ಗುರುವಾಯನಕೆರೆ.ಜ 23 :ಕರ್ನಾಟಕದಲ್ಲಿರುವ ಸುಮಾರು ತೊಂಬತ್ತು ಲಕ್ಷ ಮುಸಲ್ಮಾನರ ಧಾರ್ಮಿಕ ,ಶೈಕ್ಷಣಿಕ ,ಸಾಮಾಜಿಕ, ರಾಜಕೀಯ, ಆರ್ಥಿಕ ಅಭಿವೃದ್ಧಿಯ ಲಕ್ಷ್ಯದೊಂದಿಗೆ ದಿನಾಂಕ 27.01.2019 ನೇ ಆದಿತ್ಯವಾರದಂದು ಸಂಜೆ 4 ಕ್ಕೆ ಸರಿಯಾಗಿ ಬೆಂಗಳೂರಿನ ಮಿಲ್ಲರ್ಸ್ ರೋಡ್ ನಲ್ಲಿರುವ ಹಳೆ ಹಜ್ಜ್ ಕ್ಯಾಂಪಿನಲ್ಲಿ ನಡೆಯುವ ಬೃಹತ್ ಕರ್ನಾಟಕ ಮುಸ್ಲಿಂ ಜಮಾಅತ್ ಘೋಷಣಾ ಸಮಾವೇಶದ ಪ್ರಚಾರಾರ್ಥ SMA ಗುರುವಾಯನಕೆರೆ ಝೋನಲ್ ವತಿಯಿಂದ ಪಬ್ಲಿಸಿಟಿ ಕನ್ವೆನ್ಷನ್ ಗುರುವಾಯನಕೆರೆ ಮದ್ರಸ ಹಾಲ್ ನಲ್ಲಿ SMA ಝೋನ್ ಅಧ್ಯಕ್ಷ ಬದ್ರುದ್ದೀನ್ ಪರಪ್ಪು ರವರ ಅಧ್ಯಕ್ಷತೆ ಯಲ್ಲಿ SMA ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಸಖಾಫಿಯವರ ಪ್ರಾರ್ಥನೆ ಯೊಂದಿಗೆ ನಡೆಯಿತು.

SJM ಜಿಲ್ಲಾ ಕಾರ್ಯದರ್ಶಿ ಆದಂ ಮದನಿ ಕಾರ್ಯಕ್ರಮ ಉದ್ಘಾಟಿಸಿದರು.ಎಸ್ .ಎಂ. ಎ ಜಿಲ್ಲಾಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಕೊಡುಂಗ್ಯಾ ಮುಖ್ಯ ಭಾಷಣ ಮಾಡಿದರು.ಸ್ಥಳೀಯ ಸಹಾಯಕ ಖತೀಬ್ ಶರೀಫ್ ಸಅದಿ,ಮುದರ್ರಿಸ್ ಹಾಮಿದ್ ಸಅದಿ ,ಅಬ್ದುರ್ರಹ್ಮಾನ್ ಬಾಖವಿ ಜಾರಿಗಬೈಲು, ಎ.ಕೆ ಅಹಮದ್ ಎರುಕಡಪು,ಯಾಕೂಬ್ ಮುಸ್ಲಿಯಾರ್ ಜಿ.ಕೆರೆ, ಮುಹಮ್ಮದ್ ರಫೀಕ್ ಅಹ್ಸನಿ, ಮುಹಮ್ಮದ್ ವೇಣೂರು, ಮೊದಲಾದವರು ಉಪಸ್ಥಿತರಿದ್ದರು.
SMA ಝೋನ್ ಕಾರ್ಯದರ್ಶಿ ಅಶ್ರಫ್ ಹಿಮಮಿ ಸ್ವಾಗತಿಸಿ,SMA ಬೆಳ್ತಂಗಡಿ ರೀಜನಲ್ ಪ್ರ.ಕಾರ್ಯದರ್ಶಿ NM ಶರೀಫ್ ಸಖಾಫಿ ವಂದಿಸಿದರು.















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ