ಕುವೈತ್ ಸಿಟಿ: ಬಯೋಮೆಟ್ರಿಕ್ ಪ್ರಕ್ರಿಯೆಯನ್ನು ಪೂರ್ಣಗೊಳಿಸದ ವಲಸಿಗರಿಗೆ ಕುವೈತ್ ಆಂತರಿಕ ಸಚಿವಾಲಯವು ಪ್ರಯಾಣ ನಿಷೇಧವನ್ನು ವಿಧಿಸುತ್ತದೆ.
ಕ್ರಮಗಳನ್ನು ಅನುಸರಿಸಲು ವಿಫಲರಾದವರು ದೇಶದಿಂದ ಪ್ರವೇಶ ಮತ್ತು ನಿರ್ಗಮನದ ಮೇಲೆ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ. ಬಯೋಮೆಟ್ರಿಕ್ ನೋಂದಣಿಯನ್ನು ಪೂರ್ಣಗೊಳಿಸದವರು ಸರ್ಕಾರ ಮತ್ತು ಬ್ಯಾಂಕಿಂಗ್ ವ್ಯವಹಾರಗಳ ಮೇಲೆ ನಿರ್ಬಂಧಗಳನ್ನು ಎದುರಿಸಲಿದ್ದಾರೆ. ಬಯೋಮೆಟ್ರಿಕ್ ನೋಂದಣಿ ಪೂರ್ಣಗೊಳ್ಳುವವರೆಗೆ ನಿರ್ಬಂಧಗಳು ಮುಂದುವರಿಯಲಿವೆ ಎಂದು ಗೃಹ ಸಚಿವಾಲಯ ತಿಳಿಸಿದೆ.
35 ಲಕ್ಷಕ್ಕೂ ಹೆಚ್ಚು ನಾಗರಿಕರು ಮತ್ತು ವಲಸಿಗರು ಈಗಾಗಲೇ ತಮ್ಮ ಬಯೋಮೆಟ್ರಿಕ್ಗಳನ್ನು ಪೂರ್ಣಗೊಳಿಸಿದ್ದಾರೆ ಎಂದು ಕ್ರಿಮಿನಲ್ ಎವಿಡೆನ್ಸ್ ಜನರಲ್ ವಿಭಾಗದ ಫಸ್ಟ್ ಲೆಫ್ಟಿನೆಂಟ್ ತಲಾಲ್ ಅಲ್ ಖಾಲಿದಿ ಹೇಳಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸುಮಾರು 956,000 ಸ್ವದೇಶಿ ನಾಗರಿಕರು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು. ಪ್ರಸ್ತುತ ಬಯೋಮೆಟ್ರಿಕ್ಸ್ಗಾಗಿ 16,000 ಸ್ವದೇಶಿಗಳು ಉಳಿದಿದ್ದಾರೆ.
ಅನಿವಾಸಿಗಳ ಪೈಕಿ 25 ಲಕ್ಷ ಮಂದಿ ಪ್ರಕ್ರಿಯೆ ಪೂರ್ಣಗೊಳಿಸಿದ್ದು, 1,81,718 ಮಂದಿ ಬಾಕಿ ಉಳಿದಿದ್ದಾರೆ. 82,000 ಬಿದೂನಿಗಳು ತಮ್ಮ ಬಯೋಮೆಟ್ರಿಕ್ ನೋಂದಣಿಯನ್ನು ಇನ್ನೂ ಪೂರ್ಣಗೊಳಿಸಬೇಕಾಗಿದೆ. ಅಂತಹ ವ್ಯಕ್ತಿಗಳನ್ನು ಜನವರಿ 1 ರಿಂದ ಅಧಿಕೃತ ಹಣಕಾಸು ಸಂಸ್ಥೆಗಳಾದ್ಯಂತ ವಹಿವಾಟುಗಳಿಂದ ನಿರ್ಬಂಧಿಸಲಾಗಿದೆ. ಬಯೋಮೆಟ್ರಿಕ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅನಿವಾಸಿಗಳಿಗೆ ಡಿಸೆಂಬರ್ 31 ಕೊನೇ ದಿನವಾಗಿತ್ತು. ಸ್ಥಳೀಯರ ಗಡುವು ಸೆಪ್ಟೆಂಬರ್ನಲ್ಲಿ ಕೊನೆಗೊಂಡಿತ್ತು.
ಪ್ರಕ್ರಿಯೆಯನ್ನು ಪೂರ್ಣಗೊಳಿಸದವರಿಗಾಗಿ ಕ್ರಿಮಿನಲ್ ಎವಿಡೆನ್ಸ್ ಜನರಲ್ ವಿಭಾಗವು ಎಂಟು ಕೇಂದ್ರಗಳನ್ನು ತೆರೆದಿದೆ. ಕೇಂದ್ರಗಳು ದಿನಕ್ಕೆ 10,000 ಅಪಾಯಿಂಟ್ಮೆಂಟ್ ಗಳನ್ನು ನಿರ್ವಹಿಸಬಹುದು. ಪ್ರಕ್ರಿಯೆಯನ್ನು ಮೂರು ನಿಮಿಷಗಳಲ್ಲಿ ಪೂರ್ಣಗೊಳಿಸಬಹುದಾಗಿದೆ. ಸಹ್ಲ್ ಅಪ್ಲಿಕೇಶನ್ ಅಥವಾ ಮೆಟಾ ಪೋರ್ಟಲ್ ಮೂಲಕ ಪೂರ್ವ ಅಪಾಯಿಂಟ್ಮೆಂಟ್ ಮೂಲಕ ಕೇಂದ್ರಗಳನ್ನು ತಲುಪಬೇಕು.
















ಇನ್ನಷ್ಟು ಸುದ್ದಿಗಳು
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ