janadhvani

Kannada Online News Paper

ಫೆಬ್ರವರಿ 18 ಗುರುವಾರ ಮಿತ್ತೂರಿನಲ್ಲಿ ಬೃಹತ್ ಅಜ್ಮೀರ್ ಮೌಲಿದ್ ಮತ್ತು ಏರ್ವಾಡಿ ಶುಹದಾ ನೇರ್ಚೆ

ಮಾಣಿ : ದಾರುಲ್ ಇರ್ಶಾದ್ ಎಜ್ಯುಕೇಶನಲ್ ಸೆಂಟರ್ ಮಾಣಿ ಇದರ ಅಧೀನದಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಬೃಹತ್ ಅಜ್ಮೀರ್ ಮೌಲಿದ್ ಏರ್ವಾಡಿ ಶುಹದಾ ನೇರ್ಚೆ ಮತ್ತು ಖತಮುಲ್ ಕುರ್‌ಆನ್ ಕಾರ್ಯಕ್ರಮವು ಇದೇ ಫೆಬ್ರವರಿ 18 ಗುರುವಾರದಂದು ಮಿತ್ತೂರಿನಲ್ಲಿರುವ ಕೆಜಿಎನ್ ಕ್ಯಾಂಪಸ್ ನಲ್ಲಿ ನಡೆಯಲಿದೆ.

ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನದ ವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಬದ್ರುಸ್ಸಾದಾತ್ ಕಡಲುಂಡಿ ತಂಙಳ್,ಖಾಝಿ ಕೂರತ್ ತಂಙಳ್,ಸ್ವಲಾಹುದ್ದೀನ್ ತಂಙಳ್ ಪೆರುಮುಗಂ,ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಸಹಿತ ಹಲವಾರು ಉಲಮಾ ಉಮರಾ ನೇತಾರರು,ಸಾಮಾಜಿಕ ರಾಜಕೀಯ ನಾಯಕರುಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

error: Content is protected !! Not allowed copy content from janadhvani.com