ಜಿದ್ದಾ: ಜಿದ್ದಾ ವಿಮಾನ ನಿಲ್ದಾಣದಿಂದ ಉಮ್ರಾ ಯಾತ್ರಾರ್ಥಿಗಳಿಗೆ ಉಚಿತ ಸಾರಿಗೆ ಸೇವೆ ಒದಗಿಸುವ ನೆಪದಲ್ಲಿ ವಂಚನೆ. ಸರಕಾರಿ ಸೇವೆ ಎಂದು ನಂಬಿಸಿ ಪಾಸ್ ಪೋರ್ಟ್, ದಾಖಲೆಗಳನ್ನು ಕೈವಶಪಡಿಸಿ ವಂಚಿಸುತ್ತಿದ್ದಾರೆ. ಭಾರತೀಯರು ಸೇರಿದಂತೆ ಹಲವು ಯಾತ್ರಾರ್ಥಿಗಳು ವಂಚನೆಗೊಳಗಾಗಿದ್ದಾರೆ.
ಒಂಟಿಯಾಗಿ ಬರುವ ಉಮ್ರಾ ಯಾತ್ರಿಕರನ್ನು ಈ ಗುಂಪು ಬಲೆಗೆ ಬೀಳಿಸುತ್ತದೆ. ಯಾತ್ರಿಕರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ, ಜಿದ್ದಾ ಮತ್ತು ಮಕ್ಕಾದಲ್ಲಿನ ಪ್ರಮುಖ ಸಾರಿಗೆ ಕಂಪನಿಯ ವೇಷಭೂಷಣದಲ್ಲಿ ತಂಡವು ಉಚಿತ ಕೊಡುಗೆಯೊಂದಿಗೆ ಅವರನ್ನು ಸಂಪರ್ಕಿಸುತ್ತದೆ. ಪಾಸ್ಪೋರ್ಟ್ ಮತ್ತು ದಾಖಲೆಗಳನ್ನು ಪಡೆದು ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುತ್ತಾರೆ. ಈ ಬಗ್ಗೆ ಪ್ರಶ್ನಿಸಿದರೆ, ಸರಕಾರದ ಉಚಿತ ಸೇವೆ ಎಂಬ ಕಾರಣಕ್ಕೆ ಈ ರೀತಿ ದಾಖಲಿಸಲಾಗಿದೆ ಎಂದು ಉತ್ತರಿಸುತ್ತಾರೆ.
ಸೇವೆಯನ್ನು ಬಳಸಿಕೊಂಡು ಉಮ್ರಾ ನಿರ್ವಹಿಸಿದ ನಂತರ ಅವರು ಮಕ್ಕಾ ನಗರವನ್ನು ತೊರೆದಾಗ, ಅವರ ದೇಶದಿಂದ ವೀಸಾವನ್ನು ನಿಗದಿಪಡಿಸಿದ ಟ್ರಾವೆಲ್ ಮಾಲೀಕರಿಂದ, ತಮ್ಮ ಪಾಸ್ಪೋರ್ಟ್ಗೆ ಲಗತ್ತಿಸಲಾದ ವೀಸಾದ ಮೇಲೆ ಹೆಚ್ಚುವರಿ ಶುಲ್ಕ ಸೇರಿಸಲಾಗಿದೆ (ಸುಮಾರು 3000 ರಿಯಾಲ್) ಎಂಬ ಕರೆ ಬಂದಿದೆ. ಈಗ ಬಿಲ್ ಪಾವತಿಸಲು ಸಾಧ್ಯವಿಲ್ಲ, ಕಾನೂನು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಕರೆ ಮಾಡಿದ ಏಜೆಂಟರಿಗೆ ತಿಳಿಸಿರುವುದಾಗಿ ವಂಚನೆಗೊಳಗಾದ ಯಾತ್ರಿಕರೊಬ್ಬರು ತಿಳಿಸಿದ್ದಾರೆ. ಈ ವಂಚನೆಯ ಬಗ್ಗೆ ಹಜ್ ಉಮ್ರಾ ಸಚಿವಾಲಯಕ್ಕೆ ದೂರು ನೀಡುವುದಾಗಿ ಅವರು ಹೇಳಿದರು.
ಪ್ರಸ್ತುತ ವಿಮಾನ ನಿಲ್ದಾಣಗಳು ಅಥವಾ ಬಸ್ ನಿಲ್ದಾಣಗಳಿಂದ ಯಾವುದೇ ಉಚಿತ ಸಾರಿಗೆ ಸೇವೆಗಳು ಲಭ್ಯವಿಲ್ಲ. ಇದನ್ನು ತಿಳಿಯದ ಯಾತ್ರಾರ್ಥಿಗಳು ಮೋಸಗಾರರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ.
















ಇನ್ನಷ್ಟು ಸುದ್ದಿಗಳು
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ