janadhvani

Kannada Online News Paper

ಬೆಂಗಳೂರು ಯಶವಂತಪುರ ನಿವಾಸಿ ದಮ್ಮಾಮ್ ನಲ್ಲಿ ನಿಧನ ದಫನ ಕಾರ್ಯಕ್ಕೆ ನೆರವಾದ ಕೆ.ಸಿ.ಎಫ್

ದಮ್ಮಾಮ್ : ಸೌದಿ ಅರೇಬಿಯಾದ ದಮ್ಮಾಮ್ ಮಝ್ರೂಯ ಎಂಬಲ್ಲಿ ಕಳೆದ ಸುಮಾರು ವರ್ಷಗಳಿಂದ ಕಾರು ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದ ಯಶವಂತಪುರ ನಿವಾಸಿ ಸಯ್ಯದ್ ಅಹ್ಮದ್ ಪಾಷ ಎಂಬುವವರು ಫೆಬ್ರವರಿ ತಾ:26 ರಂದು ಹ್ರದಯಾಘಾತದಿಂದ ಮರಣಹೊಂದಿದ್ದರು .

ಅವರ ಮಯ್ಯತಿನ ದಫನ ಕಾರ್ಯಕ್ಕೆ ಬೇಕಾದ ಪೇಪರ್ ವರ್ಕ್ ಯಾವುದೇ ಪ್ರಗತಿ ಕಾಣದ ಸಂಧರ್ಭದಲ್ಲಿ ಮ್ರತರ ಪರಿಚಯದ ಅಶ್ರಫ್ ಉಡುಪಿ ಕೆ.ಸಿ.ಎಫ್ ಸಾಂತ್ವನ ತಂಡಕ್ಕೆ ಸಹಾಯ ಕೋರಿ ಬಂದಾಗ ಕೂಡಲೆ ಸ್ಪಂದಿಸಿ ಸಹಕರಿಸಿದ ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆ.ಸಿ.ಎಫ್)ಇದರ ದಮ್ಮಾಮ್ ಝೋನ್ ಸಾಂತ್ವನ ವಿಭಾಗದ ನಾಯಕರಾದ ಮಹಮ್ಮದ್ ಮಲೆಬೆಟ್ಟು ಹಾಗು ಬಾಷಾ ಗಂಗಾವಳಿಯವರು ತ್ವರಿತಗತಿಯಲ್ಲಿ ಎಲ್ಲಾ ಕೆಲಸ ಕಾರ್ಯವನ್ನು ಮುಗಿಸಿ ಅಲ್ ಹಂದುಲಿಲ್ಲಾಹ್ ಮೊನ್ನೆ ಮಾರ್ಚ್ ತಾ:6 ರಂದು ದಮ್ಮಾಮ್ 91 ನಲ್ಲಿ ಮಯ್ಯತ್ ನಮಾಜ್ ನಿರ್ವಹಿಸಿ ದಫನ ಕಾರ್ಯ ನೆರೆವೇರಿಸಲಾಯಿತು.

ಮ್ರತರ ಕುಟುಂಬವು ಊರಿನಲ್ಲಿ ಇದ್ದು ತಂದೆ, ತಾಯಿ ಹೆಂಡತಿ ಹಾಗು 2 ಮಕ್ಕಳನ್ನು ಅಗಲಿದ್ದಾರೆ. ಒರ್ವ ಮಗ ಜಿಝಾನ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದು ಊರಿನಿಂದ NOC ಇನ್ನಿತರ ಅವಕಾಶ ಕಾರ್ಯಕ್ಕೆ ಕೆ.ಸಿ.ಎಫ್ ತಂಡದೊಂದಿಗೆ ಸಂಪೂರ್ಣ ಸಹಕರಿಸಿದ್ದಾರೆ.


ದಫನ ಕಾರ್ಯದಲ್ಲಿ ಕುಟುಂಬದ ಸದಸ್ಯರು ಹಾಗು ಸ್ನೇಹಿತರು ಪಾಲ್ಗೊಂಡು ಅಂತ್ಯ ಕ್ರೀಯೆ ನೆರೆವೇರಿಸಲಾಯಿತು.