janadhvani

Kannada Online News Paper

SSF ಬೆಳ್ತಂಗಡಿ ಸೆಕ್ಟರ್ Q-TEAM ವತಿಯಿಂದ ಮಾದಕ ದ್ರವ್ಯ ವಿರುದ್ಧ ಜನಜಾಗೃತಿ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ರಿ.) SSF ಬೆಳ್ತಂಗಡಿ ಸೆಕ್ಟರ್ Q-TEAM ವತಿಯಿಂದ ಗಾಂದಿ ಜಯಂತಿ ಪ್ರಯುಕ್ತ ಮಾದಕ ದ್ರವ್ಯ ವಿರುದ್ಧ ಜನಜಾಗೃತಿ ಕಾರ್ಯಕ್ರಮವು ದಿನಾಂಕ‌ 02/10/2019ನೇ ಬುದವಾರ ಮಧ್ಯಾಹ್ನ 02.30 ಕ್ಕೆ ಬೆಳ್ತಂಗಡಿಯ DCC ಬ್ಯಾಂಕ್ ಮುಂಬಾಗದಲ್ಲಿ ನಡೆಯಿತು.

SSF ಬೆಳ್ತಂಗಡಿ ಸೆಕ್ಟರ್ ಅಧ್ಯಕ್ಷರಾದ ಝಮೀರ್ ಸಅದಿ ಅಧ್ಯಕ್ಷತೆ ವಹಿಸಿದ್ದರು.
SSF ಬೆಳ್ತಂಗಡಿ ಸೆಕ್ಟರ್ ಸದಸ್ಯರೂ ಅನುಗ್ರಹ ಟ್ರೈನಿಂಗ್ ಕಾಲೇಜ್,ಬೆಳ್ತಂಗಡಿ ಇದರ ಶಿಲ್ಪಿಯೂ ಆದ ತಲ್’ಹತ್ ಮಾಸ್ಟರ್ ಮಾದಕ ದ್ರವ್ಯ ದಲ್ಲಿ ಉಂಟಾಗುವ ತೊಂದರೆ ಕುರಿತು ಬಾಷಣ ಮಾಡಿದರು.
ಈ ಕಾರ್ಯಕ್ರಮದಲ್ಲಿ SSF ಬೆಳ್ತಂಗಡಿ ಡಿವಿಷನ್ ಪ್ರ.ಕಾರ್ಯದರ್ಶಿ ಶರೀಫ್ ನಾವೂರು, ಡಿವಿಷನ್ ಸದಸ್ಯರಾದ ಡಿ.ಎಂ.ಕಮಾಲ್ ಮುಸ್ಲಿಯಾರ್ ಹಾಗೂ ಸೆಕ್ಟರ್ ಹಾಗೂ ಶಾಖಾ ನಾಯಕರು ಉಪಸ್ಥಿತರಿದ್ದರು.
SSF ಬೆಳ್ತಂಗಡಿ ಸೆಕ್ಟರ್ ಪ್ರ ಕಾರ್ಯದರ್ಶಿ ಡಿ.ಎಂ.ಅಶ್ರಫ್ ನಾವೂರು ಸ್ವಾಗತಿಸಿ,ಮನ್ಸೂರ್ ಸಅದಿ ಧನ್ಯವಾದ ಮಾಡಿದರು

✍ಶಾಝ್,ಬೆಳ್ತಂಗಡಿ