janadhvani

Kannada Online News Paper

ಜನವರಿ 3, 4, ರಂದು ಕುಂದಾಪುರ ಮೂಡುಗೋಪಾಡಿ ಯಲ್ಲಿ ಮರ್ಕಝ್ ಪ್ರಚಾರ ಸಮ್ಮೇಳನ ಯಶಸ್ವಿಗೆ ಕರೆ

ಕಾಪು ಜ.02 : ವಿಶ್ವ ವಿಖ್ಯಾತ ಮರ್ಕಝುಸ್ಸಖಾಫತಿಸುನ್ನಿಯ್ಯ ಮಹಾ ಸಮ್ಮೇಳನದ ರಾಜ್ಯಮಟ್ಟದ ಪ್ರಚಾರ ಸಮ್ಮೇಳನವು ಜನವರಿ 03 ರಂದು ಸಂಜೆ 6 ಗಂಟೆಗೆ ಕೋಟೇಶ್ವರ ಮೂಡುಗೋಪಾಡಿಯಲ್ಲಿ ನಡೆಯಲಿದೆ.

ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎಪಿ ಉಸ್ತಾದ್ ಮುಖ್ಯ ಪ್ರಭಾಷಣ ಮಾಡಲಿರುವರು. ಡಾ. ಅಬ್ದುಲ್ ಹಕೀಂ ಅಝ್ಹರಿ, ಬೇಕಲ್ ಉಸ್ತಾದ್, ಮಾಣಿ ಉಸ್ತಾದ್ ಹಾಗೂ ಇನ್ನಿತರ ಉಲಮಾ ಉಮರಾ ನಾಯಕರು ಭಾಗವಹಿಸಲಿರುವರು. ಜನವರಿ 04 ರಂದು ಕೋಟೇಶ್ವರ ತಂಙಳರ 12 ನೇ ಬ್ರಹತ್ ಬುರ್ದಾ ಮಜ್ಲಿಸ್ ನಡೆಯಲಿರುವುದು.

ಎಲ್ಲಾ ಕಾರ್ಯಕರ್ತರು ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಎಸ್ಸೆಸ್ಸೆಫ್ ಕಾಪು ಡಿವಿಷನ್ ಸಮಿತಿಯು ಕರೆ ನೀಡಿವೆ ಎಂದು ಎಸ್ಸೆಸ್ಸೆಫ್ ಕಾಪು ಡಿವಿಷನ್ ಪ್ರ.ಕಾರ್ಯದರ್ಶಿ ಮುಹಮ್ಮದ್ ಸಮೀರ್ ಕೋಡಿ ಪ್ರಕಟಣೆಯಲ್ಲಿ ತಿಳಿಸಿದರು.

ವರದಿ : ಪಿ.ಎಂ.ಎಸ್ ಪಡುಬಿದ್ರಿ.