ದುಬೈ: ದುಬೈ ವಿಮಾನ ನಿಲ್ದಾಣ ರಸ್ತೆ ಸಮಾನಾಂತರವಾದ ಟ್ರೊಪೋಳಿ ಸ್ಟ್ರೀಟ್ ಅಭಿವೃದ್ಧಿ ಯೋಜನೆಯು ಶೇ 90 ರಷ್ಟು ಪೂರ್ಣಗೊಂಡಿರುವುದಾಗಿ ದುಬೈ ರಸ್ತೆ ಮತ್ತು ಸಾರಿಗೆ ಪ್ರಾಧಿಕಾರವು ತಿಳಿಸಿದೆ.
ಎರಡು ಪ್ರಮುಖ ಹೈವೇಗಳನ್ನು ಬಂಧಿಸುವ ರಸ್ತೆಯಾಗಿದೆ ಇದು. ಶೈಖ್ ಮುಹಮ್ಮದ್ ಬಿನ್ ಝಾಯಿದ್ ರಸ್ತೆ ಮತ್ತು ಎಮಿರೇಟ್ಸ್ ರಸ್ತೆಯನ್ನು ಬಂಧಿಸುವ 12 ಕಿ.ಮೀ. ದೈರ್ಘ್ಯವಿರುವ ಈ ಯೋಜನೆಯು ಜೂನ್ ಕೊನೆಯಲ್ಲಿ ಉದ್ಘಾಟನೆ ಗೊಳ್ಳಲಿದೆ. ಈ ಮೂಲಕ ದುಬೈ – ಶಾರ್ಜಾ ರಹದಾರಿಯ ಓಡಾಟ ಸುಗಮವಾಗಲಿದೆ. ಅದೇ ರೀತಿ ವರ್ಖ, ಮಿರ್ದಿಫ್ ಕಡೆಗೂ ಪ್ರವೇಶ ಸುಲಭವಾಗಲಿದೆ.
ಯೋಜನೆ ಪೂರ್ಣಗೊಂಡರೆ ಘಂಟೆಗೆ 12,000 ವಾಹನಗಳಿಗೆ ಹಾದು ಹೋಗಲು ಸಾಧ್ಯವಾಗಲಿದೆ ಎಂದು ಆರ್ಟಿಎ ಚೇರ್ಮನ್ ಮಾತರ್ ಅಲ್ ತಾಯರ್ ತಿಳಿಸಿದ್ದಾರೆ.
ಅಲ್ ಅಮರ್ದಿ- ಅಲ್ ಖವನೀಜ್ ಅಲ್ ಅವೀರ್- ರಅಸ್ ಅಲ್ ಖೋರ್ ರಸ್ತೆ ಗಳಿಗೂ ಸಮಾಂತರ ವಾಗಿರುವ ಕಾರಣ ಪ್ರದೇಶದ ಎಲ್ಲಾ ರಸ್ತೆಗಳ ಸಾಂದ್ರತೆಯನ್ನು ಈ ಯೋಜನೆಯು ಶೇ. ಮೂವತ್ತರಷ್ಟು ಕಡಿಮೆಗೊಳಿಸಲಿದೆ.
ಮಿರ್ದಿಫ್ ಸಿಟಿ ಸೆಂಟರ್ ನಿಂದ ಶೈಖ್ ಝಾಯಿದ್ ಬಿನ್ ಹಂದಾನ್ ಅಲ್ ನಹ್ಯಾನ್ ಸ್ಟ್ರೀಟ್ ವರೆಗಿನ ಆರುವರೆ ಕಿ.ಮೀ. ರಸ್ತೆಯ ಅಗಲೀಕರಣ ಮಾಡಲಾಗುವುದು. ಇಲ್ಲಿಂದ ಎಮಿರೇಟ್ಸ್ ರಸ್ತೆವರೆಗೆ ಎರಡೂ ಬದಿಗಳಲ್ಲಿ ಮೂರು ಪಥಗಳ ಹೊಸ ರಸ್ತೆ ನಿರ್ಮಾಣವಾಗಲಿದೆ.
ಟ್ರಿಪೊಳಿ- ಅಲ್ಜೀರಿಯಾ ಸ್ಟ್ರೀಟ್ನ ಇಂಟರ್ಚೇಂಜನ್ನೂ ನವೀಕರಿಸಲಾಗುವುದು. ಮೂರು ಪಥಗಳ ಸುರಂಗ ಇಲ್ಲಿ ನಿರ್ಮಾಣ ವಾಗುವುದರೊಂದಿಗೆ ಇಂಟರ್ಸೆಕ್ಷನಿನ ಕಾಯ್ದಿರಿಸುವಿಕೆಯು ಒಂದು ನಿಮಿಷವಾಗಿ ಕಡಿಮೆಯಾಗಲಿದೆ.
ಯೋಜನೆಯ ಭಾಗವಾಗಿ ಎಮಿರೇಟ್ಸ್ ರಸ್ತೆಯಲ್ಲಿ ಒಂಟೆಗಳಿಗೆ ರಸ್ತೆ ದಾಟುವುದಕ್ಕಾಗಿ ಎರಡು ಸುರಂಗ ಹಾದಿಯನ್ನು ನಿರ್ಮಿಸಲಾಗುವುದು. ಎಮಿರೇಟ್ಸ್ ರಸ್ತೆಗೆ ಶಾರ್ಜಾ ಕಡೆಯಿಂದ ಮೂರು ಪಥಗಳ ಸಂಕವು ನಿರಮಾಣಗೊಳ್ಳಲಿದ್ದು, ಈ ಮೂಲಕ ಶಾರ್ಜಾ ಕಡೆಗೆ ಯಾತ್ರೆಹೊರಡುವ ಯಾತ್ರಿಕರಿಗೆ ಸುಗಮವಾಗಲಿದೆ.















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ