janadhvani

Kannada Online News Paper

ಮಸ್ಕತ್ ನಿಂದ ಮುಂಬೈಗೆ ತೆರಳುತ್ತಿದ್ದ ವಿಮಾನದಲ್ಲಿ ಹೊಗೆ- ಬೆಂಗಳೂರಿನ ಯುವಕನ ಬಂಧನ

ಬಂಧಿತ ಯುವಕ ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡಿದ್ದಾನೆ. ಶೌಚಾಲಯದಿಂದ ಹೊರ ಬಂದ ಕೂಡಲೇ ವಿಮಾನ ಸಿಬ್ಬಂದಿ ಯುವಕನನ್ನು ಹಿಡಿದು ಸಹರ್ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಸ್ಕತ್ : ಮಸ್ಕತ್ ನಿಂದ ಮುಂಬೈಗೆ ತೆರಳುತ್ತಿದ್ದ ವಿಮಾನದಲ್ಲಿ ಯುವಕನೊಬ್ಬ ಧೂಮಪಾನ ಮಾಡಿದ್ದು, ಸಿಕ್ಕಿಬಿದ್ದಿದ್ದಾನೆ. ಬೆಂಗಳೂರು ಮೂಲದ 27 ವರ್ಷದ ಕಬೀರ್ ಸೈಫ್ ರಿಝ್ವಿ ಎಂಬಾತನನ್ನು ಸಹರ್ ಪೊಲೀಸರು ಬಂಧಿಸಿದ್ದರೆ. ಮಸ್ಕತ್ ನಿಂದ ಮುಂಬೈಗೆ ತೆರಳುತ್ತಿದ್ದ ಓಮಾನ್ ಏರ್ ವಿಮಾನದಲ್ಲಿ ಈ ಘಟನೆ ನಡೆದಿದೆ.

ಬಂಧಿತ ಯುವಕ ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡಿದ್ದಾನೆ. ಶೌಚಾಲಯದಿಂದ ಹೊರ ಬಂದ ಕೂಡಲೇ ವಿಮಾನ ಸಿಬ್ಬಂದಿ ಯುವಕನನ್ನು ಹಿಡಿದು ಸಹರ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಆತನಿಂದ ಲೈಟರ್, ಸಿಗರೇಟ್ ಪ್ಯಾಕೆಟ್ ಹಾಗೂ ಹಾನಿಗೊಳಗಾದ ಆಮ್ಲಜನಕ ಕಿಟ್ ವಶಪಡಿಸಿಕೊಳ್ಳಲಾಗಿದೆ. ಆತನನ್ನು ಐಪಿಸಿ ಸೆಕ್ಷನ್ 336ರ ಅಡಿಯಲ್ಲಿ ಬಂಧಿಸಲಾಗಿದೆ.ಇದು ಇತರರ ಜೀವಕ್ಕೆ ಅಪಾಯವನ್ನುಂಟುಮಾಡಲು ಯತ್ನಿಸಿರುವ ಅಪರಾಧವಾಗಿದೆ .

ಈ ವರ್ಷ ಇಲ್ಲಿಯವರೆಗೆ, ಧೂಮಪಾನಕ್ಕೆ ಸಂಬಂಧಿಸಿದ 13 ಪ್ರಕರಣಗಳು ದಾಖಲಾಗಿವೆ. ಈ ವರ್ಷದ ಜುಲೈನಲ್ಲಿ ಜಿದ್ದಾ-ಮುಂಬೈ ವಿಮಾನದಲ್ಲಿ ಧೂಮಪಾನ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಸಿಕ್ಕಿಬಿದ್ದಿದ್ದರು. ವಿಮಾನದಲ್ಲಿ ಧೂಮಪಾನ ಮಾಡುವುದು ಸಹ ಪ್ರಯಾಣಿಕರ ಜೀವಕ್ಕೆ ಅಪಾಯ ಹಾಗೂ ವಿಮಾನಕ್ಕೆ ಬೆಂಕಿ ಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ ಎಂಬ ಕಾರಣಕ್ಕೆ ಕಠಿಣ ನಿಯಂತ್ರಣ ಏರ್ಪಡಿಸಲಾಗುತ್ತದೆ.

error: Content is protected !! Not allowed copy content from janadhvani.com