ಕೋಝಿಕ್ಕೋಡ್ | ಸೌದಿ ಅರೇಬಿಯಾಕೆ ಕುಟುಂಬ, ವ್ಯಾಪಾರ, ವಿದ್ಯಾರ್ಥಿ, ಮತ್ತು ಭೇಟಿ ಸಹಿತವಿರುವ ವೀಸಾಗಳಿಗೆ ವಿಎಫ್ಎಸ್ ಕೇಂದ್ರಗಳ ಮೂಲಕ ಮಾತ್ರ ಸ್ಟಾಂಪಿಂಗ್ ಪ್ರಕ್ರಿಯೆಯನ್ನು ಆರಂಭಿಸಿರುವುದರಿಂದ ಉಂಟಾಗಿರುವ ತೊಂದರೆಯನ್ನು ನಿವಾರಿಸುವಂತೆ ಕೋರಿ, ಭಾರತೀಯ ಗ್ರಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಅವರು ಸೌದಿ ಪ್ರಧಾನ ಮಂತ್ರಿ ಮತ್ತು ಕ್ರೌನ್ ಪ್ರಿನ್ಸ್ ಮುಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಪತ್ರ ಬರೆದಿದ್ದಾರೆ.
ಭಾರತೀಯ ಸೌದಿ ರಾಯಭಾರಿ ಮೂಲಕ ಕಳುಹಿಸಲಾದ ಪತ್ರದಲ್ಲಿ, ವೀಸಾ ಸ್ಟಾಂಪಿಂಗ್ ಪ್ರಕ್ರಿಯೆಯು ವಲಸಿಗ-ಸ್ನೇಹಿ ಆಗಿರಬೇಕು ಮತ್ತು VFS ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸ ಬೇಕೆಂದು ಕಾಂತಪುರಂ ಉಸ್ತಾದರು ಪತ್ರದಲ್ಲಿ ಆಗ್ರಹಿಸಿದ್ದಾರೆ.
ಕಳೆದ ತಿಂಗಳಿನಿಂದ ಸೌದಿ ಅರೇಬಿಯಾದ ವೀಸಾ ಪ್ರಕ್ರಿಯೆಯಲ್ಲಿ ಬದಲಾವಣೆಯಾಗಿದೆ. ಟ್ರಾವೆಲ್ ಏಜೆನ್ಸಿಗಳ ಮೂಲಕ ಮಾಡಲಾಗುತ್ತಿದ್ದ ಸ್ಟಾಂಪಿಂಗ್ ಕಾರ್ಯವಿಧಾನಗಳು ಈಗ VFS ಕೇಂದ್ರಗಳ ಮೂಲಕ ಮಾತ್ರ ಸಾಧ್ಯ. ಕೆಲಸದ ವೀಸಾಗಳಿಗೂ ಈ ನಿಯಮವನ್ನು ಜಾರಿಗೊಳಿಸಲಾಗಿದ್ದರೂ, ಹಜ್ ಯಾತ್ರೆ ಪೂರ್ಣಗೊಳ್ಳುವವರೆಗೆ ಸಡಿಲಿಕೆ ಇರಬಹುದೆಂದು ಅಂದಾಜಿಸಲಾಗಿದೆ.
ವೀಸಾ ಸ್ಟಾಂಪಿಂಗ್ಗಾಗಿ ಸೌದಿ ಅರೇಬಿಯಾದ ವಿದೇಶಾಂಗ ಸಚಿವಾಲಯದ ವೆಬ್ಸೈಟ್ನಲ್ಲಿ ನೋಂದಣಿ ಸೇರಿದಂತೆ ಎಲ್ಲಾ ಸೇವೆಗಳನ್ನು ವಿಎಫ್ಎಸ್ ಕೇಂದ್ರಗಳ ಮೂಲಕವೇ ಮಾಡಬೇಕಾಗಿದೆ.
ಕೇರಳದ ಕೊಚ್ಚಿಯಲ್ಲಿನ ಕೇಂದ್ರ ಸೇರಿದಂತೆ ದೇಶದಾದ್ಯಂತ ವೀಸಾ ಸೇವೆಗಳಿಗಾಗಿ ಒಂಬತ್ತು ಕೇಂದ್ರಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ. ಅಪಾಯಿಂಟ್ಮೆಂಟ್ ಪಡೆದು, ದಾಖಲೆಗಳನ್ನು ಪ್ರಸ್ತುತಪಡಿಸಿ,ಬಯೋಮೆಟ್ರಿಕ್ಸ್ ಸೇರಿದಂತೆ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿದರೆ ಮಾತ್ರ ವೀಸಾ ಸ್ಟಾಂಪಿಂಗ್ ಸಾಧ್ಯ.
ಹೆಚ್ಚು ವಲಸಿಗರಿರುವ ಕೇರಳದಂತಹ ರಾಜ್ಯಗಳಲ್ಲಿ ಒಂದೇ VFS ಕೇಂದ್ರಕ್ಕೆ ಸರಿಹೊಂದಿಸಲು ಸಾಧ್ಯವಾಗದಷ್ಟು ಅರ್ಜಿದಾರರ ಸಂಖ್ಯೆ ಇರುವುದರಿಂದ, ಅಪಾಯಿಂಟ್ಮೆಂಟ್ ಲಭಿಸಲು ವಿಳಂಬವಾಗುತ್ತಿದೆ.
ತಿರುವನಂತಪುರದಿಂದ ಕಾಸರಗೋಡಿನವರೆಗಿನ ಜನರು ಸೌದಿ ವೀಸಾ ಸ್ಟಾಂಪಿಂಗ್ ಪ್ರಕ್ರಿಯೆಗಳಿಗೆ ಕೊಚ್ಚಿಯನ್ನು ಅವಲಂಬಿಸುವುದು ಕಷ್ಟಕರವಾಗಿದೆ. ಈ ಪರಿಸ್ಥಿತಿಯಲ್ಲಿ ಕೊಚ್ಚಿಯ ಹೊರತಾಗಿ ಹೆಚ್ಚು ಸೌದಿ ಅನಿವಾಸಿಗಳಿರುವ ಮಲಬಾರ್ ನಲ್ಲೂ ವಿಎಫ್ ಎಸ್ ಕೇಂದ್ರ ಆರಂಭಿಸಬೇಕು ಎಂದು ಕಾಂತಪುರಂ ಉಸ್ತಾದ್ ಪತ್ರದಲ್ಲಿ ಆಗ್ರಹಿಸಿದ್ದಾರೆ
















ಇನ್ನಷ್ಟು ಸುದ್ದಿಗಳು
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್