ಅಲ್ ಹಸ್ಸಾ: ಸೌದಿ ಅರೇಬಿಯಾದ ಅಲ್ಹಸ್ಸಾದಲ್ಲಿ ಮೊಬೈಲ್ ಫೋನ್ ಚಾರ್ಜರ್ ಸ್ಫೋಟದ ಅಪಘಾತದಲ್ಲಿ ಮೃತಪಟ್ಟ ಆರು ಜನರ ಮೃತದೇಹಗಳನ್ನು ದಫನ ಮಾಡಲಾಯಿತು. ಹುಫೂಫ್ನ ಅಲ್ನಾಥಲ್ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ಅವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಮೂವರು ಪುರುಷರು ಮತ್ತು ಮೂವರು ಮಹಿಳೆಯರು ಸೇರಿ ಆರು ಜನರು ಮೃತಪಟ್ಟಿದ್ದರು.
ಮೃತರು ಆಲ್ಜಿಬ್ರಾನ್ ಕುಟುಂಬದ ಸದಸ್ಯರು. ಅಹ್ಮದ್ ಹುಸೇನ್ ಅಲ್ಜಿಬ್ರಾನ್, ಅಬ್ದುಲ್ ಇಲಾಹ್ ಹುಸೇನ್ ಅಲ್ಜಿಬ್ರಾನ್, ಮರ್ಯಮ್ ಹುಸೇನ್ ಅಲ್ಜಿಬ್ರಾನ್, ಇಮಾನ್ ಹುಸೇನ್ ಅಲ್ಜಿಬ್ರಾನ್, ಲತೀಫಾ ಹುಸೇನ್ ಅಲ್ಜಿಬ್ರಾನ್ ಮತ್ತು ಅವರ ಸೋದರಳಿಯ ಹಸನ್ ಅಲಿ ಅಲ್ಜಿಬ್ರಾನ್ ನಿಧನರಾದರು. ಐವರು ಒಡಹುಟ್ಟಿದವರು ಮತ್ತು ಒಬ್ಬರು ಅವರ ಸೋದರಳಿಯ. ಮೊಬೈಲ್ ಚಾರ್ಜರ್ ಸ್ಫೋಟದಿಂದ ಉಂಟಾದ ಬೆಂಕಿಯ ಹೊಗೆಯಿಂದ ಉಸಿರುಕಟ್ಟಿ ಅವರು ಮೃತಪಟ್ಟಿದ್ದಾರೆ.
ಮೃತರು ಮನೆಯಲ್ಲಿ ಮಲಗಿದ್ದರು. ಚಾರ್ಜ್ ನಲ್ಲಿರಿಸಿದ್ದ ಮೊಬೈಲ್ ಫೋನ್ ಚಾರ್ಜರ್ ಸ್ಫೋಟಗೊಂಡಿದ್ದು, ಕುಳಿತುಕೊಳ್ಳುವ ಕೋಣೆಯಲ್ಲಿದ್ದ ಸೋಫಾ ಸೆಟ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಬೆಂಕಿ ಬೇಗನೆ ಮನೆಗೆ ವ್ಯಾಪಿಸಿತು.
ಭಾರೀ ಜನಸಮೂಹದ ಸಮ್ಮುಖದಲ್ಲಿ, ಹುಫೂಫ್ ನ ಅಲ್-ಖುದೂದ್ ಖಬರ್ ಸ್ಥಾನದಲ್ಲಿ ಆರು ಮಂದಿಯ ಜನಾಝವನ್ನು ದಫನ ಮಾಡಲಾಯಿತು.

ತಮ್ಮ ಪ್ರೀತಿಯ ಮಕ್ಕಳನ್ನು ಕಳೆದುಕೊಂಡ ಆಘಾತ ಮತ್ತು ನೋವಿನಲ್ಲಿದೆ ಕುಟುಂಬ ಎಂದು ಅಲ್ ಗಿಬ್ರಾನ್ ಕುಟುಂಬದ ಹಿರಿಯ ಸದಸ್ಯ ಶೈಖ್ ತಾಹಿರ್ ಅಲ್-ಅಹ್ಮದ್ ಹೇಳಿದರು. ಪ್ರೀತಿಪಾತ್ರರ ನಷ್ಟದಿಂದ ನಾವು ಆಘಾತಕ್ಕೊಳಗಾಗಿದ್ದೇವೆ ಮತ್ತು ಈ ಅವಘಡವು ನಮಗೆಲ್ಲರಿಗೂ ಅತ್ಯಂತ ದುಃಖವನ್ನು ತಂದಿದೆ, ಆದರೆ ಅವರು ದೇವರ ಕರುಣೆಯತ್ತ ಮರಳಿದ್ದಾರೆಂದು ನಾವು ನಂಬುತ್ತೇವೆ ಎಂದು ಅವರು ಹೇಳಿದರು.
















ಇನ್ನಷ್ಟು ಸುದ್ದಿಗಳು
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ