SSF ದಕ್ಷಿಣ ಕನ್ನಡ ಈಷ್ಟ್ ಜಿಲ್ಲೆಯ ವತಿಯಿಂದ ಆಧ್ಯಾತ್ಮಿಕ ಪ್ರಭೆ ಝೈನುದ್ದೀನ್ ಮಖ್ದೂಮ್ ರಲಿಯಲ್ಲಾಹು ಅನ್ಹುರವರ ಹೆಸರಿನಲ್ಲಿ “ಮಖ್ದೂಮಿಯಾ ಸಮ್ಮಿಟ್” ಎಂಬ 3 ದಿನಗಳ “online ಮುತಅಲ್ಲಿಮ್ ಸಂಗಮ” 2021 ಜೂನ್ 17,18,19 ರಂದು Youtube ಚಾನೆಲ್ ನಲ್ಲಿ ನಡೆಯಿತು.
ಜೂನ್ 17, ಗುರುವಾರದಂದು ಸಂಜೆ 4.30 ಯಿಂದ 6 ಗಂಟೆಗಳ ವರೆಗೆ ನಡೆದ ಕಾರ್ಯಕ್ರಮದಲ್ಲಿ ತರಬೇತುದಾರರಾಗಿ ರಾಜ್ಯ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ತೋಕೆ ಮುಹ್ಯದ್ದೀನ್ ಕಾಮಿಲ್ ಸಖಾಫಿ ಉಸ್ತಾದ್ “ವಿಧ್ವಾಂಸರ ಜೀವನ” ಎಂಬ ವಿಷಯದಲ್ಲಿ ಮಾತನಾಡಿದರು. ಜೂನ್ 18 ರಂದು ರಾತ್ರಿ 7.30-8.30pm ರ ವರೆಗೆ ನಡೆದ ಎರಡನೇ ದಿನದ ತರಬೇತಿಯಲ್ಲಿ ರಾಜ್ಯ SYS ನೇತಾರರಾದ GM ಮುಹಮ್ಮದ್ ಕಾಮಿಲ್ ಸಖಾಫಿ ಉಸ್ತಾದರು “ದಅವಾ ಸಂಘಟನೆಯಲ್ಲಿ ಸಕ್ರಿಯತೆ ಎಂಬ ವಿಷಯದಲ್ಲಿ ಮಾತನಾಡಿದರು.
ಜೂನ್ 19 ರ ಮೂರನೇ ದಿನದಂದು ರಾತ್ರಿ 8-10 ರವರೆಗೆ “ಇಮಾಂ ಗಝ್ಝಾಲಿ ರ.ಅ ವೀಕ್ಷಣೆಯಲ್ಲಿ ಮುತ ಅಲ್ಲಿಮರು” ಎಂಬ ವಿಷಯದಲ್ಲಿ ಲೇಖಕ ಇಸ್ಮಾಯಿಲ್ ಸಅದಿ ಅಲ್ ಅಫ್ಲಲಿ ಮಾಚಾರ್ ಉಸ್ತಾದರು ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ಈಷ್ಟ್ ಜಿಲ್ಲಾಧ್ಯಕ್ಷ GK ಅಮ್ಜದಿ ಸುಳ್ಯ,ಅಸ್ಸಯ್ಯದ್ ಶಿಹಾಬುದ್ದೀನ್ ತಙಳ್ ಮದಕ, ಖಾಸಿಂ ಮದನಿ ಕರಾಯ,SSF ರಾಜ್ಯ ಅಧ್ಯಕ್ಷ ಅಬ್ದುಲ್ ಲತೀಫ್ ಸಅದಿ,ಶೈಖುನಾ ಕನ್ಯಾನ ಉಸ್ತಾದ್,KM ಮುಸ್ತಫ ನಯೀಮಿ,ಹಾಫಿಲ್ ಅಬ್ದುಸ್ಸಲಾಂ ನಿಝಾಮಿ ಚೆನ್ನಾರ್,ಅಬ್ದುರ್ರಝಾಕ್ ಸಅದಿ ಕೊಡಿಪ್ಪಾಡಿ, ಜೀರ್ಮುಕಿ ಸಖಾಫಿ ಮುಂತಾದ ಪ್ರಮುಖ ನಾಯಕರು ಉಪಸ್ಥಿತರಿದ್ದರು.
















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ