janadhvani

Kannada Online News Paper

“ಫೈರ್ ಮಾಡಿದೆವು, ಒಬ್ಬರೂ ಸಾಯಲಿಲ್ವಾ?” ಹೋರಾಟಗಾರರನ್ನು ಸರಕಾರವೇ ಕೊಲ್ಲಿಸಿದೆ- ಹೆಚ್.ಡಿ.ಕೆ

ಬೆಂಗಳೂರು,ಡಿ. 20; ಹಿಂದಿನ ಸರ್ಕಾರದಲ್ಲಿ ರೈತರನ್ನು ಕೊಂದ, ಈ ಬಾರಿ ಅಮಾಯಕ ಹೋರಾಟಗಾರರನ್ನು ಕೊಂದ ಬಿಎಸ್ವೈ ನೈತಿಕ ಹೊಣೆಗಾರಿಕೆ ಅರಿತು ಕೂಡಲೇ ಮೃತ ಹೋರಾಟಗಾರರ ಕುಟುಂಬಗಳ ಕ್ಷಮೆ ಕೇಳಬೇಕು ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಮಂಗಳೂರಿನ ಪ್ರತಿಭಟನೆ ವೇಳೆ, “ಫೈರ್ ಮಾಡಿದೆವು, ಒಂದೂ ಗುಂಡೂ ಬೀಳಲಿಲ್ವಾ? ಒಬ್ಬರೂ ಸಾಯಲಿಲ್ವಾ?” ಎಂಬ ಪೊಲೀಸ್ ಅಧಿಕಾರಿಯ ಧ್ವನಿ ಸರ್ಕಾರವೇ ಸ್ವತಃ ಮುಂದೆ ನಿಂತು ಹೋರಾಟಗಾರರನ್ನು ಕೊಲ್ಲಿಸಿದೆ ಎಂಬ ಆರೋಪಕ್ಕೆ ಸಾಕ್ಷಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಸರಣಿ ಟ್ವೀಟ್ ಮಾಡುವ ಮೂಲಕ ಮಂಗಳೂರು ಗೋಲಿಬಾರ್ ಪ್ರಕರಣವನ್ನು ಖಂಡಿಸಿರುವ ಕುಮಾರಸ್ವಾಮಿ, ಪ್ರತಿಭಟನೆ ವೇಳೆ ಹೋರಾಟಗಾರರನ್ನು ಕೊಂದ ಪೊಲೀಸ್ ಅಧಿಕಾರಿಯೊಬ್ಬರ ಮಾತು. ಸರ್ಕಾರವೇ ಮುಂದೆ ನಿಂತು ಪ್ರತಿಭಟನಾಕಾರರನ್ನು ಕೊಂದಿದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿ ನಿಂತಿದೆ. ಇದರ ಹೊಣೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೊರಬೇಕು” ಎಂದು ಆಗ್ರಹಿಸಿದ್ದಾರೆ.