ಮಲಪ್ಪುರಂ: ಇಲ್ಲಿನ ಥಾನೂರ್ ನಿಂದ ಕಾಣೆಯಾಗಿದ್ದ ವಿದ್ಯಾರ್ಥಿನಿಯರಿಬ್ಬರು ಪತ್ತೆಯಾಗಿದ್ದಾರೆ. ಇವರಿಬ್ಬರು ಬುಧವಾರ ಮಧ್ಯಾಹ್ನ ಶಾಲೆಯಿಂದ ಪರಾರಿಯಾಗಿದ್ದರು. ಪರೀಕ್ಷೆ ಬರೆಯಲು ಶಾಲೆಗೆ ತೆರಳಿದ ಅವರು ಪರೀಕ್ಷೆ ಬರೆಯದೆ ಊರು ಬಿಟ್ಟಿದ್ದರು. ಮುಂಬೈ-ಚೆನ್ನೈ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ವಿದ್ಯಾರ್ಥಿನಿಯರು ಪತ್ತೆಯಾಗಿದ್ದಾರೆ. ಲೋನಾವಾಲದಿಂದ ಬೆಳಗಿನ ಜಾವ 1.45 ಕ್ಕೆ. ಮಕ್ಕಳನ್ನು ಗುರುತಿಸಿದ ರೈಲ್ವೆ ಪೊಲೀಸರು, ಹುಡುಗಿಯರನ್ನು ವಶಕ್ಕೆ ಪಡೆದಿದ್ದಾರೆ.ಥಾನೂರು ಪೊಲೀಸರು ಆಗಮಿಸಿದ ಬಳಿಕ ಅವರನ್ನು ಪೋಲೀಸರಿಗೆ ಒಪ್ಪಿಸಲಾಗುವುದು.
ವಿದ್ಯಾರ್ಥಿನಿಯರನ್ನು ವೈದ್ಯಕೀಯ ಪರೀಕ್ಷೆಗಾಗಿ ಪುಣೆಯ ಸಸೂನ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿಂದ ಅವರನ್ನು ಆರೈಕೆ ಗೃಹಕ್ಕೆ ವರ್ಗಾಯಿಸಲಾಗುತ್ತದೆ. ಇಂದು ಸಂಜೆಯೊಳಗೆ ಮಕ್ಕಳನ್ನು ಕೇರಳಕ್ಕೆ ಕರೆತರಲಾಗುವುದು. ಕಾಣೆಯಾದ ವಿದ್ಯಾರ್ಥಿಗಳು ದೇವದರ್ ಹೈಯರ್ ಸೆಕೆಂಡರಿ ಶಾಲೆಯ ಫಾತಿಮಾ ಶಹಾದಾ ಮತ್ತು ಅಶ್ವತಿ.
ಹುಡುಗಿಯರನ್ನು ಪತ್ತೆಹಚ್ಚುವಲ್ಲಿ ಟೆಲಿಫೋನ್ ಲೊಕೇಶನ್ ನಿರ್ಣಾಯಕವಾಗಿತ್ತು. ರಾತ್ರಿ, ಹುಡುಗಿಯರು ಮುಂಬೈಗೆ ಆಗಮಿಸಿದ್ದಾರೆಂಬ ಮಾಹಿತಿ ಸಿಕ್ಕಿತು. ನಂತರದ ತನಿಖೆಯಲ್ಲಿ ಹುಡುಗಿಯರು ಪತ್ತೆಯಾಗಿದ್ದಾರೆ.
ಮನೆಗೆ ಮರಳುವುದಿಲ್ಲ, ಅಲ್ಲಿ ಸಮಸ್ಯೆಗಳಿವೆ
ನಮಗೆ 18 ವರ್ಷ ತುಂಬಿದೆ, ಮನೆಯವರು ಕಡಿಮೆ ವಯಸ್ಸು ತಿಳಿಸಿದ್ದಾರೆ. ತಮ್ಮ ಕುಟುಂಬದವರ ನಡವಳಿಕೆ ಚೆನ್ನಾಗಿಲ್ಲ,ನಮ್ಮ ಇಚ್ಛೆಯಂತೆ ನಡೆಯಲು ಅವಕಾಶವಿಲ್ಲ, ಯಾರು ಏನೇ ಹೇಳಿದರೂ ತಮ್ಮ ಮನೆಯವರು ಕೇಳುವುದಿಲ್ಲ ಎಂದು ಹುಡುಗಿಯರು ದೂರಿದ್ದಾರೆ. ನಮಗೆ ಹೊಡೆಯುವುದು, ಜಗಳವಾಡುವುದು ರೂಢಿಯಾಗಿದೆ. ಯಾರಾದರೂ ತಿಳಿ ಹೇಳಿದರೆ, ಎರಡು ಅಥವಾ ಮೂರು ದಿನಗಳವರೆಗೆ ಯಾವುದೇ ಸಮಸ್ಯೆಗಳಿಲ್ಲದೆ ವರ್ತಿಸುತ್ತಾರೆ. ನಂತರ ಕುಟುಂಬವು ಮೊದಲಿನ ಸ್ಥಿತಿಗೆ ಮರಳುತ್ತದೆ. ಆದ್ದರಿಂದ ನಾವು ಊರಿಗೆ ಮರಳಿದರೂ, ಮನೆಗೆ ಮರಳುವುದಿಲ್ಲ ಎಂದು ಸ್ವಯಂಸೇವಕ ಸುಧೀರ್ ಅವರೊಂದಿಗಿನ ದೂರವಾಣಿ ಸಂಭಾಷಣೆಯಲ್ಲಿ ಹುಡುಗಿಯರು ಹೇಳಿದರು. ನಮಗೆ ಒಂದು ಕೆಲಸ ದೊರೆಯಲು ಸಹಾಯ ಮಾಡುವಂತೆ ಸುಧೀರ್ ನೊಂದಿಗೆ ವಿದ್ಯಾರ್ಥಿನಿಗಳು ಕೇಳಿದ್ದಾರೆ.
ಈ ಮಧ್ಯೆ, ಅವರ ಕುಟುಂಬದೊಂದಿಗೆ ವಿಚಾರಿಸಿದಾಗ , ಮಕ್ಕಳೊಂದಿಗೆ ಯಾವುದೇ ದೊಡ್ಡ ಸಮಸ್ಯೆಗಳಿಲ್ಲ ಎಂದು ಕುಟುಂಬದವರು ಹೇಳಿದ್ದಾರೆ.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ