ಜೆರುಸಲೆಮ್:ಇಸ್ರೇಲ್-ಇರಾನಿನ ಸಂಘರ್ಷ ಐದು ದಿನಗಳಿಂದ ನಿರಂತರವಾಗಿ ಮುಂದುವರೆದಿದೆ. ಇರಾನ್, ಇಸ್ರೇಲ್ ಮೇಲೆ ಕ್ಷಿಪಣಿಗಳ ದಾಳಿಯನ್ನು ಮುಂದುವರಿಸಿದೆ. ಇರಾನ್ ರಾಜಧಾನಿ ಟೆಹ್ರಾನ್ನಲ್ಲೂ ಸ್ಫೋಟಗಳ ಶಬ್ದ ಕೇಳಿಬಂದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪಶ್ಚಿಮ ಏಷ್ಯಾದಲ್ಲಿ ತಲೆದೋರಿರುವ ಉದ್ವಿಗ್ನತೆ ಮತ್ತಷ್ಟು ಹೆಚ್ಚುತ್ತಿರುವ ಲಕ್ಷಣಗಳು ಕಂಡು ಬರುತ್ತಿವೆ. ಅರಬ್ ದೇಶಗಳು ಪರಿಸ್ಥಿತಿಯನ್ನು ಶಮನಿಸುವ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ.
ಇರಾನ್ನಲ್ಲಿ ಇಸ್ರೇಲ್ ದಾಳಿಯಲ್ಲಿ ಸುಮಾರು 224 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇಸ್ರೇಲ್ನಲ್ಲಿ ಇರಾನಿನ ದಾಳಿಯಲ್ಲಿ 24 ಜನರು ಮೃತಪಟ್ಟಿದ್ದಾರೆಂದು ಇರಾನ್ ಘೋಷಿಸಿದೆ. ಇಸ್ರೇಲ್ ನಿನ್ನೆ ಇರಾನ್ನ ರಾಷ್ಟ್ರೀಯ ದೂರದರ್ಶನದ ಪ್ರಧಾನ ಕಚೇರಿ ಮತ್ತು ಟೆಹ್ರಾನ್ನ ವಿವಿಧ ಸ್ಥಳಗಳ ಮೇಲೆ ಭಾರೀ ದಾಳಿ ನಡೆಸಿತು. ನಿನ್ನೆ ಒಂದೇ ದಿನದಲ್ಲಿ ಇರಾನ್ನಲ್ಲಿ 45 ಜನರು ಮೃತಪಟ್ಟಿದ್ದಾರೆ . ದೂರದರ್ಶನ ಕಂಪನಿ ಕಾಂಕಾ ಮೇಲಿನ ದಾಳಿಯಲ್ಲಿ ಇಬ್ಬರು ಪತ್ರಕರ್ತರು ಮೃತಪಟ್ಟಿದ್ದಾರೆ.
ಇರಾನ್ ಇಸ್ರೇಲ್ನ ಟೆಲ್ ಅವಿವ್, ಪೆಟಾ ಟಿಕ್ವಾ ಮತ್ತು ಹೈಫಾ ನಗರಗಳಿಗೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ. ಇರಾನ್ನ ಕ್ರಾಂತಿಕಾರಿ ಪಡೆಗಳು ಇಸ್ರೇಲ್ನ ಮಿಲಿಟರಿ ಗುಪ್ತಚರ ಕೇಂದ್ರ ಮತ್ತು ಮೊಸಾದ್ ಯೋಜನಾ ಕೇಂದ್ರದ ಮೇಲೆ ದಾಳಿ ನಡೆಸಿವೆ ಎಂದು ತಸ್ನಿಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ದಾಳಿ ಹಲವಾರು ಹಂತಗಳಲ್ಲಿ ಮುಂದುವರಿಯಲಿದೆ ಎಂದು ಇರಾನ್ ಮೊದಲೇ ಎಚ್ಚರಿಸಿತ್ತು.
ಇರಾನ್ನ ಬ್ಯಾಲಿಸ್ಟಿಕ್ ದಾಳಿ ಇಸ್ರೇಲಿ ಜನರನ್ನು ಭಯಭೀತಗೊಳಿಸುತ್ತಿದೆ. ಇಸ್ರೇಲ್ನ ಲೆಕ್ಕಾಚಾರಗಳಿಗೆ ಸಂಪೂರ್ಣ ತದ್ವಿರುದ್ಧವಾಗಿ ಇರಾನ್ನ ಕಾರ್ಯಾಚರಣೆ ನಡೆಯುತ್ತಿದೆ. ಝಿಯೋನಿಸ್ಟ್ ಆಡಳಿತದ ಆರಂಭಿಕ ಸಂತೋಷವು ಈಗ ಕಳವಳಕ್ಕೆ ದಾರಿ ಮಾಡಿಕೊಟ್ಟಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಇಸ್ರೇಲ್ ಜನರು ಭಯ ಮತ್ತು ಆತಂಕದಲ್ಲಿದ್ದಾರೆ. ನಿರಂತರ ಎಚ್ಚರಿಕೆ ಸಂದೇಶಗಳನ್ನು ಸ್ವೀಕರಿಸುತ್ತಿರುವ ಜನರು ಬಂಕರ್ ಗಳಲ್ಲೇ ಉಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಎರಡು ದಿನಗಳ ಹಿಂದೆ, ಇರಾನಿನ ಕ್ಷಿಪಣಿ ‘ಇಸ್ರೇಲಿ ಪೆಂಟಗನ್’ ಎಂದು ಕರೆಯಲ್ಪಡುವ ಮಿಲಿಟರಿ ಪ್ರಧಾನ ಕಚೇರಿಯನ್ನು ಅಪ್ಪಳಿಸಿತು. ಇಸ್ರೇಲ್ನ ‘ಟೆಕ್ ಬ್ರೈನ್’ (ತಂತ್ರಜ್ಞಾನ ಮೆದುಳು) ಎಂದು ಕರೆಯಲ್ಪಡುವ ಸಂಸ್ಥೆಯ ಮೇಲೂ ಪ್ರಮುಖ ದಾಳಿ ನಡೆಸಲಾಗಿದೆ ಎಂಬ ವರದಿಗಳು ಹೊರಬರುತ್ತಿವೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇರಾನ್ ಮೇಲೆ “ಪ್ರಮುಖ ದಾಳಿ” ನಡೆಯುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಟೆಹ್ರಾನ್ನ ವಿವಿಧ ಭಾಗಗಳಲ್ಲಿರುವ ಜನರು ಸ್ಥಳಾಂತರಗೊಳ್ಳುವಂತೆ ಅವರು ಎಚ್ಚರಿಕೆ ನೀಡಿದ್ದಾರೆ. ಇರಾನ್ನಲ್ಲಿರುವ ಎಲ್ಲಾ ವೈದ್ಯರು ಮತ್ತು ದಾದಿಯರ ರಜೆಗಳನ್ನು ರದ್ದುಗೊಳಿಸಲಾಗಿದೆ.
ಇರಾನ್ನ ಹೊಸ ಮಿಲಿಟರಿ ಕಮಾಂಡರ್ ಹತ್ಯೆಯನ್ನು ಇಸ್ರೇಲ್ ಘೋಷಿಸಿದೆ. IRGC ಯ ಖತಮ್ ಅಲ್-ಅನ್ಬಿಯಾ ಕೇಂದ್ರ ಪ್ರಧಾನ ಕಚೇರಿಯ ಮುಖ್ಯಸ್ಥ ಅಲಿ ಶಾದ್ಮಾನಿ ಟೆಹ್ರಾನ್ನಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಸೇನೆ ಹೇಳಿಕೊಂಡಿದೆ. ಶಾದ್ಮಾನಿ ಇರಾನ್ನ ಅತ್ಯಂತ ಹಿರಿಯ ಮಿಲಿಟರಿ ಕಮಾಂಡರ್ ಮತ್ತು ಇರಾನ್ನ ಸರ್ವೋಚ್ಚ ನಾಯಕ ಅಲಿ ಖಮಾನೈ ಅವರ ಆಪ್ತ ಸಹಚರ. ಆದಾಗ್ಯೂ, ಅಲಿ ಶಾದ್ಮಾನಿ ಕೊಲ್ಲಲ್ಪಟ್ಟಿದ್ದಾರೆಯೇ ಎಂದು ಇರಾನ್ ಅಧಿಕೃತವಾಗಿ ದೃಢಪಡಿಸಿಲ್ಲ.
ದೇಶದ ವಾಯು ರಕ್ಷಣಾ ಪಡೆ, ರಾಡಾರ್, ಕಣ್ಣಾವಲು, ಕ್ಷಿಪಣಿ ಮತ್ತು ಫಿರಂಗಿ ವ್ಯವಸ್ಥೆಗಳನ್ನು ಬಳಸಿಕೊಂಡು ಪ್ರತಿಕೂಲ ದಾಳಿಯನ್ನು ತಡೆದಿದೆ ಎಂದು ಇರಾನ್ ಸೇನೆ ಹೇಳಿದೆ. ಕಳೆದ 24 ಗಂಟೆಯಲ್ಲಿ ಇಸ್ರೇಲ್ನ ಹರ್ಮ್ಸ್ ಡೋನ್ ಸೇರಿದಂತೆ 28 ಶತ್ರು ವಿಮಾನಗಳನ್ನು ನಿಖರವಾದ ಗುಂಡಿನ ದಾಳಿಯಿಂದ ಹೊಡೆದುರುಳಿಸಿದ್ದೇವೆ ಎಂದು ಇರಾನ್ ತಿಳಿಸಿದೆ.
ಹೊಡದುರುಳಿಸಿದ ಡೋನ್ಗಳಲ್ಲಿ ಒಂದು ಗುಪ್ತಚರ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿರುವ ಬೇಹುಗಾರಿಕೆ ಡೋನ್ ಎಂದು ಇರಾನ್ ಹೇಳಿದೆ.
ಇಸ್ರೇಲ್ನ ಹಲವಾರು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ಇರಾನ್ ಸೇನೆಯು ಈ ಮೊದಲು ಹೇಳಿತ್ತು. ಆದರೆ ಇಸ್ರೇಲ್ ಇದನ್ನು ನಿರಾಕರಿಸಿತ್ತು. ಇರಾನ್ನಲ್ಲಿ ಕಾರ್ಯಾಚರಣೆಯ ಸಮಯದಲ್ಲಿ ಯಾವುದೇ ಸಿಬ್ಬಂದಿ ಅಥವಾ ವಿಮಾನಗಳಿಗೆ ಹಾನಿಯಾಗಿಲ್ಲ ಎಂದು ಹೇಳಿತ್ತು.
ಏತನ್ಮಧ್ಯೆ, ಇರಾನ್ ಮೇಲಿನ ದಾಳಿ ಮುಂದುವರಿಯಲಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ. ಇರಾಕ್ ನಾಯಕ ಸದ್ದಾಂ ಹುಸೇನ್ ಅವರಂತೆಯೇ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮಾನೈ ಕೂಡ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. “ಇರಾನ್ ಸರ್ವಾಧಿಕಾರಿ ತನ್ನ ಯುದ್ಧ ಅಪರಾಧಗಳನ್ನು ಮುಂದುವರಿಸುವುದರ ವಿರುದ್ಧ ಮತ್ತು ಇಸ್ರೇಲಿ ನಾಗರಿಕರ ಮೇಲೆ ಕ್ಷಿಪಣಿಗಳನ್ನು ಹಾರಿಸುವುದರ ವಿರುದ್ಧ ನಾನು ಎಚ್ಚರಿಕೆ ನೀಡುತ್ತೇನೆ” ಎಂದು ಕಾಟ್ಜ್ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಏತನ್ಮಧ್ಯೆ, ಇರಾನ್-ಇಸ್ರೇಲ್ ಯುದ್ಧದಲ್ಲಿ ಅಮೆರಿಕ ಕೂಡ ಮಧ್ಯಪ್ರವೇಶಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಶರಣಾಗುವಂತೆ ಕರೆ ನೀಡಿದ್ದಾರೆ. ಇರಾನ್ನ ಸರ್ವೋಚ್ಚ ನಾಯಕ ಎಲ್ಲಿ ಅಡಗಿದ್ದಾನೆಂದು ತನಗೆ ತಿಳಿದಿದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ. ದಿ ಟ್ರುತ್ ಸೋಷಿಯಲ್ನಲ್ಲಿ ಟ್ರಂಪ್ ಅವರ ಪೋಸ್ಟ್ನಲ್ಲಿ ಬೇಷರತ್ತಾದ ಶರಣಾಗತಿ ಉತ್ತಮ ಎಂದು ಹೇಳಲಾಗಿದೆ.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಇರಾನ್ ಮೇಲೆ ಮತ್ತೆ ಯುಎಸ್ ದಾಳಿ; ಬಂದರ್ ಅಬ್ಬಾಸ್ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಬಾಂಬ್ ದಾಳಿ