ಮದೀನಾ: ಸೌದಿ ಅರೇಬಿಯಾದಲ್ಲಿ ಕೋವಿಡ್ ಹರಡುವಿಕೆಯಿಂದಾಗಿ, ಈ ರಂಜಾನ್ನಲ್ಲೂ ಮದೀನಾದಲ್ಲಿರುವ ಮಸ್ಜಿದುನ್ನಬವಿಯಲ್ಲಿ ಕೋವಿಡ್ ನಿರ್ಬಂಧ ಹೇರಲಾಗುವುದು. ಈ ಬಾರಿಯೂ ಇಅ್ ತಿಕಾಫ್ಗೆ ಕುಳಿತುಕೊಳ್ಳಲು ಅವಕಾಶವಿರುವುದಿಲ್ಲ. ರಂಜಾನ್ನಲ್ಲಿನ ರಾತ್ರಿ ಪ್ರಾರ್ಥನೆಯನ್ನು ಕಡಿಮೆಗೊಳಿಸಲಾಗುವುದು. ಇಫ್ತಾರ್ ತಿಂಡಿಗಳನ್ನು ಸೀಮಿತಗೊಳಿಸಲು ನಿರ್ಧರಿಸಲಾಗಿದೆ.
ಈ ಬಾರಿ ರಂಜಾನ್ ಸಮಯದಲ್ಲಿ ಮಸ್ಜಿದುನ್ನಬವಿಯಲ್ಲಿ ಇಫ್ತಾರ್ ಭೋಜನವನ್ನು ಖರ್ಜೂರ ಮತ್ತು ನೀರಿಗೆ ಸೀಮಿತಗೊಳಿಸಲಾಗಿದೆ ಎಂದು ಮಸ್ಜಿದುನ್ನಬವಿ ಕಚೇರಿ ತಿಳಿಸಿದೆ. ವೈಯಕ್ತಿಕ ಇಫ್ತಾರ್ಗಳು ಕೆಲವು ಷರತ್ತುಗಳು ಮತ್ತು ಸೂಚನೆಗಳಿಗೆ ಒಳಪಟ್ಟಿರುತ್ತವೆ. ಮಸ್ಜಿದುನ್ನಬವಿ ಕಚೇರಿ ಸಂಬಂಧಪಟ್ಟ ಇಲಾಖೆಗಳ ಸಹಯೋಗದೊಂದಿಗೆ ಖರ್ಜೂರ ಮತ್ತು ನೀರನ್ನು ಒದಗಿಸಲಿದೆ.
ಹೊರಗಿನಿಂದ ಮಸೀದಿ ಅಥವಾ ಅಂಗಳಗಳಗಳಿಗೆ ಯಾವುದೇ ಆಹಾರ ಅಥವಾ ಪಾನೀಯವನ್ನು ತರಲು ಅನುಮತಿಸಲಾಗುವುದಿಲ್ಲ. ಒಳ ಮತ್ತು ಹೊರ ಅಂಗಳದಲ್ಲಿರುವ ಸಂದರ್ಶಕರು ಮತ್ತು ಆರಾಧಕರಿಗೆ ಸಹರಿ ಭೋಜನವನ್ನು ನೀಡುವುದನ್ನು ನಿಷೇಧಿಸಲಾಗಿದೆ.
ತಾರವೀಹ್ ಪ್ರಾರ್ಥನೆಯ ರಕ್ಅತ್ಗಳನ್ನು ಸಂಕ್ಷಿಪ್ತಗೊಳಿಸಲಾಗುವುದು. ತರಾವೀಹ್ ಪ್ರಾರ್ಥನೆಯ ನಂತರ ಅರ್ಧ ಘಂಟೆಯೊಳಗೆ ಮಸೀದಿಯನ್ನು ಮುಚ್ಚಲಾಗುವುದು. ಸಂದರ್ಶಕರು ಮತ್ತು ಆರಾಧಕರ ಆರೋಗ್ಯ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ವರ್ಷದ ರಂಜಾನ್ ಕೊನೆಯ ಹತ್ತು ದಿನಗಳಲ್ಲಿ ಇಟಿಕಾಫ್ ಅನ್ನು ಮಸೀದಿಯೊಳಗೆ ಅನುಮತಿಸದಿರಲು ನಿರ್ಧರಿಸಲಾಗಿದೆ ಎಂದು ಮಸ್ಜಿದುನ್ನಬವಿ ಕಚೇರಿ ತಿಳಿಸಿದೆ.
















ಇನ್ನಷ್ಟು ಸುದ್ದಿಗಳು
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
SჄS ಬೆಳ್ತಂಗಡಿ ಝೋನ್: ಸಾಂತ್ವನ ಫಂಡ್ ಹಸ್ತಾಂತರ
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮರು ಅರ್ಜಿ ಕಡ್ಡಾಯ- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್