ದೋಹಾ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕತಾರ್ ಅಝೀಝಿಯ ಝೋನ್ ವತಿಯಿಂದ ” ಸ್ವಲಾತ್ ವಾರ್ಷಿಕ ಹಾಗೂ ಬುರ್ದಾ ಮಜ್ಲಿಸ್ ಕಾರ್ಯಕ್ರಮ ನವೆಂಬರ್ 30 ಶುಕ್ರವಾರ ಜುಮಾ ನಮಾಜಿನ ಬಳಿಕ ನಡೆಯಿತು.
ಸಂಘಟನಾ ವಿಭಾಗದ ಅಧ್ಯಕ್ಷರಾದ ಯೂಸುಫ್ ಸಖಾಫಿ ಅಯ್ಯಂಗೇರಿ ಯವರು ಉಧ್ಘಾಟಿಸಿದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಫಿಲ್ ಉಮರುಲ್ ಫಾರೂಕ್ ಸಖಾಫಿ ಯವರು ವಹಿಸಿದ್ದರು.
ಸ್ವಲಾತ್ ನ ನೇತೃತ್ವ ವನ್ನು ಹಾಫಿಲ್ ಮುಬಾರಕ್ ಸಖಾಫಿ ಪುಂಜಾಲಕಟ್ಟೆ ಯವರು ವಹಿಸಿದ್ದರು.
ನಜೀರ್ ಸಖಾಫಿ ಮತ್ತು ತಂಡದವರಿಯು ಅತ್ಯಾಕರ್ಷಕ ಬುರ್ದಾ ಮಜ್ಲಿಸ್ ನಡೆಸಿಕೊಟ್ಟರು .

ಪ್ರತಿಭೋತ್ಸವ ದಲ್ಲಿ ವಿಜೇತರಾದವರಿಗೆ ಸಂಘಟನೆಯ ನೇತಾರರಾದ ಕಬೀರ್ ದೇರಳಕಟ್ಟೆ ಹಾಗೂ ಅಂದುಮಾಯಿ ನಾವುಂದ ಇವರ ಪ್ರಶಸ್ತಿ ವಿತರಣೆ ನೆರವೇರಿಸಿ ಕೊಟ್ಟರು.
ಅಲ್ಲದೆ ಪ್ರಸ್ತುತ ಝೋನ್ ನ ಹಿರಿಯ ಸದಸ್ಯ ಹಾಗೂ ಮಾದರಿ ಕಾರ್ಯಕರ್ತರಾದ ಇಬ್ರಾಹಿಂ ಮಲಾರ್ ರವರನ್ನು ಸನ್ಮಾನಿಸಲಾಯಿತು
ಅಝೀಝಿಯ ಝೋನ್ ಅಧ್ಯಕ್ಷರಾದ ಖಾಲಿದ್ ಹಿಮಮಿ ಯವರು ಸ್ವಾಗತಿಸಿ ಆಸೀಫ್ ಕರ್ಪಾಡಿ ಯವರು ವಂದಿಸಿದರು. ಕಾರ್ಯಕ್ರಮದ ನಿರೂಪಣೆ ಯನ್ನು ಫಾರೂಕ್ ಕೃಷ್ಣಾಪುರ ರವರು ನಡೆಸಿ ಕೊಟ್ಟರು.
ಡಿಸೆಂಬರ್ ೩ ನೇ ತಾರೀಕಿನಂದು ಮಂಗಳೂರಿನ ನೆಹರೂ ಮೈದಾನ ದಲ್ಲಿ ನಡೆಯಲಿರುವ ಸಾಮುದಾಯಿಕ ಸಮ್ಮೇಳನದ ಪ್ರಚಾರಾರ್ಥ ಪೋಸ್ಟರ್ ಬಿಡುಗಡೆ ಗೊಳಿಸಲಾಯಿತು.
ಅದೇ ದಿನ ಇಶಾ ನಮಾಜಿನ ಬಳಿಕ ದೋಹಾ ಜೋನ್ ನ ವತಿಯಿಂದ ಮೀಲಾದ್ ಕಾರ್ಯಕ್ರಮ ನಡೆಯಿತು.
ಖಾಲಿದ್ ಹಿಮಾಮಿ ಮೌಲಿದ್ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಸಿ.ಎಫ್ ಖತ್ತರ್ ನ್ಯಾಷನಲ್ ಕಮೀಟಿ ಸದಸ್ಯರಾದ ಕಬೀರ್ ದೇರಳಕಟ್ಟೆ ವಹಿಸಿದರು. ಸಂಘಟನಾ ಅಧ್ಯಕ್ಷರಾದ ಹಾಫಿಳ್ ಉಮರುಲ್ ಫಾರೂಕ್ ಸಖಾಫಿಯವರು ಯುವತ್ವ ಹಾಗು ಬಿಡುವಿನ ಸಮಯದ ಮಹತ್ವದ ಕುರಿತು ಮುಖ್ಯ ಪ್ರಭಾಷಣ ನಡೆಸಿ ದುಆ ಆಶೀರ್ವಚನಗೈದರು. ಮುಖ್ಯ ಅತಿಥಿಗಳಾಗಿ ಯೂಸುಫ್ ಸಖಾಫಿ,ಫಾರುಖ್ ಕೃಷ್ಣಾಪುರ,ಅಂದುಮಾಯಿ ನಾವುಂದ, ಇಕ್ಬಾಲ್ ಪೂಂಜಲಕಟ್ಟೆ ಸಿದ್ದಿಕ್ ಕೃಷ್ಣಾಪುರ ಉಪಸ್ಥಿರಿದ್ದರು.















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ