✍️ ಹಸೈನಾರ್ ಕಾಟಿಪಳ್ಳ
ಪ್ರತಿಭೆ ಅಂದರೆ ಕಲೆ, ಇದು ಜನಜೀವನದ ಬಹುಮುಖ್ಯ ಅಂಶ. ಇದು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ. ಕೆಲವರಿಗೆ ಮಾತಾಡುವ ಸಾಮರ್ಥ್ಯ ಇದ್ದರೆ, ಇನ್ನು ಕೆಲವರಿಗೆ ಬರವಣಿಗೆಯ, ಗಾಯನ, ಚಾಣಾಕ್ಷತನ, ಬುದ್ದಿವಂತಿಕೆ, ಚಿತ್ರೀಕರಣ, ಓದುಗಾರಿಕೆ, ವರದಿಗಾರಿಕೆ ಇತ್ಯಾದಿ ( ಇಲ್ಲಿ ಪ್ರತಿಭೆಯ ಬೆರಳೆಣಿಕೆಯ ಉದಾಹರಣೆಯನ್ನು ಮಾತ್ರ ಉಲ್ಲೇಖಿಸಲಾಗಿದೆ). ಜಗತ್ತಿನಲ್ಲಿ ನಾನಾ ತರಹದ ಪ್ರತಿಭೆಗಳಿರುತ್ತವೆ. ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ತರಹದ ಪ್ರತಿಭೆ ಅಡಗಿಕೊಂಡಿರುತ್ತದೆ. ಆ ಪ್ರತಿಭೆಯ ಪ್ರದರ್ಶನಕ್ಕಾಗಿ ಸೂಕ್ತವಾದ ಅವಕಾಶ, ಸಮರ್ಪಕವಾದ ವೇದಿಕೆಯೊಂದು ದೊರೆಯಬೇಕು.


ಪ್ರತಿಭೆಗೆ ಪ್ರೋತ್ಸಾಹ ನೀಡುವುದು ನಮ್ಮ ಆದ್ಯ ಕರ್ತವ್ಯ.
ಇದನ್ನು ಮನಗಂಡು ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ (SSF) ಪ್ರತೀ ಎರಡು ವರ್ಷಗಳಿಗೊಮ್ಮೆ ಯುನಿಟ್ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದವರೆಗೆ ಪ್ರತಿಭೋತ್ಸವ ಕಾರ್ಯಕ್ರಮ ನಡೆಸುತ್ತಾ ಬಂದಿದೆ. ಅದರಂತೆ ಈ ಸಲವೂ *ನಿರೀಕ್ಷೆಗಳ ನೀಲ ನಕ್ಷೆ* ಎಂಬ ಘೋಷವಾಕ್ಯದೊಂದಿಗೆ ಪ್ರತಿಭೋತ್ಸವ ಕಾರ್ಯಕ್ರಮ ನಡೆಸುತ್ತಿದೆ.
ಪ್ರತಿಭೆ ಎನ್ನುವುದು ಕಲಿಕೆಯಲ್ಲ. ಬದಲಾಗಿ ಅದು ಸೃಷ್ಟಿಕರ್ತ ನಮಗೆ ಕರುಣಿಸಿದ ಉಡುಗೊರೆ. (God Gift).
ಆ ಉಡುಗೊರೆಯನ್ನು ನಾವು ನಮ್ಮ ಪ್ರಯತ್ನದ ಮೂಲಕ ಸಮರ್ಪಕವಾದ ರೀತಿಯಲ್ಲಿ ಬಳಸಿಕೊಂಡರೆ ಮಾತ್ರ ನಮ್ಮಲ್ಲಿರುವ ಪ್ರತಿಭೆ ಹೊರಹೊಮ್ಮುತ್ತದೆ. ಇಲ್ಲವಾದಲ್ಲಿ ನಮ್ಮಲ್ಲಿರುವ ಪ್ರತಿಭೆ ಗೋಚರಿಸದೆ, ಹಾಗೆಯೇ ಮರೆಮಾಚಿ ಹೋಗುವುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಪೂರಕವಾದ ಎಷ್ಟೋ ಘಟನೆಗಳು ನಮ್ಮ ಮುಂದೆ ಬಂದು ಹೋಗಿದೆ. ಆದ್ದರಿಂದ ಬನ್ನಿ ಸಹೋದರರೆ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (SSF) ಕರ್ನಾಟಕ ರಾಜ್ಯ ಸಮಿತಿ ಹಮ್ಮಿಕೊಂಡ ಪ್ರತಿಭೋತ್ಸವ ಕಾರ್ಯಕ್ರಮದೊಂದಿಗೆ ಕೈಜೋಡಿಸೋಣ. ಈ ಮೂಲಕ ಪ್ರತಿಭೆಗಳಿಗೆ ತಮ್ಮ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಸಹಕಾರಿಯಾಗೋಣ.







