ಮಲಪ್ಪುರಂ: ಇಲ್ಲಿನ ಥಾನೂರ್ ನಿಂದ ಕಾಣೆಯಾಗಿದ್ದ ವಿದ್ಯಾರ್ಥಿನಿಯರಿಬ್ಬರು ಪತ್ತೆಯಾಗಿದ್ದಾರೆ. ಇವರಿಬ್ಬರು ಬುಧವಾರ ಮಧ್ಯಾಹ್ನ ಶಾಲೆಯಿಂದ ಪರಾರಿಯಾಗಿದ್ದರು. ಪರೀಕ್ಷೆ ಬರೆಯಲು ಶಾಲೆಗೆ ತೆರಳಿದ ಅವರು ಪರೀಕ್ಷೆ ಬರೆಯದೆ ಊರು ಬಿಟ್ಟಿದ್ದರು. ಮುಂಬೈ-ಚೆನ್ನೈ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ವಿದ್ಯಾರ್ಥಿನಿಯರು ಪತ್ತೆಯಾಗಿದ್ದಾರೆ. ಲೋನಾವಾಲದಿಂದ ಬೆಳಗಿನ ಜಾವ 1.45 ಕ್ಕೆ. ಮಕ್ಕಳನ್ನು ಗುರುತಿಸಿದ ರೈಲ್ವೆ ಪೊಲೀಸರು, ಹುಡುಗಿಯರನ್ನು ವಶಕ್ಕೆ ಪಡೆದಿದ್ದಾರೆ.ಥಾನೂರು ಪೊಲೀಸರು ಆಗಮಿಸಿದ ಬಳಿಕ ಅವರನ್ನು ಪೋಲೀಸರಿಗೆ ಒಪ್ಪಿಸಲಾಗುವುದು.
ವಿದ್ಯಾರ್ಥಿನಿಯರನ್ನು ವೈದ್ಯಕೀಯ ಪರೀಕ್ಷೆಗಾಗಿ ಪುಣೆಯ ಸಸೂನ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿಂದ ಅವರನ್ನು ಆರೈಕೆ ಗೃಹಕ್ಕೆ ವರ್ಗಾಯಿಸಲಾಗುತ್ತದೆ. ಇಂದು ಸಂಜೆಯೊಳಗೆ ಮಕ್ಕಳನ್ನು ಕೇರಳಕ್ಕೆ ಕರೆತರಲಾಗುವುದು. ಕಾಣೆಯಾದ ವಿದ್ಯಾರ್ಥಿಗಳು ದೇವದರ್ ಹೈಯರ್ ಸೆಕೆಂಡರಿ ಶಾಲೆಯ ಫಾತಿಮಾ ಶಹಾದಾ ಮತ್ತು ಅಶ್ವತಿ.
ಹುಡುಗಿಯರನ್ನು ಪತ್ತೆಹಚ್ಚುವಲ್ಲಿ ಟೆಲಿಫೋನ್ ಲೊಕೇಶನ್ ನಿರ್ಣಾಯಕವಾಗಿತ್ತು. ರಾತ್ರಿ, ಹುಡುಗಿಯರು ಮುಂಬೈಗೆ ಆಗಮಿಸಿದ್ದಾರೆಂಬ ಮಾಹಿತಿ ಸಿಕ್ಕಿತು. ನಂತರದ ತನಿಖೆಯಲ್ಲಿ ಹುಡುಗಿಯರು ಪತ್ತೆಯಾಗಿದ್ದಾರೆ.
ಮನೆಗೆ ಮರಳುವುದಿಲ್ಲ, ಅಲ್ಲಿ ಸಮಸ್ಯೆಗಳಿವೆ
ನಮಗೆ 18 ವರ್ಷ ತುಂಬಿದೆ, ಮನೆಯವರು ಕಡಿಮೆ ವಯಸ್ಸು ತಿಳಿಸಿದ್ದಾರೆ. ತಮ್ಮ ಕುಟುಂಬದವರ ನಡವಳಿಕೆ ಚೆನ್ನಾಗಿಲ್ಲ,ನಮ್ಮ ಇಚ್ಛೆಯಂತೆ ನಡೆಯಲು ಅವಕಾಶವಿಲ್ಲ, ಯಾರು ಏನೇ ಹೇಳಿದರೂ ತಮ್ಮ ಮನೆಯವರು ಕೇಳುವುದಿಲ್ಲ ಎಂದು ಹುಡುಗಿಯರು ದೂರಿದ್ದಾರೆ. ನಮಗೆ ಹೊಡೆಯುವುದು, ಜಗಳವಾಡುವುದು ರೂಢಿಯಾಗಿದೆ. ಯಾರಾದರೂ ತಿಳಿ ಹೇಳಿದರೆ, ಎರಡು ಅಥವಾ ಮೂರು ದಿನಗಳವರೆಗೆ ಯಾವುದೇ ಸಮಸ್ಯೆಗಳಿಲ್ಲದೆ ವರ್ತಿಸುತ್ತಾರೆ. ನಂತರ ಕುಟುಂಬವು ಮೊದಲಿನ ಸ್ಥಿತಿಗೆ ಮರಳುತ್ತದೆ. ಆದ್ದರಿಂದ ನಾವು ಊರಿಗೆ ಮರಳಿದರೂ, ಮನೆಗೆ ಮರಳುವುದಿಲ್ಲ ಎಂದು ಸ್ವಯಂಸೇವಕ ಸುಧೀರ್ ಅವರೊಂದಿಗಿನ ದೂರವಾಣಿ ಸಂಭಾಷಣೆಯಲ್ಲಿ ಹುಡುಗಿಯರು ಹೇಳಿದರು. ನಮಗೆ ಒಂದು ಕೆಲಸ ದೊರೆಯಲು ಸಹಾಯ ಮಾಡುವಂತೆ ಸುಧೀರ್ ನೊಂದಿಗೆ ವಿದ್ಯಾರ್ಥಿನಿಗಳು ಕೇಳಿದ್ದಾರೆ.
ಈ ಮಧ್ಯೆ, ಅವರ ಕುಟುಂಬದೊಂದಿಗೆ ವಿಚಾರಿಸಿದಾಗ , ಮಕ್ಕಳೊಂದಿಗೆ ಯಾವುದೇ ದೊಡ್ಡ ಸಮಸ್ಯೆಗಳಿಲ್ಲ ಎಂದು ಕುಟುಂಬದವರು ಹೇಳಿದ್ದಾರೆ.
















ಇನ್ನಷ್ಟು ಸುದ್ದಿಗಳು
ಹಜ್ ಯಾತ್ರಿಕರಿಗೆ ಡಿಜಿಟಲ್ ದಾಖಲೆಗಳ ಸೌಲಭ್ಯ- ಪಾಸ್ಪೋರ್ಟ್ಗಳ ಅಗತ್ಯವಿಲ್ಲ
ವೈದ್ಯಕೀಯ-ಇಂಜಿನಿಯರಿಂಗ್ ಕನಸುಗಳಾಚೆಗೆ ನಾಗರಿಕ ಸೇವೆಗಳತ್ತ ಯುವಶಕ್ತಿ ಮುಖ ಮಾಡಲಿ: ಇಕ್ಬಾಲ್ ಬಾಳಿಲ ಕರೆ
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ