆ.ಅಶ್ರಫ್( ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ತಾಕೀತು ನೀಡಿದರು.
















ಇನ್ನಷ್ಟು ಸುದ್ದಿಗಳು
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
SჄS ಬೆಳ್ತಂಗಡಿ ಝೋನ್: ಸಾಂತ್ವನ ಫಂಡ್ ಹಸ್ತಾಂತರ
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮರು ಅರ್ಜಿ ಕಡ್ಡಾಯ- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಮುಂದಿನ 24 ಗಂಟೆಗಳಲ್ಲಿ ಯು.ಎಸ್-ಇರಾನ್ ಶಾಂತಿ ಒಪ್ಪಂದ ಅಂತಿಮ: ಪಾಕ್ ಪ್ರಧಾನಿ ಶಹಬಾಝ್ ಷರೀಫ್
ಮೂವರು ಭಾರತೀಯ ನಾವಿಕರ ಸಾವು: ಯು.ಎಸ್ ವಿರುದ್ಧ ವಿದೇಶಾಂಗ ಸಚಿವ ಜೈಶಂಕರ್ ಆಕ್ರೋಶ
ಜಿದ್ದಾದಲ್ಲಿ ಅಕ್ರಮ ಸಿಹಿತಿಂಡಿ ತಯಾರಿಕಾ ಘಟಕಕ್ಕೆ ಬೀಗ; 20 ಟನ್ ಕೊಳೆತ ಆಹಾರ ಪದಾರ್ಥಗಳ ನಾಶ
‘ಇಸ್ಲಾಂ ಸ್ವೀಕರಿಸಿದ್ದು ನನ್ನ ಸ್ವಂತ ಇಚ್ಛೆಯಿಂದ’ ; ಲವ್ ಜಿಹಾದ್ ಆರೋಪವನ್ನು ತಳ್ಳಿಹಾಕಿದ ಆಯುಷ್ ಮಲಿಕ್ (ಮುಹಮ್ಮದ್ ಅಲಿ)