ಜಿದ್ದಾ| ಸೌದಿ ಅರೇಬಿಯಾ ಅನುಮತಿ ನೀಡಿದ್ದರೂ, ಭಾರತದಿಂದ ಸೌದಿ ಅರೇಬಿಯಾಗೆ ನೇರ ವಿಮಾನವನ್ನು ಅನುಮತಿಸದ ಕೇಂದ್ರದ ಮೋದಿ ಸರ್ಕಾರದ ನಿಲುವು ಖಂಡನೀಯವಾಗಿದೆ ಎಂದು ICF ಸೌದಿ ರಾಷ್ಟ್ರೀಯ ಸಮಿತಿ ಹೇಳಿದೆ.
ಕೋವಿಡ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸ್ಥಗಿತಗೊಂಡಿದ್ದ ವಿಮಾನ ಸೇವೆಗಳನ್ನು ಡಿಸೆಂಬರ್ 1 ರಿಂದ ಪುನರಾರಂಭಿಸಲು ಸೌದಿ ಸರಕಾರ ನಿರ್ಧರಿಸಿದೆ. ವರ್ಷಗಳಿಂದ ಕಂಗಾಲಾಗಿದ್ದ ಸೌದಿ ವಲಸಿಗರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಆದರೆ GCC ಯಲ್ಲಿ ಸೌದಿ ಅರೇಬಿಯಾವನ್ನು ಹೊರತುಪಡಿಸಿ ಎಲ್ಲಾ ದೇಶಗಳು ಸಹಿತ 99 ದೇಶಗಳ ಜನರಿಗೆ ಕ್ವಾರಂಟೈನ್ ಕಾರ್ಯವಿಧಾನಗಳ ಮೇಲೆ ರಿಯಾಯಿತಿಗಳನ್ನು ನೀಡಿರುವ ಮೋದಿ ಸರ್ಕಾರವು, ಸೌದಿಯಿಂದ ಆಗಮಿಸುವವರಿಗೆ ಕ್ವಾರಂಟೈನ್ಗೆ ಬದ್ಧವಾಗಿರುವಂತೆ ಕೇಳುತ್ತಿದೆ. ಇದು ಯಾವುದೋ ಹಿಡನ್ ಅಜೆಂಡಾಗಳ ಭಾಗವಾಗಿದೆ ಎಂಬ ಅನುಮಾನವಿದೆ ಎಂದು ICF ಸೌದಿ ರಾಷ್ಟ್ರೀಯ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ವಲಸಿಗ ಸಮುದಾಯ ಪದೇ ಪದೇ ವಿನಂತಿಸಿದರೂ, ಸೌದಿ ಅರೇಬಿಯಾದೊಂದಿಗೆ ಏರ್ ಬಬಲ್ ಒಪ್ಪಂದಕ್ಕೆ ಪ್ರವೇಶಿಸಲು ಮೋದಿ ಸರ್ಕಾರಕ್ಕೆ ಇಷ್ಟವಿರಲಿಲ್ಲ.
ತನ್ನ ದೇಶದಲ್ಲಿನ ಸ್ವಂತ ನಾಗರಿಕರಿಗೆ ಆಹಾರ ಮತ್ತು ಉದ್ಯೋಗವನ್ನು ನೀಡಲು ಈ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲವೆಂದು ಮಾತ್ರವಲ್ಲ, ವಿದೇಶದಲ್ಲಿ ಕೆಲಸ ಮಾಡುವವರೊಂದಿಗೆ ಮಾನವೀಯತೆಯನ್ನೂ ತೋರಿಸುತ್ತಿಲ್ಲ ಎಂದು ICF, ಮೋದಿ ಸರ್ಕಾರವನ್ನು ದೂಷಿಸಿದೆ.
ಸಯ್ಯಿದ್ ಹಬೀಬ್ ಅಲ್ ಬುಖಾರಿ ಅಧ್ಯಕ್ಷತೆ ವಹಿಸಿದ್ದರು. ಬಶೀರ್ ಎರ್ನಾಕುಳಂ, ನಿಝಾರ್ ಕಾಟ್ಟಿಲ್, ಬಶೀರ್ ಉಳ್ಳನಂ, ಸಲೀಂ ಪಾಲಚ್ಚಿರ, ಝುಬೈರ್ ಸಖಾಫಿ, ಉಮರ್ ಸಖಾಫಿ ಮೂರ್ಕನಾಡ್, ಹುಸನಲಿ ಕಡಲುಂಡಿ ಮುಂತಾದವರು ಭಾಗವಹಿಸಿದ್ದರು. ಸಿರಾಜ್ ಕುಟ್ಯಾಡಿ ಸ್ವಾಗತಿಸಿ, ಮುಹಮ್ಮದಲಿ ವೇಂಗರ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ