ರಿಯಾದ್: ಈ ವರ್ಷ ಹಜ್ನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸೌದಿ ಹಜ್ ಉಮ್ರಾ ಸಚಿವಾಲಯ ಹೇಳಿದೆ. ವಿಶ್ವಾಸಿಗಳನ್ನು ಸ್ವೀಕರಿಸಲು ದೇಶವು ಸಜ್ಜವಾಗಿದೆ. ಆದರೆ ಕೋವಿಡ್ನ ಪರಿಸ್ಥಿತಿ ಮುಂದುವರಿಕೆ ಅನುಸರಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹಜ್ ಉಮ್ರಾ ಖಾತೆಯ ಸಚಿವ ಮುಹಮ್ಮದ್ ಸಾಲಿಹ್ ಬಂದನ್ ಹೇಳಿದರು. ಕೋವಿಡ್ ಅನಿಶ್ಚಿತತೆ ಇತ್ಯರ್ಥವಾಗುವ ತನಕ ಒಪ್ಪಂದಗಳಿಗೆ ತರಾತುರಿಯಲ್ಲಿ ಸಹಿ ಮಾಡದಂತೆ ಸಚಿವಾಲಯವು ವಿವಿಧ ಕಂಪನಿಗಳಿಗೆ ಮಾಹಿತಿ ನೀಡಿದೆ.
ಈ ವರ್ಷದ ಆರಂಭದಲ್ಲಿ, ಹಜ್ ನಿಲ್ಲಿಸಲಾಗಿದೆ ಎಂದು ಕೆಲವು ಸುಳ್ಳು ವದಂತಿಗಳು ಹಬ್ಬಿದ್ದವು. ಜುಲೈ ಕೊನೆಯ ವಾರದಲ್ಲಿ ಹಜ್ ನಡೆಯಲಿದೆ. ಏತನ್ಮಧ್ಯೆ, ಮೇ ಕೊನೆಯ ವಾರದಲ್ಲಿ, ವಿಮಾನಯಾನ ಸಂಸ್ಥೆಗಳು ಉಮ್ರಾ ಗುಂಪುಗಳಿಗೆ ವಿಮಾನ ಕಾಯ್ದಿರಿಸುವಿಕೆಯನ್ನು ನಿಲ್ಲಿಸಿವೆ. ಸೌದಿ ಅರೇಬಿಯಾದ ಅಧಿಕೃತ ವಿಮಾನಯಾನ ಸಂಸ್ಥೆಯಾದ ಸೌದಿ ಏರ್ಲೈನ್ಸ್ ಮೇ ಅಂತ್ಯದವರೆಗೆ ಬುಕಿಂಗ್ ನಿಲ್ಲಿಸುವುದಾಗಿ ಘೋಷಿಸಿದೆ.
ಇಲ್ಲಿಯವರೆಗೆ ಬುಕ್ ಮಾಡಿದ ಗ್ರೂಪ್ ಮತ್ತು ವ್ಯಕ್ತಿಗಳಿಗೆ ಹಣವನ್ನು ಹಿಂದಿರುಗಿಸುವುದಾಗಿ ವಿಮಾನಯಾನ ಸಂಸ್ಥೆ ತಿಳಿಸಿದೆ. ವಿಶ್ವದ ಕೋವಿಡ್ 19 ಪರಿಸ್ಥಿತಿ ಬದಲಾಗುವ ಆಧಾರದ ಮೇಲೆ ನಿರ್ಧಾರ ತೆಗೆದು ಕೊಳ್ಳಲಾಗುವುದು.
ಏಪ್ರಿಲ್ 15 ರವರೆಗೆ ವಿವಿಧ ಗುಂಪುಗಳಿಗೆ ನಿಯಮಿತವಾಗಿ ಬುಕಿಂಗ್ ನಿಲ್ಲಿಸಲಾಗಿದೆ. ಇಲ್ಲಿಯವರೆಗೆ ಬುಕ್ ಮಾಡಿದವರಿಗೆ ಮರುಪಾವತಿ ಮಾಡಲಾಗುತ್ತದೆ. ಉಮ್ರಾ ನಿರ್ವಹಣೆಗಾಗಿ ಬಂದು ಮರಳಲಾಗದೆ ಉಳಿದುಕೊಂಡ 1,200 ಮಂದಿ ಆರೋಗ್ಯ ಸಚಿವಾಲಯದ ಆಶ್ರಯದಲ್ಲಿ ದೇಶದಲ್ಲಿದ್ದಾರೆ. ವಿಮಾನ ಯಾನ ಪ್ರಾರಂಭವಾದಂತೆ ಅವರನ್ನು ವಾಪಸ್ ಕಳುಹಿಸಲಾಗುತ್ತದೆ. ಹಣ ಪಾವತಿಸಿ ಉಮ್ರಾ ನಿರ್ವಹಿಸಲು ಸಾಧ್ಯವಾಗದವರಿಗೆ ಈಗಾಗಲೇ ಮರು ಪಾವತಿ ಮಾಡಲಾಗಿದೆ ಎಂದು ಹಜ್ ಉಮ್ರಾ ಸಚಿವಾಲಯ ತಿಳಿಸಿದೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು