janadhvani

Kannada Online News Paper

ಸೌದಿ: ಮರಣದಂಡನೆಗೆ ಕೆಲವೇ ಕ್ಷಣಗಳು ಬಾಕಿ- ಮೃತ ಯುವಕನ ತಂದೆಯಿಂದ ಕ್ಷಮಾದಾನ

ಸೃಷ್ಟಿಕರ್ತನು ತನ್ನ ಮನಸ್ಸಿಗೆ ಶಾಂತಿ ಮತ್ತು ಅನುಗ್ರಹವನ್ನು ಸುರಿದಿದ್ದಾನೆ ಮತ್ತು ದೇವ ಕೃಪೆ ಆಕಾಂಕ್ಷೆಯಿಂದ ಆರೋಪಿಗೆ ಕ್ಷಮಿಸಲು ಸಿದ್ಧನಾಗಿದ್ದೇನೆ ಎಂದು ಅವರು ಪ್ರತಿಕ್ರಿಯಿಸಿದರು.

ತಬೂಕ್: ಮರಣದಂಡನೆಗೆ ಕೆಲವೇ ಕ್ಷಣಗಳ ಮೊದಲು ವಧಿಸಲ್ಪಟ್ಟ ಸೌದಿ ಯುವಕನ ತಂದೆ ಆರೋಪಿಗೆ ಕ್ಷಮಿಸಿದ ಘಟನೆ ತಬೂಕ್ ನಲ್ಲಿ ನಡೆದಿದೆ. ಹತ್ಯೆಯಾದ ಸೌದಿ ಯುವಕನ ತಂದೆ ಮುತೈರ್ ಅಲ್ದಯೂಫಿ ಅಲ್-ಅತವಿ ಅಪರಾಧಿಗೆ ಕ್ಷಮಾದಾನ ನೀಡಿದ್ದಾರೆ.

ಆರೋಪಿಗೆ ಕ್ಷಮಾದಾನ ನೀಡುವುದಾದರೆ,ದೊಡ್ಡ ಮೊತ್ತದ ದಯಾಧನ ಪಾವತಿಸುವುದಾಗಿ ಆರೋಪಿಯ ಕುಟುಂಬದ ಪ್ರಸ್ತಾಪಗಳನ್ನು ಮತ್ತು ಆರೋಪಿಗಳಿಗೆ ಕ್ಷಮಾದಾನ ನೀಡಲು ನಡೆಸಿದ ಮಧ್ಯಸ್ಥಿಕೆಯ ಪ್ರಯತ್ನಗಳನ್ನು ಮುತೈರ್ ಅಲ್-ಅತವಿ ತಿರಸ್ಕರಿಸಿದ್ದರು. ಆದರೆ ಮರಣದಂಡನೆಗೆ ಕೆಲವೇ ಕ್ಷಣಗಳ ಮೊದಲು ಅವರು ತನ್ನ ನಿಲುವನ್ನು ಬದಲಾಯಿಸಿದರು.

ಮರಣದಂಡನೆಗೆ ಮುನ್ನ, ಸೃಷ್ಟಿಕರ್ತನು ತನ್ನ ಮನಸ್ಸಿಗೆ ಶಾಂತಿ ಮತ್ತು ಅನುಗ್ರಹವನ್ನು ಸುರಿದಿದ್ದಾನೆ ಮತ್ತು ದೇವ ಕೃಪೆ ಆಕಾಂಕ್ಷೆಯಿಂದ ಆರೋಪಿಗೆ ಕ್ಷಮಿಸಲು ಸಿದ್ಧನಾಗಿದ್ದೇನೆ ಎಂದು ಅವರು ಪ್ರತಿಕ್ರಿಯಿಸಿದರು.ಐದು ವರ್ಷಗಳ ಹಿಂದೆ ತಬೂಕ್‌ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಘಟನೆ ನಡೆದಿತ್ತು.ಆರೋಪಿ ಮತ್ತು ಮೃತ ಯುವಕನ ನಡುವಿನ ಸಂಘರ್ಷದಲ್ಲಿ ಮುತೈರ್ ಅಲ್-ಅತವಿಯ ಮಗ ಕೊಲ್ಲಲ್ಪಟ್ಟಿದ್ದರು.

error: Content is protected !! Not allowed copy content from janadhvani.com