ಕುವೈತ್ ಸಿಟಿ: ಬಯೋಮೆಟ್ರಿಕ್ ಪ್ರಕ್ರಿಯೆಯನ್ನು ಪೂರ್ಣಗೊಳಿಸದ ವಲಸಿಗರಿಗೆ ಕುವೈತ್ ಆಂತರಿಕ ಸಚಿವಾಲಯವು ಪ್ರಯಾಣ ನಿಷೇಧವನ್ನು ವಿಧಿಸುತ್ತದೆ.
ಕ್ರಮಗಳನ್ನು ಅನುಸರಿಸಲು ವಿಫಲರಾದವರು ದೇಶದಿಂದ ಪ್ರವೇಶ ಮತ್ತು ನಿರ್ಗಮನದ ಮೇಲೆ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ. ಬಯೋಮೆಟ್ರಿಕ್ ನೋಂದಣಿಯನ್ನು ಪೂರ್ಣಗೊಳಿಸದವರು ಸರ್ಕಾರ ಮತ್ತು ಬ್ಯಾಂಕಿಂಗ್ ವ್ಯವಹಾರಗಳ ಮೇಲೆ ನಿರ್ಬಂಧಗಳನ್ನು ಎದುರಿಸಲಿದ್ದಾರೆ. ಬಯೋಮೆಟ್ರಿಕ್ ನೋಂದಣಿ ಪೂರ್ಣಗೊಳ್ಳುವವರೆಗೆ ನಿರ್ಬಂಧಗಳು ಮುಂದುವರಿಯಲಿವೆ ಎಂದು ಗೃಹ ಸಚಿವಾಲಯ ತಿಳಿಸಿದೆ.
35 ಲಕ್ಷಕ್ಕೂ ಹೆಚ್ಚು ನಾಗರಿಕರು ಮತ್ತು ವಲಸಿಗರು ಈಗಾಗಲೇ ತಮ್ಮ ಬಯೋಮೆಟ್ರಿಕ್ಗಳನ್ನು ಪೂರ್ಣಗೊಳಿಸಿದ್ದಾರೆ ಎಂದು ಕ್ರಿಮಿನಲ್ ಎವಿಡೆನ್ಸ್ ಜನರಲ್ ವಿಭಾಗದ ಫಸ್ಟ್ ಲೆಫ್ಟಿನೆಂಟ್ ತಲಾಲ್ ಅಲ್ ಖಾಲಿದಿ ಹೇಳಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸುಮಾರು 956,000 ಸ್ವದೇಶಿ ನಾಗರಿಕರು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು. ಪ್ರಸ್ತುತ ಬಯೋಮೆಟ್ರಿಕ್ಸ್ಗಾಗಿ 16,000 ಸ್ವದೇಶಿಗಳು ಉಳಿದಿದ್ದಾರೆ.
ಅನಿವಾಸಿಗಳ ಪೈಕಿ 25 ಲಕ್ಷ ಮಂದಿ ಪ್ರಕ್ರಿಯೆ ಪೂರ್ಣಗೊಳಿಸಿದ್ದು, 1,81,718 ಮಂದಿ ಬಾಕಿ ಉಳಿದಿದ್ದಾರೆ. 82,000 ಬಿದೂನಿಗಳು ತಮ್ಮ ಬಯೋಮೆಟ್ರಿಕ್ ನೋಂದಣಿಯನ್ನು ಇನ್ನೂ ಪೂರ್ಣಗೊಳಿಸಬೇಕಾಗಿದೆ. ಅಂತಹ ವ್ಯಕ್ತಿಗಳನ್ನು ಜನವರಿ 1 ರಿಂದ ಅಧಿಕೃತ ಹಣಕಾಸು ಸಂಸ್ಥೆಗಳಾದ್ಯಂತ ವಹಿವಾಟುಗಳಿಂದ ನಿರ್ಬಂಧಿಸಲಾಗಿದೆ. ಬಯೋಮೆಟ್ರಿಕ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅನಿವಾಸಿಗಳಿಗೆ ಡಿಸೆಂಬರ್ 31 ಕೊನೇ ದಿನವಾಗಿತ್ತು. ಸ್ಥಳೀಯರ ಗಡುವು ಸೆಪ್ಟೆಂಬರ್ನಲ್ಲಿ ಕೊನೆಗೊಂಡಿತ್ತು.
ಪ್ರಕ್ರಿಯೆಯನ್ನು ಪೂರ್ಣಗೊಳಿಸದವರಿಗಾಗಿ ಕ್ರಿಮಿನಲ್ ಎವಿಡೆನ್ಸ್ ಜನರಲ್ ವಿಭಾಗವು ಎಂಟು ಕೇಂದ್ರಗಳನ್ನು ತೆರೆದಿದೆ. ಕೇಂದ್ರಗಳು ದಿನಕ್ಕೆ 10,000 ಅಪಾಯಿಂಟ್ಮೆಂಟ್ ಗಳನ್ನು ನಿರ್ವಹಿಸಬಹುದು. ಪ್ರಕ್ರಿಯೆಯನ್ನು ಮೂರು ನಿಮಿಷಗಳಲ್ಲಿ ಪೂರ್ಣಗೊಳಿಸಬಹುದಾಗಿದೆ. ಸಹ್ಲ್ ಅಪ್ಲಿಕೇಶನ್ ಅಥವಾ ಮೆಟಾ ಪೋರ್ಟಲ್ ಮೂಲಕ ಪೂರ್ವ ಅಪಾಯಿಂಟ್ಮೆಂಟ್ ಮೂಲಕ ಕೇಂದ್ರಗಳನ್ನು ತಲುಪಬೇಕು.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ