janadhvani

Kannada Online News Paper

ಮರ್ಝೂಖೀಸ್ ಸಂಘಕ್ಕೆ ನೂತನ ಸಾರಥ್ಯ

ಮಂಜನಾಡಿ,ಅ.25: ಅಲ್ ಮದೀನಾ ಮಂಜನಾಡಿ
ಸಂಸ್ಥೆಯಲ್ಲಿ ವಿಧ್ಯಾಭ್ಯಾಸ ಪೂರ್ತಿಗೊಳಿಸಿದ, ಮರ್ಝೂಖಿ ಪದವೀಧರರ ಒಕ್ಕೂಟ ಮರ್ಝೂಖೀಸ್ ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆ, ಸಂಸ್ಥೆಯ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಮತ್ತು ದಅವಾ ಕಾಲೇಜು ಪ್ರಾಂಶುಪಾಲರು ಅಬ್ದುಲ್ ಸಲಾಂ ಅಹ್ಸನಿ ರವರ ನೇತೃತ್ವದಲ್ಲಿ ನಡೆಯಿತು.

ಗೌರವಾಧ್ಯಕ್ಷರಾಗಿ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ಅಬ್ದುಲ್ ಖಾದರ್ ಸಖಾಫಿ ಉಸ್ತಾದ್, ನಿರ್ದೇಶಕರಾಗಿ ದಅವಾ ಕಾಲೇಜು ಪ್ರಾಂಶುಪಾಲರು ಅಬ್ದುಲ್ ಸಲಾಂ ಅಹ್ಸನಿ ಉಸ್ತಾದ್ ಮತ್ತು ಮುದರ್ರಿಸ್ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಸ್ತಾದ್.

ಸಂಘಟನೆಯ ಅಧ್ಯಕ್ಷರಾಗಿ ಯೂನುಸ್ ಮರ್ಝೂಖಿ ಸಖಾಫಿ ಕೊಡಗು , ಪ್ರ. ಕಾರ್ಯದರ್ಶಿ ಇಕ್ಬಾಲ್ ಮರ್ಝೂಖಿ ಸಖಾಫಿ ಬೆಳ್ತಂಗಡಿ, ಕೋಶಾಧಿಕಾರಿ ಬಿ.ಎಸ್.ಅಬ್ದುಲ್ ಅಝೀಝ್ ಮರ್ಝೂಖಿ ಹಿಶಾಮಿ ಬಾಳೆಪುಣಿ, ಉಪಾಧ್ಯಕ್ಷರಾಗಿ ನೌಫಲ್ ಮರ್ಝೂಖಿ ರಬ್ಬಾನಿ ಮಲಾರ್, ಶರೀಫ್ ಮರ್ಝೂಖಿ ವಳಾಲ್, ಕೋ-ಆರ್ಡಿನೇಟರ್ ಜುನೈದ್.ಟಿ ಮರ್ಝೂಖಿ ಇರಾ, ಕಾರ್ಯದರ್ಶಿಗಳಾಗಿ ಅಬೂಬಕ್ಕರ್ ಮರ್ಝೂಖಿ ಸಖಾಫಿ ಬಳ್ಳಾರಿ, ಇಫಾಝ್ ಮರ್ಝೂಖಿ ದೇರಳಕಟ್ಟೆ, ಲಿಬಾನ್ ಮರ್ಝೂಖಿ ರಬ್ಬಾನಿ ಆಯ್ಕೆಯಾದರು.