janadhvani

Kannada Online News Paper

ದಾರುಲ್ ಹಿಕ್ಮ ಎಜುಕೇಷನ್ ಸೆಂಟರ್ ಬೆಳ್ಳಾರೆ- ನೂತನ ಅಧ್ಯಕ್ಷರಾಗಿ ಕಾಜೂರ್ ತಂಙಳ್ ಆಯ್ಕೆ

ಬೆಳ್ಳಾರೆ : ಸುಳ್ಯ ತಾಲೂಕು ಬೆಳ್ಳಾರೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಸಮಾಜದ ಎಲ್ಲಾ ವರ್ಗದ ಜನತೆಗೆ ದೀನಿ ಮತ್ತು ಬೌದ್ಧಿಕ ವಿದ್ಯೆಯನ್ನು

ನೀಡುತ್ತಿರುವ ದಾರುಲ್ ಹಿಕ್ಮ ಎಜುಕೇಷನ್ ಸೆಂಟರ್ ಬೆಳ್ಳಾರೆ ಇದರ ವಾರ್ಷಿಕ ಮಹಾಸಭೆಯು ದಿನಾಂಕ : 28-08-2021
ರಂದು ಸಂಸ್ಥೆಯಲ್ಲಿ ಕಾಜೂರ್ ತಂಗಳವರ ಅದ್ಯಕ್ಷತೆಯಲ್ಲಿ ಜರುಗಿತು .

ನೂತನ ಸಮಿತಿ ಅಧ್ಯಕ್ಷರಾಗಿ ಸಯ್ಯದ್ ಜಮಾಲುಲೈಲಿ ತಂಗಳ್ ( ಕಾಜೂರ್ ತಂಗಳ್ ), ಕಾರ್ಯಾಧ್ಯಕ್ಷರಾಗಿ ಹಸನ್ ಸಖಾಫಿ ಬೆಳ್ಳಾರೆ , ಪ್ರಧಾನ ಕಾರ್ಯದರ್ಶಿಯಾಗಿ ಉಮರ್ ಸಖಾಫಿ ತಲಕ್ಕಿ, ಕೋಶಾಧಿಕಾರಿಯಾಗಿ ಹಮೀದ್ ಅಲ್ಫಾ ಬೆಳ್ಳಾರೆ, ಸಂಚಾಲಕರಾಗಿ ಸತ್ತಾರ್ ಸಖಾಫಿ ಬೆಳ್ಳಾರೆಯನ್ನು ಆಯ್ಕೆ ಮಾಡಲಾಯಿತು.

ಕಮಿಟಿಯ ಸದಸ್ಯರಾಗಿ
ಮುಸ್ತಫ ಮಾಸ್ತಿಕಟ್ಟೆ
ಮುಹಮ್ಮದ್ ಹಾಜಿ ಬಿಸ್ಮಿಲ್ಲಾ
ಹನೀಫ್ ಮುಸ್ಲಿಯಾರ್ ಪೆರುವಾಜೆ
ಸತ್ತಾರ್ ಸಖಾಫಿ ಪುತ್ತೂರು
ಹನೀಫ್ ಸಖಾಫಿ ಬೆಳ್ಳಾರೆ
ಹಮೀದ್ ಸಖಾಫಿ ಬೆಳ್ಳಾರೆ
ಅವರನ್ನು ಆಯ್ಕೆ ಮಾಡಲಾಯಿತು .

ಸಭೆಯಲ್ಲಿ ದಾರುಲ್ ಹಿಕ್ಮ GCC ಸಮಿತಿ ಅಧ್ಯಕ್ಷರಾದ ಯೂಸುಫ್ ಹಾಜಿ ಚೆನ್ನಾರ್ ಉಪಸ್ಥಿತರಿದ್ದರು.