ಸೌದಿ ಅರೇಬಿಯಾದಲ್ಲಿ ಮನೆ ಚಾಲಕರು ಮತ್ತು ಗೃಹ ಕಾರ್ಮಿಕರಿಗೆ ಲೆವಿ ಅನ್ವಯಿಸುವ ನಿರ್ಧಾರ ಜಾರಿಗೆ ಬಂದಿದೆ ಎಂದು ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ ಪ್ರಕಟಿಸಿದೆ.
ನಾಲ್ಕಕ್ಕಿಂತ ಹೆಚ್ಚು ಮನೆಕೆಲಸಗಾರರನ್ನು ಹೊಂದಿರುವ ದೇಶೀಯ ಪೌರರು ಹಾಗೂ ಎರಡಕ್ಕಿಂತ ಹೆಚ್ಚು ಕೆಲಸಗಾರರನ್ನು ಹೊಂದಿರುವ ವಿದೇಶಿಗರು ಲೆವಿಯನ್ನು ಪಾವತಿಸಬೇಕು. ಎರಡು ಹಂತದ ಯೋಜನೆಯ ಮೊದಲ ಹಂತವು ಇಂದಿನಿಂದ ಆರಂಭಗೊಂಡಿದೆ. ಪ್ರತಿ ಕೆಲಸಗಾರನಿಗೆ ವರ್ಷಕ್ಕೆ 9,600 ರಿಯಾಲ್ಗಳು ಅಥವಾ ತಿಂಗಳಿಗೆ 800 ರಿಯಾಲ್ಗಳು ಲೆವಿ ಪಾವತಿಸಬೇಕು. ನಿರ್ಧಾರವನ್ನು ಎರಡು ಹಂತಗಳಲ್ಲಿ ಜಾರಿಗೊಳಿಸಲಾಗುತ್ತದೆ. ಇಂದು ಆರಂಭಗೊಂಡ ಮೊದಲ ಹಂತದಲ್ಲಿ ಹೊಸ ಮನೆಕೆಲಸ ವೀಸಾದಲ್ಲಿ ಬರುವ ಕಾರ್ಮಿಕರಿಗೆ ಮಾತ್ರ ಲೆವಿಯನ್ನು ಪಾವತಿಸಬೇಕಿದೆ. ಅದೂ, ಪ್ರಾಯೋಜಕರ ಅಡಿಯಲ್ಲಿ ನಾಲ್ಕಕ್ಕಿಂತ ಹೆಚ್ಚು ಉದ್ಯೋಗಿಗಳಿದ್ದರೆ ಮಾತ್ರ.
ಪ್ರಸ್ತುತ, ಸೌದಿಯಲ್ಲಿರುವ ಗೃಹ ಕಾರ್ಮಿಕರಿಗೆ ಒಂದು ವರ್ಷದ ನಂತರ ಮಾತ್ರ ಲೆವಿ ಅನ್ವಯಿಸುತ್ತದೆ. ಅವರು ಮೇ 13, 2023 ರಿಂದ ಲೆವಿಯನ್ನು ಪಾವತಿಸಬೇಕಾಗುತ್ತದೆ. ಗೃಹ ಕಾರ್ಮಿಕರಿಗಾಗಿ ಕಾರ್ಮಿಕ ಕಾನೂನುಗಳಲ್ಲಿ ಪ್ರಮುಖ ಸುಧಾರಣೆಗಳನ್ನು ಮಾಡಲಾಗತ್ತದೆ ಎಂದು ಅಧಿಕಾರಿಗಳು ನಿನ್ನೆ ಘೋಷಿಸಿದರು. ಅದರ ಬೆನ್ನಲ್ಲೇ ಲೇವಿಯನ್ನು ಜಾರಿಗೆ ತರಲಾಗಿದೆ.
2018 ರ ಜನವರಿಯಿಂದ ಸೌದಿ ಅರೇಬಿಯಾದಲ್ಲಿ ವಿದೇಶಿಯರಿಗೆ ತದನಂತರ ಅವಲಂಬಿತರಿಗೆ ಲೆವಿ ಕಡ್ಡಾಯಗೊಳಿಸಲಾಗಿದೆ,ಆದರೆ , ಗೃಹ ಕಾರ್ಮಿಕರಿಗೆ ಲೆವಿ ಅನ್ವಯವಾಗಿರಲಿಲ್ಲ. ಆದ್ದರಿಂದಲೇ, ಅನೇಕ ವಿದೇಶಿಗರು ಮನೆ ಚಾಲಕರು ಮುಂತಾದ ಮನೆಕೆಲಸಗಾರರ ವೀಸಾದಲ್ಲಿ ಬಂದು ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದರು.
ಪ್ರಾಯೋಜಕರ ಅಡಿಯಲ್ಲಿ ನಾಲ್ಕಕ್ಕಿಂತ ಹೆಚ್ಚು ಮನೆ ಕೆಲಸಗಾರರು ಇದ್ದರೆ, ಅವರೆಲ್ಲರೂ ಒಂದು ವರ್ಷದ ನಂತರ ಲೆವಿಯನ್ನು ಪಾವತಿಸಬೇಕಾಗುತ್ತದೆ. ಆದರೆ ಈಗ ಹೌಸ್ ಡ್ರೈವರ್ ಹುದ್ದೆಯಲ್ಲಿರುವವರು ವೃತ್ತಿಯನ್ನು ಬದಲಾಯಿಸಲು ಅನುಮತಿಸಲಾಗಿರುವುದರಿಂದ ಹೆಚ್ಚು ಸುರಕ್ಷಿತ ಉದ್ಯೋಗಗಳನ್ನು ಹುಡುಕಿ ಬದಲಾಯಿಸಬಹುದಾಗಿದೆ.
.
















ಇನ್ನಷ್ಟು ಸುದ್ದಿಗಳು
ದೆಹಲಿಯಲ್ಲಿ ನವಜಾತ ಶಿಶುಗಳನ್ನು ಮಾರುವ ‘ಮಕ್ಕಳ’ ಮಾರುಕಟ್ಟೆ: ಬೃಹತ್ ಮಾಫಿಯಾ ಪತ್ತೆ
ಸಚಿವ ಸಂಪುಟ ವಿಸ್ತರಣೆ: ಅಹಿಂದ, ಮುಸ್ಲಿಂ ಸಮುದಾಯಕ್ಕೆ ಅನ್ಯಾಯ- ದ.ಕ.ಜಿಲ್ಲಾ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ ತೀವ್ರ ಆಕ್ಷೇಪ
ಮಾದಕ ವಸ್ತು ‘ಖಾತ್’ ಮಾರಾಟ: ಭಾರತೀಯ ಪ್ರಜೆ ಸೌದಿಯಲ್ಲಿ ಬಂಧನ
ಅನಿವಾಸಿಗಳಿಗೆ ಶುಭ ಸುದ್ದಿ: ಕುವೈತ್ನಿಂದ ಭಾರತೀಯ ವಿಮಾನ ಸೇವೆಗಳು ಪುನರಾರಂಭ
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಗುಡ್ ನ್ಯೂಸ್: 20 ಕಿ.ಮೀ ವ್ಯಾಪ್ತಿಯವರಿಗೆ ಡಿಜಿಟಲ್ ಪಾಸ್ ಸೌಲಭ್ಯ!
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ಗೆ ಭರ್ಜರಿ ಗೆಲುವು- ಆಡಳಿತದ ಹಾದಿಗೆ ಸಿಕ್ಕ ಮುದ್ರೆ ಎಂದ ಸಿಎಂ ಡಿ.ಕೆ. ಶಿವಕುಮಾರ್
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
‘ಗಲ್ಫ್ ಪ್ರದೇಶದ ಸಂಘರ್ಷಗಳನ್ನು ಭಾರತಕ್ಕೆ ನಿರ್ಲಕ್ಷಿಸಲು ಸಾಧ್ಯವಿಲ್ಲ’ – ಭಾರತೀಯ ರಾಯಭಾರಿ ಡಾ. ಸುಹೈಲ್ ಅಜಾಝ್ ಖಾನ್
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ: ‘E-GEN ಸ್ಕಾಲರ್ಶಿಪ್’ ಗೆ ಅಧಿಕೃತ ಚಾಲನೆ