janadhvani

Kannada Online News Paper

ಟಿಪ್ಪು ಗೈಝ್ ಗೋಳಿಕಟ್ಟೆ ಕನ್ಯಾನ ವತಿಯಿಂದ ಸಂಭ್ರಮದ 75ನೇ ಸ್ವಾತಂತ್ರ್ಯ ದಿನಾಚರಣೆ

ಸ್ವಾತಂತ್ರ್ಯೋತ್ಸವದ 75ನೇ ಅಮೃತ ಮಹೋತ್ಸವದ ಪ್ರಯುಕ್ತ ಟಿಪ್ಪು ಗೈಝ್ ಗೋಳಿಕಟ್ಟೆ ವತಿಯಿಂದ ಸಂಭ್ರಮ,ಸಡಗರದಿಂದ ಸ್ವಾತಂತ್ರ್ಯ ದಿನಾಚಣೆಯನ್ನು 2022 ಅಗಸ್ಚ್ 15 ಸೋಮವಾರ ಬೆಳಗ್ಗೆ 8:30ಕ್ಕೆ ಸರಿಯಾಗಿ ಗೋಳಿಕಟ್ಟೆಯಲ್ಲಿ ಆಚರಿಸಲಾಯಿತು.

ಕೆಎಂ ಅಶ್ರಫ್ ಸಖಾಫಿ ಸ್ವಾತಂತ್ರ್ಯೋತ್ಸವದ ಸಂದೇಶ ಭಾಷಣ ಮಾಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆಪಿ ಅಬ್ದುಲ್ ರಹಿಮಾನ್, ಪಂಚಾಯತ್ ಸದಸ್ಯರಾದ ಮಜೀದ್ ಚೆಡವು, ಎಕ್ಸಲೆಂಟ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷರಾದ ಮಹಮ್ಮದ್ ಕುಂಇಿ ಹಾಜಿ ಗೋಳಿಕಟ್ಟೆ ,ಧಾರ್ಮಿಕ ನೇತಾರರಾದ ಕೆಎಂ ಅಶ್ರಫ್ ಸಖಾಫಿ,ಅಶ್ರಫ್ ಸಖಾಫಿ

ಮಂಡ್ಯೂರು,ಅಝೀಝ್ ಮದನಿ ಗೋಳಿಕಟ್ಟೆ, ಟಿಪ್ಪು ಗೈಝ್ ಗೋಳಿಕಟ್ಟೆ ಗೌರವಧ್ಯಕ್ಷರಾದ ಮಹ್ಮೂದ್ ಮಡಕುಂಜ, ಅಧ್ಯಕ್ಷರಾದ ಅಸ್ಫಾಕ್ ನೆಕ್ಲಾಜೆ, ಮಹಮ್ಮದ್ ಹಾಜಿ ಪರಕ್ಕಜೆ ,ಗಂಗಾದರ್ ಕನ್ಯಾನ ಸೇರಿದಂತೆ ಊರಿನ ಹಲವಾರು ಗಣ್ಯ ವ್ಯಕ್ತಿಗಳು, ಟಿಪ್ಪು ಗೈಝ್ ಗೋಳಿಕಟ್ಟೆ ಸದಸ್ಯರು ಭಾಗವಹಿಸಿದ್ದರು..