janadhvani

Kannada Online News Paper

ಅದ್ಭುತ ಭಾಷಣಗಾರ,ಸುನ್ನೀ ಮುಖಂಡ ಅಬ್ದುಲ್ಲತೀಫ್ ಸಅದಿ ಪಝಸ್ಸಿ ವಫಾತ್

ಕೇರಳ ಮುಸ್ಲಿಂ ಜಮಾತ್ ವತಿಯಿಂದ ಇಂದು ಕಣ್ಣೂರಿನಲ್ಲಿ ಆಯೋಜಿಸಲಾದ ಕಲೆಕ್ಟರೇಟ್ ಮಾರ್ಚ್ ನಲ್ಲಿ ಎನ್.ಅಬ್ದುಲತೀಫ್ ಸಅದಿ ಪಝಸ್ಸಿ ಮುಖ್ಯ ಭಾಷಣ ಮಾಡಿದ್ದರು

ಕಣ್ಣೂರು | ಕೇರಳ ಮುಸ್ಲಿಂ ಜಮಾಅತ್ ಜಿಲ್ಲಾ ಉಪಾಧ್ಯಕ್ಷ ಮತ್ತು ಸುನ್ನಿ ಮುಖಂಡರಾದ ಎನ್ ಅಬ್ದುಲ್ಲತೀಫ್ ಸಅದಿ ಪಝಸ್ಸಿ ವಫಾತಾದರು.

ಅವರು ಇಂದು ದಿವಂಗತ ಕೆ.ಎಂ.ಬಶೀರ್ ಅವರಿಗೆ ನ್ಯಾಯ ಕೋರಿ ಕಣ್ಣೂರಿನಲ್ಲಿ ಕೇರಳ ಮುಸ್ಲಿಂ ಜಮಾಅತ್ ಆಯೋಜಿಸಿದ್ದ ಕಲೆಕ್ಟರೇಟ್ ಮಾರ್ಚ್ ನಲ್ಲಿ ಪಾಲ್ಗೊಂಡು ಹಿಂತಿರುಗಿದ ನಂತರ ಅವರಿಗೆ ಎದೆನೋವು ಕಾಣಿಸಿಕೊಂಡಿದೆ.ತಕ್ಷಣ ಕಣ್ಣೂರು ಎಕೆಜಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಾಣ ಉಳಿಸಲಾಗಲಿಲ್ಲ.

ಕೇರಳ ಮುಸ್ಲಿಂ ಜಮಾಅತ್ ವತಿಯಿಂದ ಇಂದು ಕಣ್ಣೂರಿನಲ್ಲಿ ಆಯೋಜಿಸಲಾದ ಕಲೆಕ್ಟರೇಟ್ ಮಾರ್ಚ್ ನಲ್ಲಿ ಎನ್.ಅಬ್ದುಲತೀಫ್ ಸಅದಿ ಪಝಸ್ಸಿ ಮುಖ್ಯ ಭಾಷಣ ಮಾಡಿದ್ದರು.

ಹೃದಯಸ್ಪರ್ಶಿಯಾದ ತಮ್ಮ ಅಭೂತಪೂರ್ವ ಭಾಷಣಾ ಶೈಲಿಯಿಂದ ಜನಮನಗೆದ್ದ ಪಝಶ್ಶಿ ಉಸ್ತಾದರು, ಸುನ್ನೀ ಸಂಘಟನಾ ರಂಗದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು.

ಇಂದು ಸಂಜೆ ಮೂರೂವರೆ ಗಂಟೆ ಸುಮಾರಿಗೆ ಅವರು ಇಹಲೋಕಕ್ಕೆ ವಿದಾಯ ಕೋರಿದರು.