janadhvani

Kannada Online News Paper

ಸಅದಿಯ್ಯ 55 ನೇ ವಾರ್ಷಿಕ: ದ. ಕ ಜಿಲ್ಲಾ ಲೀಡರ್ಸ್ ಮೀಟ್ ಹಾಗೂ ಪ್ರಚಾರ ಸಮಿತಿ ರಚನೆ.

ಮಂಗಳೂರು: ಪ್ರತಿಷ್ಠಿತ ಧಾರ್ಮಿಕ ಲೌಕಿಕ ಸಮನ್ವಯ ವಿದ್ಯಾಸಂಸ್ಥೆ ಜಾಮಿಯಾ ಸಅದಿಯ್ಯ ಅರಬಿಯದ 55 ವಾರ್ಷಿಕ ಮಹಾ ಸಮ್ಮೇಳನ 2024 ನವೆಂಬರ್ 22 ,23,24ರಂದು ಕಾಸರಗೋಡು ಸಅದಿಯ್ಯ ದಲ್ಲಿ ನಡೆಯಲಿದೆ.

ಇದರ ಯಶಸ್ವಿಗಾಗಿ ಇಂದು ಮಂಗಳೂರಿನ ಪಡೀಲ್ ನಲ್ಲಿರುವ ಇಲ್ಮ್ ಸೆಂಟರ್ ನಲ್ಲಿ ದ.ಕ. ವೆಸ್ಟ್ ಜಿಲ್ಲೆಯ ಸುನ್ನೀ ಸಂಘಟನೆಗಳ
ಲೀಡರ್ಸ್ ಮೀಟ್ ಹಾಗೂ ಪ್ರಚಾರ ಸಮಿತಿ ರಚನಾ ಸಭೆ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಎಂಪಿಎಂ ಅಶ್ರಫ್ ಸಅದಿ ಮಲ್ಲೂರು ವಹಿಸಿದರು.
ಎಸ್ ವೈ ಎಸ್ ಜಿಲ್ಲಾಧ್ಯಕ್ಷ ಇಸ್ಹಾಕ್ ಝುಹ್ರಿ ಕಾನಕೆರೆ ಉದ್ಘಾಟಿಸಿದರು.
ಸಅದಿಯ ಸಮ್ಮೇಳನ ಪ್ಲಾನಿಂಗ್ ಬೋರ್ಡ್ ಚೇರ್ಮ್ಯಾನ್ ಹಾಫಿಳ್ ಯಅಕೂಬ್ ಸಅದಿ ನಾವೂರು ವಿಷಯ ಮಂಡಿಸಿದರು.

ಎಸ್ ಎಂ ಎ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ರಝಾಕ್ ಸಖಾಫಿ, ಎಸ್ ಜೆ ಎಂ ನಾಯಕ ಇಸ್ಮಾಯಿಲ್ ಸಅದಿ ಉರುಮನೆ, ಕರ್ನಾಟಕ ಸ್ವಾಗತ ಸಮಿತಿಯ ಜನರಲ್ ಕನ್ವೀನರ್ ಅಬ್ದುಲ್ ಜಲೀಲ್ ಬ್ರೈಟ್, ಸಅದೀಸ್ ರಾಜ್ಯಾಧ್ಯಕ್ಷ ಉಸ್ಮಾನ್ ಸಅದಿ ಪಟ್ಟೋರಿ ಮುಂತಾದವರು ಮಾತನಾಡಿದರು.

ಜಿಲ್ಲಾ ಪ್ರಚಾರ ಸಮಿತಿ ರಚಿಸಲಾಯ್ತು.
ಚಯರ್ಮ್ಯಾನ್ ಇಬ್ರಾಹಿಂ ಖಲೀಲ್ ಮಾಲಿಕಿ ಬೋಳಂತೂರು,ಜನರಲ್ ಕನ್ವೀನರ್
ಅಬ್ದುಲ್ ಅಝೀಝ್ ಸಅದಿ ಅಗ್ರಹಾರ, ಕೋಶಾಧಿಕಾರಿ,ಅನ್ವರ್ ಹಾಜಿ ಗೂಡಿನ ಬಳಿ
ವೈಸ್ ಚೇರ್ಮನ್ ಗಳಾಗಿ ಸಿದ್ದೀಕ್ ಸಖಾಫಿ ಮೂಳೂರು, ಬಾವುಚ್ಚ ಮಂಜನಾಡಿ, ಶಾಫಿ ಮದನಿ ಕರಾಯ, ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ
ಕನ್ವೀನರ್ ಗಳಾಗಿ ಅಬ್ದುಲ್ ರಜಾಕ್ ಸಖಾಫಿ ಕೊಳಕ್ಕೆ, ಮನ್ಸೂರ್ ಹಿಮಮಿ ಮರಿಕ್ಕಳ, ಇಕ್ಬಾಲ್ ಕೃಷ್ಣಾಪುರ, ಫಾರೂಕ್ ಶೇಡಿಗುರಿ, ಇರ್ಷಾದ್ ಗೂಡಿನಬಳಿ ಸದಸ್ಯರುಗಳಾಗಿ ಮೆಹಬೂಬ್ ಸಖಾಫಿ ಕಿನ್ಯ, ಕಾಸಿಂ ಲತೀಫಿ ಮಂಜನಾಡಿ, ಅಬ್ದುಲ್ ರಹಿಮಾನ್ ಸಅದಿ ಕಂಕನಾಡಿ, ಮೊಯ್ದಿನ್ ಅಲ್ ಸಫರ್, ಮನ್ಸೂರ್ ಸಅದಿ ಬಜಪೆ, ಅಹ್ಮದ್ ಬಶೀರ್ ಪಂಜಿಮೊಗೇರು, ಮುಸ್ತಫಾ ಸಅದಿ ಹರೇಕಳ, ಅಬ್ದುಲ್ ಅಝೀಝ್ ಬಿಕರ್ನಕಟ್ಟೆ, ಅಶ್ರಫ್ ಸಅದಿ, ಬದ್ರುದ್ದೀನ್ ಅಝ್ಹರಿ ಕೈಕಂಬ, ಹುಸೇನ್ ಸಅದಿ ಕುಕ್ಕಿಲ,ಅಬ್ದುಲ್ ಹಮೀದ್ ಸುರತ್ಕಲ್, ಇಸ್ಮಾಯಿಲ್ ಮಾಸ್ಟರ್ ಮಂಜನಾಡಿ, ಉಮರ್ ಸಅದಿ ನಡುಪದವು, ಅದ್ದು ಹಾಜಿ ಕೃಷ್ಣಾಪುರ, ಅಜ್ಮಲ್ ಕಾವೂರು, ಅಲೀ ಸಅದಿ ಮುಂತಾದವರನ್ನು ಆಯ್ಕೆ ಮಾಡಲಾಯಿತು. ಮನ್ಸೂರ್ ಸಅದಿ ಬಜಪೆ ಸ್ವಾಗತಿಸಿ ಅಝೀಝ್ ಸಅದಿ ವಂದಿಸಿದರು.

error: Content is protected !! Not allowed copy content from janadhvani.com