ಕರೀಟಾ: ಇಂಡೋನ್ಯಾಷ್ಯಾದ ಸುಂಡಾ ಸ್ಟೇಟ್ನಲ್ಲಿ ಶನಿವಾರ ರಾತ್ರಿ ದಿಢೀರ್ ಅಪ್ಪಳಿಸಿದ ಸುನಾಮಿಗೆ 168ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 700 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸುನಾಮಿ ಅಪ್ಪಳಿಸುವ 24 ನಿಮಿಷ ಮೊದಲು ಹಿಂದೂ ಮಹಾಸಾಗರ ಮತ್ತು ಜಾವಾ ಸಮುದ್ರವನ್ನು ಬೆಸೆಯುವ ಸಂಡಾ ಸಂಧಿಯಲ್ಲಿ (ಸಂಡಾ ಸ್ಟ್ರೇಟ್) ಜ್ವಾಲಾಮುಖಿ ಸ್ಫೋಟಿಸಿತು ಎಂದು ಸಂಸ್ಥೆ ತಿಳಿಸಿದೆ.
ಜನಪ್ರಿಯ ಪ್ರವಾಸಿ ತಾಣಗಳಲ್ಲಿದ್ದ ಜನರು ಹೆದರಿ ರಾತ್ರೋರಾತ್ರಿ ಜಾಗ ಖಾಲಿ ಮಾಡಿದ್ದಾರೆ. ಸಮುದ್ರ ತೀರದಿಂದ ಸುಮಾರು 20 ಮೀಟರ್ನಷ್ಟು ಮುಂದಕ್ಕೆ ನೀರಿನ ಎತ್ತರದ ಗೋಡೆಗಳು ಅಪ್ಪಳಿಸಿದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕ್ರಕಟೌ ಜ್ವಾಲಾಮುಖಿಯಿಂದ ರೂಪುಗೊಂಡಿರುವ ಅನ್ಕಾ ಕ್ರಕಟೌ ದ್ವೀಪದಲ್ಲಿ ಜ್ವಾಲಾಮುಖಿ ಸ್ಫೋಟವಾಗಿ ಸಮುದ್ರದೊಳಗಿನ ಭೂಫಲಕಗಳು ಕುಸಿದದ್ದು ಸುನಾಮಿಗೆ ಕಾರಣ. ನಿನ್ನೆ ಹುಣ್ಣಿಮೆಯಿದ್ದ ಕಾರಣ ಸಮುದ್ರದಲ್ಲಿ ಪ್ರಕ್ಷುಬ್ದತೆಯೂ ಹೆಚ್ಚಾಗಿತ್ತು. ಇದು ಸುನಾಮಿಯ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿತು ಎಂದು ಇಂಡೋನೇಷ್ಯಾದ ಹವಾಮಾನ ಮತ್ತು ಭೂವಿಜ್ಞಾನ ಸಂಸ್ಥೆ ಹೇಳಿದೆ.
ಸುನಾಮಿ ಅಪ್ಪಳಿಸಿದಾಗ ಪ್ರವಾಸಿಗ ಒಸ್ಟಿಯನ್ ಲುಂಡ್ ಜ್ವಾಲಾಮುಖಿಯ ಫೋಟೊ ತೆಗೆಯುತ್ತಿದ್ದರು. ‘ತೀರದ ಒಳಗೆ ಸುಮಾರು 20 ಮೀಟರ್ನಷ್ಟು ಉದ್ದಕ್ಕೆ ಸುನಾಮಿಯ ಅಲೆಗಳು ಚಾಚಿಕೊಂಡವು. ನಾನಿದ್ದ ಹೋಟೆಲ್, ಕಾರುಗಳು, ರಸ್ತೆ ನೀರಿನಲ್ಲಿ ಮುಳುಗಿತ್ತು. ಸ್ಥಳೀಯರ ಸಹಾಯದಿಂದ ಹತ್ತಿರದಲ್ಲಿದ್ದ ಗುಡ್ಡ ಹತ್ತಿ ಜೀವ ಉಳಿಸಿಕೊಂಡೆವು’ ಎಂದು ಅವರು ನೆನಪಿಸಿಕೊಂಡರು.
ಉಜುಂಗ್ ರಾಷ್ಟ್ರೀಯ ಉದ್ಯಾನ ಮತ್ತು ಜನಪ್ರಿಯ ಬೀಚ್ಗಳಿರುವ ಜಾವಾದ ಪಂಡೆಗ್ಲಾಂಗ್ ಪ್ರದೇಶದಲ್ಲಿ ಸುನಾಮಿಯಿಂದ ಹೆಚ್ಚು ಹಾನಿಯಾಗಿದೆ. ದಕ್ಷಿಣ ಸುಮಾತ್ರಾದ ರಾಜ್ಯಪಾಲರ ಕಚೇರಿಯಲ್ಲಿ ನೂರಾರು ಸಂತ್ರಸ್ತರು ಆಶ್ರಯ ಪಡೆದುಕೊಂಡಿದ್ದಾರೆ.















ಇನ್ನಷ್ಟು ಸುದ್ದಿಗಳು
ಇರಾನ್ ಮೇಲೆ ಮತ್ತೆ ಯುಎಸ್ ದಾಳಿ; ಬಂದರ್ ಅಬ್ಬಾಸ್ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಬಾಂಬ್ ದಾಳಿ
ಇರಾಕ್ನಲ್ಲೂ ಖಾಮ್ನಈ ಅಂತ್ಯಕ್ರಿಯೆ ವಿಧಿವಿಧಾನಗಳು; ನಜಫ್ನತ್ತ ಹರಿದುಬಂದ ಜನಸಾಗರ
ವಿಕಾಸದ ಕೂಗಿನೊಂದಿಗೆ ಇತ್ತಿಹಾದ್ ರೈಲು; ಟಿಕೆಟ್ ದರ ಮತ್ತು ರಿಯಾಯಿತಿಗಳ ಘೋಷಣೆ
ಯುಎಇ: ಮುಂದುವರಿದ ಭಾರತೀಯ ಪಾಸ್ಪೋರ್ಟ್ ಸೇವಾ ಬಿಕ್ಕಟ್ಟು
ಇತ್ತಿಹಾದ್ ರೈಲಿಗೆ ಐತಿಹಾಸಿಕ ಕ್ಷಣ; ಭವ್ಯ ಆರಂಭಕ್ಕೆ ಯುಎಇನಲ್ಲಿ ಅಭೂತಪೂರ್ವ ಜನಸ್ಪಂದನ
ವಲಸಿಗರಿಗೆ ಶುಭ ಸುದ್ದಿ: ಸೌದಿ ವರ್ಕ್ ಪರ್ಮಿಟ್ ಸ್ಥಿತಿ ಸರಿಪಡಿಸಿಕೊಳ್ಳುವ ಗಡುವು ವಿಸ್ತರಣೆ
‘ಅವನು ಬದುಕಿದ್ದರೆ ನಾನು ಕೂಡ ಬದುಕುತ್ತೇನೆ’; ಭೂಕಂಪದ ಅವಶೇಷಗಳ ನಡುವೆ ಮರಣವನ್ನೇ ಗೆದ್ದು ಬಂದ ತಾಯಿ ಮತ್ತು 18 ದಿನದ ಮಗು!
ದಾಳಿಗಳು ಮುಂದುವರಿದರೆ ‘ನರಕಸದೃಶ’ ತಿರುಗೇಟು ನೀಡಲಾಗುವುದು- ಇರಾನ್ ಎಚ್ಚರಿಕೆ
ಮತ್ತೆ ಯುದ್ಧವೇ? – ಎರಡನೇ ದಿನವೂ ಇರಾನ್ ಮೇಲೆ ಯುಎಸ್ ದಾಳಿ
ಬಹ್ರೇನ್ ಮೇಲೆ ಇರಾನ್ ಡ್ರೋನ್ ದಾಳಿ: ಸೌದಿ ಅರೇಬಿಯಾ ತೀವ್ರ ಖಂಡನೆ- ಪೂರ್ಣ ಬೆಂಬಲ ಘೋಷಣೆ