ಮಲಪ್ಪುರಂ: ಇಲ್ಲಿನ ಥಾನೂರ್ ನಿಂದ ಕಾಣೆಯಾಗಿದ್ದ ವಿದ್ಯಾರ್ಥಿನಿಯರಿಬ್ಬರು ಪತ್ತೆಯಾಗಿದ್ದಾರೆ. ಇವರಿಬ್ಬರು ಬುಧವಾರ ಮಧ್ಯಾಹ್ನ ಶಾಲೆಯಿಂದ ಪರಾರಿಯಾಗಿದ್ದರು. ಪರೀಕ್ಷೆ ಬರೆಯಲು ಶಾಲೆಗೆ ತೆರಳಿದ ಅವರು ಪರೀಕ್ಷೆ ಬರೆಯದೆ ಊರು ಬಿಟ್ಟಿದ್ದರು. ಮುಂಬೈ-ಚೆನ್ನೈ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ವಿದ್ಯಾರ್ಥಿನಿಯರು ಪತ್ತೆಯಾಗಿದ್ದಾರೆ. ಲೋನಾವಾಲದಿಂದ ಬೆಳಗಿನ ಜಾವ 1.45 ಕ್ಕೆ. ಮಕ್ಕಳನ್ನು ಗುರುತಿಸಿದ ರೈಲ್ವೆ ಪೊಲೀಸರು, ಹುಡುಗಿಯರನ್ನು ವಶಕ್ಕೆ ಪಡೆದಿದ್ದಾರೆ.ಥಾನೂರು ಪೊಲೀಸರು ಆಗಮಿಸಿದ ಬಳಿಕ ಅವರನ್ನು ಪೋಲೀಸರಿಗೆ ಒಪ್ಪಿಸಲಾಗುವುದು.
ವಿದ್ಯಾರ್ಥಿನಿಯರನ್ನು ವೈದ್ಯಕೀಯ ಪರೀಕ್ಷೆಗಾಗಿ ಪುಣೆಯ ಸಸೂನ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿಂದ ಅವರನ್ನು ಆರೈಕೆ ಗೃಹಕ್ಕೆ ವರ್ಗಾಯಿಸಲಾಗುತ್ತದೆ. ಇಂದು ಸಂಜೆಯೊಳಗೆ ಮಕ್ಕಳನ್ನು ಕೇರಳಕ್ಕೆ ಕರೆತರಲಾಗುವುದು. ಕಾಣೆಯಾದ ವಿದ್ಯಾರ್ಥಿಗಳು ದೇವದರ್ ಹೈಯರ್ ಸೆಕೆಂಡರಿ ಶಾಲೆಯ ಫಾತಿಮಾ ಶಹಾದಾ ಮತ್ತು ಅಶ್ವತಿ.
ಹುಡುಗಿಯರನ್ನು ಪತ್ತೆಹಚ್ಚುವಲ್ಲಿ ಟೆಲಿಫೋನ್ ಲೊಕೇಶನ್ ನಿರ್ಣಾಯಕವಾಗಿತ್ತು. ರಾತ್ರಿ, ಹುಡುಗಿಯರು ಮುಂಬೈಗೆ ಆಗಮಿಸಿದ್ದಾರೆಂಬ ಮಾಹಿತಿ ಸಿಕ್ಕಿತು. ನಂತರದ ತನಿಖೆಯಲ್ಲಿ ಹುಡುಗಿಯರು ಪತ್ತೆಯಾಗಿದ್ದಾರೆ.
ಮನೆಗೆ ಮರಳುವುದಿಲ್ಲ, ಅಲ್ಲಿ ಸಮಸ್ಯೆಗಳಿವೆ
ನಮಗೆ 18 ವರ್ಷ ತುಂಬಿದೆ, ಮನೆಯವರು ಕಡಿಮೆ ವಯಸ್ಸು ತಿಳಿಸಿದ್ದಾರೆ. ತಮ್ಮ ಕುಟುಂಬದವರ ನಡವಳಿಕೆ ಚೆನ್ನಾಗಿಲ್ಲ,ನಮ್ಮ ಇಚ್ಛೆಯಂತೆ ನಡೆಯಲು ಅವಕಾಶವಿಲ್ಲ, ಯಾರು ಏನೇ ಹೇಳಿದರೂ ತಮ್ಮ ಮನೆಯವರು ಕೇಳುವುದಿಲ್ಲ ಎಂದು ಹುಡುಗಿಯರು ದೂರಿದ್ದಾರೆ. ನಮಗೆ ಹೊಡೆಯುವುದು, ಜಗಳವಾಡುವುದು ರೂಢಿಯಾಗಿದೆ. ಯಾರಾದರೂ ತಿಳಿ ಹೇಳಿದರೆ, ಎರಡು ಅಥವಾ ಮೂರು ದಿನಗಳವರೆಗೆ ಯಾವುದೇ ಸಮಸ್ಯೆಗಳಿಲ್ಲದೆ ವರ್ತಿಸುತ್ತಾರೆ. ನಂತರ ಕುಟುಂಬವು ಮೊದಲಿನ ಸ್ಥಿತಿಗೆ ಮರಳುತ್ತದೆ. ಆದ್ದರಿಂದ ನಾವು ಊರಿಗೆ ಮರಳಿದರೂ, ಮನೆಗೆ ಮರಳುವುದಿಲ್ಲ ಎಂದು ಸ್ವಯಂಸೇವಕ ಸುಧೀರ್ ಅವರೊಂದಿಗಿನ ದೂರವಾಣಿ ಸಂಭಾಷಣೆಯಲ್ಲಿ ಹುಡುಗಿಯರು ಹೇಳಿದರು. ನಮಗೆ ಒಂದು ಕೆಲಸ ದೊರೆಯಲು ಸಹಾಯ ಮಾಡುವಂತೆ ಸುಧೀರ್ ನೊಂದಿಗೆ ವಿದ್ಯಾರ್ಥಿನಿಗಳು ಕೇಳಿದ್ದಾರೆ.
ಈ ಮಧ್ಯೆ, ಅವರ ಕುಟುಂಬದೊಂದಿಗೆ ವಿಚಾರಿಸಿದಾಗ , ಮಕ್ಕಳೊಂದಿಗೆ ಯಾವುದೇ ದೊಡ್ಡ ಸಮಸ್ಯೆಗಳಿಲ್ಲ ಎಂದು ಕುಟುಂಬದವರು ಹೇಳಿದ್ದಾರೆ.
















ಇನ್ನಷ್ಟು ಸುದ್ದಿಗಳು
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ಗೆ ಭರ್ಜರಿ ಗೆಲುವು- ಆಡಳಿತದ ಹಾದಿಗೆ ಸಿಕ್ಕ ಮುದ್ರೆ ಎಂದ ಸಿಎಂ ಡಿ.ಕೆ. ಶಿವಕುಮಾರ್
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
‘ಗಲ್ಫ್ ಪ್ರದೇಶದ ಸಂಘರ್ಷಗಳನ್ನು ಭಾರತಕ್ಕೆ ನಿರ್ಲಕ್ಷಿಸಲು ಸಾಧ್ಯವಿಲ್ಲ’ – ಭಾರತೀಯ ರಾಯಭಾರಿ ಡಾ. ಸುಹೈಲ್ ಅಜಾಝ್ ಖಾನ್
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ: ‘E-GEN ಸ್ಕಾಲರ್ಶಿಪ್’ ಗೆ ಅಧಿಕೃತ ಚಾಲನೆ
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ