✍️ಅಶ್ರಫ್ ಸಅದಿ ಮಲ್ಲೂರು
(ವರ್ಕಿಂಗ್ ಕನ್ವೀನರ್: SჄS-30 ನಿರ್ವಹಣಾ ಸಮಿತಿ)
ನಾಳೆ (ಜ.24) ಶಿವಮೊಗ್ಗ ಫಲಕ್ ಪ್ಯಾಲೇಸ್ನಲ್ಲಿ ನಡೆಯುವ SჄS ನ ಮೂವತ್ತನೇ ವರ್ಷಾಚರಣೆಯ ಉಧ್ಘಾಟನಾ ವೇದಿಕೆಯಲ್ಲಿ ಪ್ರಥಮ “ಡಾ. ಎಸ್.ಅಬ್ದುಲ್ ರಹ್ಮಾನ್ ಇಂಜಿನಿಯರ್ ಅವಾರ್ಡ್”ಅನ್ನು ಖ್ಯಾತ ಉದ್ಯಮಿ, ಧಾರ್ಮಿಕ ಮುಂದಾಳು ಸಾಗರ ಮುಹಮ್ಮದ್ ಹಾಜಿ ಅವರಿಗೆ ಪ್ರದಾನ ಮಾಡಲಾಗುವುದು.

ಸಾಗರ್ ಮುಹಮ್ಮದ್ ಹಾಜಿ
ಈ ಹೆಸರು ಕೇಳದ ಮುಸ್ಲಿಮರು ಕನ್ನಡ ನಾಡಿನಲ್ಲಿ ವಿರಳ. ಹುಟ್ಟೂರು ಮಂಗಳೂರು ಆದರೂ ಉದ್ಯಮವನ್ನು ವಿವಿಧ ಕಡೆಗಳಿಗೆ ಹರಡಿ ಶಿವಮೊಗ್ಗ ಜಿಲ್ಲೆಯ ಸಾಗರದ ಹೆಸರಿನಲ್ಲಿ ಪ್ರಸಿದ್ಧರಾದವರು. ಉದ್ಯಮದ ಜೊತೆ ಧಾರ್ಮಿಕ ಮತ್ತು ಸಾಮಾಜಿಕ ಸೇವೆಯಿಂದ ಜನಪ್ರಿಯರಾದರು.
ಉದಾರ ಮನಸ್ಸಿನಿಂದ ಪ್ರಚಾರದ ಬಯಕೆ ಇಲ್ಲದೆ ಬಲಗೈ ಕೊಟ್ಟರೆ ಎಡಗೈ ತಿಳಿಯದಂತೆ ಕೊಡುವ ಕೊಡುಗೈ ದಾನಿ. ಸಿದ್ಧಾಂತದಲ್ಲಿ ಅಪ್ಪಟ ಸುನ್ನಿ. ಆ ವಿಷಯದಲ್ಲಿ ಯಾವತ್ತಿಗೂ ಯಾರೊಂದಿಗೂ ರಾಜಿ ಇಲ್ಲದ ವ್ಯಕ್ತಿ. ಸುನ್ನೀ ಉಲಮಾ ಸಾದಾತುಗಳೆಂದರೆ ಅತೀವ ಪ್ರೀತಿ, ಗೌರವ. ತನ್ನ ಮಕ್ಕಳಲ್ಲಿ ಒಬ್ಬನನ್ನು ಆಲಿಂ ಮಾಡಲು ಮುಂದಾಗುವ ಮೂಲಕ ತನ್ನ ಉಲಮಾ ಗೌರವವನ್ನು ಪ್ರಾಯೋಗಿಕವಾಗಿಯೂ ತೋರಿಸಿಕೊಟ್ಟಿದ್ದಾರೆ. ಎಷ್ಟೇ ಒತ್ತಡಗಳಿದ್ದರೂ ನಮಾಜಿನ ಸಮಯವಾದಾಗ ಜಮಾಅತ್ ನಲ್ಲಿ ಸೇರಿಕೊಂಡೇ ನಿರ್ವಹಿಸಲು ಅವರು ತೋರುವ ಉತ್ಸಾಹ ಅವರ ದೀನೀ ಪ್ರಜ್ಞೆಗೊಂದು ಸಾಕ್ಷಿ.
ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘದ ಪ್ರಥಮ ಪ್ರಧಾನ ಕಾರ್ಯದರ್ಶಿ ಡಾ. ಪ್ರೊಫೆಸರ್ ಎಸ್ ಅಬ್ದುಲ್ ರಹ್ಮಾನ್ ಇಂಜಿನಿಯರ್ ಅವರ ಹೆಸರಲ್ಲಿ ಎಸ್ವೈಎಸ್ ನೀಡುತ್ತಿರುವ ಪ್ರಥಮ ಪುರಸ್ಕಾರಕ್ಕೆ ಸಾಗರ್ ಮುಹಮ್ಮದ್ ಹಾಜಿ ಇವರನ್ನು ಆರಿಸಿರುವುದು ಅತ್ಯಂತ ಅರ್ಹ ಸಂಗತಿ. ಅಲ್ಲಾಹು ಅವರನ್ನು ಇನ್ನಷ್ಟು ಎತ್ತರಕ್ಕೇರಿಸಲಿ ಎಂದು ಪ್ರಾರ್ಥಿಸುತ್ತೇನೆ.
















ಇನ್ನಷ್ಟು ಸುದ್ದಿಗಳು
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಗುಡ್ ನ್ಯೂಸ್: 20 ಕಿ.ಮೀ ವ್ಯಾಪ್ತಿಯವರಿಗೆ ಡಿಜಿಟಲ್ ಪಾಸ್ ಸೌಲಭ್ಯ!
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ಗೆ ಭರ್ಜರಿ ಗೆಲುವು- ಆಡಳಿತದ ಹಾದಿಗೆ ಸಿಕ್ಕ ಮುದ್ರೆ ಎಂದ ಸಿಎಂ ಡಿ.ಕೆ. ಶಿವಕುಮಾರ್
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
‘ಗಲ್ಫ್ ಪ್ರದೇಶದ ಸಂಘರ್ಷಗಳನ್ನು ಭಾರತಕ್ಕೆ ನಿರ್ಲಕ್ಷಿಸಲು ಸಾಧ್ಯವಿಲ್ಲ’ – ಭಾರತೀಯ ರಾಯಭಾರಿ ಡಾ. ಸುಹೈಲ್ ಅಜಾಝ್ ಖಾನ್
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ: ‘E-GEN ಸ್ಕಾಲರ್ಶಿಪ್’ ಗೆ ಅಧಿಕೃತ ಚಾಲನೆ
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?