ಚಿಕ್ಕಮಗಳೂರು-ಹಾಸನ ಜಿಲ್ಲಾ ಮಟ್ಟದ ಪ್ರತಿಭಾ ಸಂಗಮ ಇಂದು ಬೆಳಗ್ಗೆ ಚಿಕ್ಕಮಗಳೂರು ಬದ್ರಿಯ್ಯ ಮಸೀದಿ ನೆಕ್ಕಿಲಾಡಿ ಉಸ್ತಾದ್ ವೇದಿಕೆಯಲ್ಲಿ ಉಜ್ವಲವಾಗಿ ಆರಂಭಗೊಂಡಿತು. SYS ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಅಸ್ಸಯ್ಯಿದ್ ಉಪ್ಪಳ್ಳಿ ತಂಙಳ್ ದುಆ ಮಾಡಿ ಶುಭ ಹಾರೈಸಿದರು.
ಸ್ಥಳೀಯ ಮಸ್ಜಿದ್ ಗೌರವಾಧ್ಯಕ್ಷ ಖಲಂದರ್ ಹಾಜಿ, ಧ್ವಜಾರೋಹಣ ಗೈದರು. SSF ರಾಜ್ಯ ಸದಸ್ಯ ಹುಸೈನ್ ಸಅದಿ ಹೊಸ್ಮಾರು ಉದ್ಘಾಟಿಸಿದರು.
SJM ಜಿಲ್ಲಾಧ್ಯಕ್ಷ ಇಬ್ರಾಹಿಂ ಸ ಅದಿ ಅಧ್ಯಕ್ಷತೆ ವಹಿಸಿದ್ದರು.
SYS ರಾಜ್ಯ ಕೋಶಾಧಿಕಾರಿ ಯೂಸುಫ್ ಹಾಜಿ, ಅಬ್ದುಲ್ಲಾ ಹಾಜಿ ಬದ್ರಿಯ್ಯ, SSF ರಾಜ್ಯ ಮತ್ತು ಜಿಲ್ಲಾ ನಾಯಕರಾದ ಉಸ್ಮಾನ್ ಹಂಡುಗುಳಿ, ಸಯ್ಯಿದ್ ಅಲೀ, ಅಬೂಸ್ವಾಲಿಹ್ ಸಖಾಫಿ, ಹಾಸನ ಜಿಲ್ಲಾಧ್ಯಕ್ಷ ರಝಾಖ್ ಸಖಾಫಿ, ಸಿದ್ದೀಖ್ ಸಖಾಫಿ ಅರೆಹಳ್ಳಿ ಝಕರಿಯ್ಯಾ ಮುಸ್ಲಿಯಾರ್ ಉಪಸ್ಥಿತರಿದ್ದರು.