ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ SSF ಎಲಿಮಲೆ ಶಾಖೆ ಇದರ ವಾರ್ಷಿಕ ಕೌನ್ಸಿಲ್ ಜನವರಿ 21ರಂದು ಶಾಖಾಧ್ಯಕ್ಷರಾದ ನಾಸಿರ್ ಎಲಿಮಲೆರವರ ಅಧ್ಯಕ್ಷತೆಯಲ್ಲಿ ಎಲಿಮಲೆ ಸುನ್ನೀ ಸೆಂಟರ್ ನಲ್ಲಿ ನಡೆಯಿತು. SYS ಎಲಿಮಲೆ ಬ್ರಾಂಚ್ ಪ್ರ.ಕಾರ್ಯದರ್ಶಿ ಮಹ್ಮೂದ್ ಮುಸ್ಲಿಯಾರರ ದುಆ ದೊಂದಿಗೆ ಚಾಲನೆಗೊಂಡ ಸಭೆಯನ್ನು SYS ಎಲಿಮಲೆ ಬ್ರಾಂಚ್ ಕಾರ್ಯದರ್ಶಿ ಸೂಫಿ ಎಲಿಮಲೆ ಉದ್ಘಾಟಿಸಿದರು. ಜಾಲ್ಸೂರು ಸೆಕ್ಟರ್ ಅಧ್ಯಕ್ಷರಾದ ಸ್ವಾಲಿಹ್ ಹನೀಫಿ ಸುಣ್ಣ ಮೂಲೆಸಂಘಟನಾ ತರಬೇತಿ ನಡೆಸಿದರು. ಡಿವಿಶನ್ ಕಾರ್ಯದರ್ಶಿ ಸುಬಾಹುದ್ದೀನ್ ಹಿಮಮಿ ಸಖಾಫಿ ಸಂದೇಶ ಭಾಷಣ ನೆರವೇರಿಸಿ ನೂತನ ಸಮಿತಿ ರಚನೆಗೆ ನೇತೃತ್ವ ನೀಡಿದರು.
ಅಧ್ಯಕ್ಷರಾಗಿ : ಸಾಬಿತ್ ಪಾಣಾಜೆ, ಪ್ರ.ಕಾರ್ಯದರ್ಶಿ ಸಿನಾನ್ ವೈ.ಎಂ ಕೋಶಾಧಿಕಾರಿ : ಆಸಿಫ್ ಕೆ.ಎ
ಕಾರ್ಯದರ್ಶಿಗಳಾಗಿ ಉಮರ್ ಹನೀಫಿ, ಫಾರಿಸ್ ಹಿಮಮಿ, ರವೂಫ್ ಕಲ್ಲು ಪಣೆ, ಮಿರ್ಶಾದ್ ವೈ.ಹೆಚ್, ಶಮೀರ್ ಜಿ. ಎ, ಫಾಯಿಝ್ ಪಾಣಾಜೆ, ಅಬ್ದುಲ್ ಖಾದರ್ ಜೀರ್ಮುಕ್ಕಿ, ಮುಂಝಿರ್.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜುನೈದ್ ಸಖಾಫಿ, ಝಕರಿಯ ಸಅದಿ, ನಿಯಾಝ್ ಎಲಿಮಲೆ, ಸಿದ್ದೀಖ್ ಎಲಿಮಲೆ, ನಾಸಿರ್ ಎಲಿಮಲೆ, ಆರಿಸ್ ಕೆ.ಎ ಆಯ್ಕೆಯಾದರು.
SYS ಎಲಿಮಲೆ ಬ್ರಾಂಚ್ ಅಧ್ಯಕ್ಷರು ಅಬ್ದುಲ್ ಖಾದರ್ ಪಾಣಾಜೆ, ಕೋಶಾಧಿಕಾರಿ ಅಬ್ದುಲ್ ಖಾದರ್ ಅತ್ತಿಮರಡ್ಕ, ಖಲಂದರ್ ಜೀರ್ಮುಕ್ಕಿ, ಇಕ್ಬಾಲ್ ಟಿ.ವೈ ಉಪಸ್ಥಿತರಿದ್ದರು.
ಸಾಬಿತ್ ಪಾಣಾಜೆ ಸ್ವಾಗತಿಸಿ ನೂತನ ಪ್ರ. ಕಾರ್ಯದರ್ಶಿ ಸಿನಾನ್ ವೈ.ಎಂ ವಂದಿಸಿದರು.