ಬೆಂಗಳೂರು: ರಂಝಾನ್ 21 ನೇ ರಾತ್ರಿ(ಮಾರ್ಚ್ 21 ಶುಕ್ರವಾರ) ಬೆಂಗಳೂರಿನ ಹಝ್ರತ್ ಖುದ್ದೂಸ್ ಸಾಹೆಬ್ ಈದ್ಗಾ ಮಿಲ್ಲರ್ಸ್ ರೋಡ್ ಶಿವಾಜಿ ನಗರದಲ್ಲಿ ನಡೆಯುವ ಗ್ರ್ಯಾಂಡ್ ರೂಹಾನಿ ಇಜ್ತಿಮಾದ ಪ್ರಚಾರಾರ್ಥ 60 ಕ್ಕೂ ಮಿಕ್ಕ ಕೇಂದ್ರಗಳಲ್ಲಿ ಮಾರ್ಚ್ 8ಕ್ಕೆ ಗ್ರ್ಯಾಂಡ್ ಇಫ್ತಾರ್ ಸಂಗಮ ನಡೆಯಲಿದೆ.
ಕರ್ನಾಟಕ ಮುಸ್ಲಿಂ ಜಮಾಅತ್,ಎಸ್.ವೈ.ಎಸ್, ಎಸ್.ಎಸ್.ಎಫ್ ಸಂಘಟನೆಗಳ ಶಾಖೆಗಳನ್ನು ಕೇಂದ್ರಿಕರಿಸಿ ಹಾಗೂ ಎಸ್.ಎಮ್.ಎ, ಎಸ್ ಜೆ ಯು, ಎಸ್ ಜೆ ಎಂ ಗಳ ನೇತೃತ್ವದಲ್ಲಿ ಮದ್ರಸ ಮಸೀದಿಗಳನ್ನು ಕೇಂದ್ರೀಕರಿಸಿ ಗ್ರ್ಯಾಂಡ್ ಇಫ್ತಾರ್ ಸಂಗಮ ನಡೆಯಲಿದೆ.ಪ್ರತೀ ಕೇಂದ್ರಗಳಲ್ಲೂ ದಾರ್ಮಿಕ, ಸಾಮಾಜಿಕ ನೇತಾರರು ಭಾಗವಹಿಸಲಿರುವರು.
ಗ್ರ್ಯಾಂಡ್ ರೂಹಾನಿ ಇಜ್ತಿಮಾದ ಪ್ರಚಾರಾರ್ಥ ಪ್ರತೀ ಘಟಕಗಳಲ್ಲೂ ವಿವಿಧ ಕಾರ್ಯಕ್ರಮಗಳು ನಡೆದು ಬರುತ್ತಿದ್ದು,ಪೆಬ್ರವರಿ 28ರಂದು ಎಲ್ಲಾ ಮಸೀದಿಗಳ ಮುಂಭಾಗದಲ್ಲಿ ಜುಮಾ ನಮಾಜಿನ ನಂತರ ಮುಹಬ್ಬತ್ ಕೀ ಶರ್ಬತ್ ಎಂಬ ಹೆಸರಿನಲ್ಲಿ ಸಿಹಿ ಪಾನೀಯಗಳನ್ನು ವಿತರಿಸಲಾಗಿದೆ.ಬೆಂಗಳೂರಿನ ಹತ್ತಿರದ ಜಿಲ್ಲೆಗಳಲ್ಲೂ ಪ್ರಚಾರ ಪ್ರಕ್ರಿಯೆಗಳು ನಡೆಯುತ್ತಿವೆ. ಗ್ರ್ಯಾಂಡ್ ರೂಹಾನಿ ಇಜ್ತಿಮಾಕ್ಕೆ ಸುಲ್ತಾನುಲ್ ಉಲಾಮ ಎ.ಪಿ ಉಸ್ತಾದ್ ನೇತೃತ್ವ ನೀಡಲಿದ್ದಾರೆ.

















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ