janadhvani

Kannada Online News Paper

ಏ.18: ಬೃಹತ್ ಪ್ರತಿಭಟನೆ: ಎಪ್ರಿಲ್.14 ರಂದು ಎಸ್‌ವೈಎಸ್ ದ.ಕ ಜಿಲ್ಲೆ (ವೆಸ್ಟ್) ವತಿಯಿಂದ ಪ್ರಚಾರ ಸಭೆ

ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಅಸಂವಿಧಾನಿಕ ವಖ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ದ.ಕ ಉಲಮಾ ಕೋಆರ್ಡಿನೇಶನ್ ನೇತ್ರತ್ವದಲ್ಲಿ 2025 ಎಪ್ರಿಲ್ 18 ರಂದು ಕಣ್ಣೂರು ಶಾ ಗಾರ್ಡನ್ ನಲ್ಲಿ ನಡೆಯುವ ಬೃಹತ್ ಪ್ರತಿಭಟನೆಯ ಪ್ರಚಾರಾರ್ಥ 2025 ಎಪ್ರಿಲ್ 14, ಸೋಮವಾರ ರಾತ್ರಿ 7 ಗಂಟೆಗೆ ಏಕಕಾಲದಲ್ಲಿ ದಕ್ಷಣ ಕನ್ನಡ ಜಿಲ್ಲಾ (ವೆಸ್ಟ್) ವ್ಯಾಪ್ತಿಯ 33 ಸರ್ಕಲ್ ಗಳಲ್ಲಿ ಪ್ರಚಾರ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.

ಸಜೀಪ, ಬೋಳಿಯಾರ್, ಮಂಗಳೂರು , ಉಳ್ಳಾಲ, ಸುರತ್ಕಲ್, ಕೃಷ್ಣಾಪುರ, ತಲಪಾಡಿ, ಕೋಟೆಕಾರ್, ಬಂಟ್ವಾಳ, ಪಾಣೆಮಂಗಳೂರು, ಪರಂಗಿಪೇಟೆ , ಕಣ್ಣೂರು , ಕೋಣಾಜೆ, ಹರೇಕಳ, ಮೂಡಬಿದ್ರೆ, ಕಾವೂರು , ಮುಲ್ಕಿ, ಕಾಟಿಪಳ್ಳ, ಬೆಳ್ಮ , ನಾಟೆಕಲ್, ಮುಡಿಪು , ಬಾಳೆಪುಣಿ, ತೌಡುಗೋಳಿ, ಮೋಂಟುಗೋಳಿ, ಕಿನ್ಯ, ಮಂಜನಾಡಿ, ಸುರಿಬೈಲ್, ಮಂಚಿ, ಅಮ್ಮಂಜೆ , ಕೈಕಂಬ , ಸಾಲೆತ್ತೂರು, ಬೋಳಂತೂರು, ಬಜ್ಪೆ ಮುಂತಾದ ಕೇಂದ್ರಗಳಲ್ಲಿ ಪ್ರತಿಭಟನಾ ಪ್ರಚಾರ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಸ್‌ವೈಎಸ್ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಈಲ್ ಮಾಸ್ಟರ್ ಮರಿಕ್ಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.