ದಮ್ಮಾಮ್ : ಸೌದಿ ಅರೇಬಿಯಾದ ದಮ್ಮಾಮ್ ಮಝ್ರೂಯ ಎಂಬಲ್ಲಿ ಕಳೆದ ಸುಮಾರು ವರ್ಷಗಳಿಂದ ಕಾರು ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದ ಯಶವಂತಪುರ ನಿವಾಸಿ ಸಯ್ಯದ್ ಅಹ್ಮದ್ ಪಾಷ ಎಂಬುವವರು ಫೆಬ್ರವರಿ ತಾ:26 ರಂದು ಹ್ರದಯಾಘಾತದಿಂದ ಮರಣಹೊಂದಿದ್ದರು .

ಅವರ ಮಯ್ಯತಿನ ದಫನ ಕಾರ್ಯಕ್ಕೆ ಬೇಕಾದ ಪೇಪರ್ ವರ್ಕ್ ಯಾವುದೇ ಪ್ರಗತಿ ಕಾಣದ ಸಂಧರ್ಭದಲ್ಲಿ ಮ್ರತರ ಪರಿಚಯದ ಅಶ್ರಫ್ ಉಡುಪಿ ಕೆ.ಸಿ.ಎಫ್ ಸಾಂತ್ವನ ತಂಡಕ್ಕೆ ಸಹಾಯ ಕೋರಿ ಬಂದಾಗ ಕೂಡಲೆ ಸ್ಪಂದಿಸಿ ಸಹಕರಿಸಿದ ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆ.ಸಿ.ಎಫ್)ಇದರ ದಮ್ಮಾಮ್ ಝೋನ್ ಸಾಂತ್ವನ ವಿಭಾಗದ ನಾಯಕರಾದ ಮಹಮ್ಮದ್ ಮಲೆಬೆಟ್ಟು ಹಾಗು ಬಾಷಾ ಗಂಗಾವಳಿಯವರು ತ್ವರಿತಗತಿಯಲ್ಲಿ ಎಲ್ಲಾ ಕೆಲಸ ಕಾರ್ಯವನ್ನು ಮುಗಿಸಿ ಅಲ್ ಹಂದುಲಿಲ್ಲಾಹ್ ಮೊನ್ನೆ ಮಾರ್ಚ್ ತಾ:6 ರಂದು ದಮ್ಮಾಮ್ 91 ನಲ್ಲಿ ಮಯ್ಯತ್ ನಮಾಜ್ ನಿರ್ವಹಿಸಿ ದಫನ ಕಾರ್ಯ ನೆರೆವೇರಿಸಲಾಯಿತು.
ಮ್ರತರ ಕುಟುಂಬವು ಊರಿನಲ್ಲಿ ಇದ್ದು ತಂದೆ, ತಾಯಿ ಹೆಂಡತಿ ಹಾಗು 2 ಮಕ್ಕಳನ್ನು ಅಗಲಿದ್ದಾರೆ. ಒರ್ವ ಮಗ ಜಿಝಾನ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದು ಊರಿನಿಂದ NOC ಇನ್ನಿತರ ಅವಕಾಶ ಕಾರ್ಯಕ್ಕೆ ಕೆ.ಸಿ.ಎಫ್ ತಂಡದೊಂದಿಗೆ ಸಂಪೂರ್ಣ ಸಹಕರಿಸಿದ್ದಾರೆ.
ದಫನ ಕಾರ್ಯದಲ್ಲಿ ಕುಟುಂಬದ ಸದಸ್ಯರು ಹಾಗು ಸ್ನೇಹಿತರು ಪಾಲ್ಗೊಂಡು ಅಂತ್ಯ ಕ್ರೀಯೆ ನೆರೆವೇರಿಸಲಾಯಿತು.
















ಇನ್ನಷ್ಟು ಸುದ್ದಿಗಳು
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ